ಆ್ಯಪ್ನಗರ

ಖಾಸಗಿ ಆಸ್ಪತ್ರೆಗಳಿಂದ ದುಬಾರಿ ಶುಲ್ಕ: ಚಿಕಿತ್ಸೆ ಕೊಡದಿದ್ರೂ ಸಾವಿರಗಟ್ಟಲೆ ಸುಲಿಗೆ!

ಕೊರೊನಾ ಸೋಂಕು ವಿಪರೀತ ಹರಡುತ್ತಿದ್ದು, ಚಿಕಿತ್ಸೆಗೆ ರೋಗಿಗಳು ಪರದಾಡುತ್ತಿದ್ದಾರೆ. ಈ ಅವಕಾಶವನ್ನು ಲಾಭ ಮಾಡಿಕೊಳ್ಳಲು ಹೊರಟಿರುವ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ.

Vijaya Karnataka Web 6 Jul 2020, 11:15 pm
ಬೆಂಗಳೂರು: ಕೊರೊನಾ ಸೋಂಕು ವಿಪರೀತ ಹರಡುತ್ತಿದ್ದು, ಚಿಕಿತ್ಸೆಗೆ ರೋಗಿಗಳು ಪರದಾಡುತ್ತಿದ್ದಾರೆ. ಈ ಅವಕಾಶವನ್ನು ಲಾಭ ಮಾಡಿಕೊಳ್ಳಲು ಹೊರಟಿರುವ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ.
Vijaya Karnataka Web ventilator 2


ಯಾವ ಚಿಕಿತ್ಸೆಗೆ ಎಷ್ಟು ಶುಲ್ಕ ಎಂದು ಸರಕಾರ ನಿಗದಿಪಡಿಸಿದೆ. ಈ ದರವೇ ದುಬಾರಿ ಎಂದು ಜನಸಾಮಾನ್ಯರು ವಿರೋಧಿಸಿದ್ದಾರೆ. ಈ ಸಂಬಂಧ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ನಲ್ಲಿ ಪಿಐಎಲ್‌ ಕೂಡ ಹಾಕಿದೆ. ಇದರ ಮಧ್ಯೆಯೂ ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್‌ ಟೆಸ್ಟ್‌ , ಹಾಸಿಗೆ ದರ ಹಾಗೂ ಚಿಕಿತ್ಸೆ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿ ಲಾಭ ಮಾಡಿಕೊಳ್ಳುತ್ತಿವೆ. ಈ ಸಂಬಂಧ ತೊಂದರೆಗೊಳಗಾದ ರೋಗಿಗಳಿಂದ ವ್ಯಾಪಕ ದೂರುಗಳು ಬರುತ್ತಿವೆ.

ದೇವನಹಳ್ಳಿ ಬಳಿ ಇರುವ ಆಕಾಶ್‌ ಆಸ್ಪತ್ರೆಯು ಯಾವುದೇ ಚಿಕಿತ್ಸೆ ನೀಡದಿದ್ದರೂ ಸ್ಪೆಷಲ್‌ ಬೆಡ್‌ಗೆ 15 ಸಾವಿರ ರೂ. ಹಾಗೂ ನಾಲ್ಕು ಬೆಡ್‌ ಇರುವ ಒಂದು ಕೊಠಡಿಗೆ ಪ್ರತಿ ರೋಗಿಗೆ 12,500 ರೂ. ದರ ವಸೂಲಿ ಮಾಡುತ್ತಿದೆ. ಆ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲ. ಮೂರ್ನಾಲ್ಕು ದಿನಗಳಾದರೂ ಶೌಚಾಲಯ ಸ್ವಚ್ಛಗೊಳಿಸುವುದಿಲ್ಲ. ವೈದ್ಯರು ಬಂದು ರೋಗಿಗಳ ತಪಾಸಣೆ ಮಾಡುವುದಿಲ್ಲ. ಅರೆ ವೈದ್ಯ ಸಿಬ್ಬಂದಿ ಕೂಡ ರೋಗಿಗಳ ಆರೋಗ್ಯ ಹಾಗೂ ಬೇಕು ಬೇಡಗಳನ್ನು ವಿಚಾರಿಸುವುದಿಲ್ಲ. ಆದರೂ ದರ ಮಾತ್ರ ದುಬಾರಿ ಎಂದು ರೋಗಿಗಳು ಆರೋಪಿಸಿದ್ದಾರೆ.

ಕಿದ್ವಾಯಿಯಲ್ಲಿ10 ಸಿಬ್ಬಂದಿ, 20 ರೋಗಿಗಳಿಗೆ ಕೊರೊನಾ: ಜು. 9ರವರೆಗೆ ಶಸ್ತ್ರ ಚಿಕಿತ್ಸೆ, ಒಪಿಡಿ ಸ್ಥಗಿತ!

ಚಿಕಿತ್ಸೆ ಕೊಡದೆ ನಿರಾಕರಿಸುವುದರ ಮಧ್ಯೆ ಚಿಕಿತ್ಸೆಗೊಳಗಾದ ರೋಗಿಗಳಿಗೆ ವಿಪರೀತ ಬಿಲ್‌ ಮಾಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್‌ ಸಿಕ್ಕಿಲ್ಲಎಂದು ಖಾಸಗಿ ಆಸ್ಪತ್ರೆಗಳಿಗೆ ಹೋದ ರೋಗಿಗಳು ಪ್ರತಿ ದಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಕೊರೊನಾ ಪರೀಕ್ಷೆಗೆ ಅಧಿಕ ಶುಲ್ಕ: ಅಪೊಲೊ ಆಸ್ಪತ್ರೆಗೆ ಕೇಂದ್ರದ ನೋಟಿಸ್‌!

ಆರೋಗ್ಯ ವಿಮೆ ಇದ್ದರೂ ಹೆಚ್ಚುವರಿ ಬಿಲ್‌ ಪಾವತಿಸಬೇಕಾಗಿದೆ. ಆರೋಗ್ಯ ವಿಮೆ ಇದೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಬಿಲ್‌ ಬಂದಾಗ ಶಾಕ್‌ ಆಗುತ್ತಿದೆ. ಮಾಮೂಲಿ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವುದರಿಂದ ಜನಸಾಮಾನ್ಯರು ತೊಂದರೆಗೊಳಗಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ದುಬಾರಿ ದರಕ್ಕೆ ಸರಕಾರ ನಿಯಂತ್ರಣ ಹೇರದಿರುವುದು ಸಮಸ್ಯೆ ಹಾಗೆಯೇ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ