ಆ್ಯಪ್ನಗರ

ಯುವ ಕಾಂಗ್ರೆಸ್‌ನಲ್ಲಿ ಹಲ್ಲೆಯ ಗುಲ್ಲು: ನಲಪಾಡ್‌ ವಿರುದ್ಧ ಕೇಳಿಬಂತು ಆರೋಪ

​​ಬುಧವಾರ ನಗರದ ಜೆ.ಡಬ್ಲ್ಯೂ. ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ನಲಪಾಡ್‌ ಸಭೆ ಕರೆದಿದ್ದರು. ರಾತ್ರಿ ಯಲಹಂಕ ಬಳಿಯ ಕ್ಲಬ್‌ನಲ್ಲಿ ಭೋಜನ ವ್ಯವಸ್ಥೆಯಾಗಿತ್ತು. ಅಲ್ಲಿ ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್‌ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

Vijaya Karnataka 20 Jan 2022, 11:40 pm
ಬೆಂಗಳೂರು: ಕಾಂಗ್ರೆಸ್‌ನ ಯುವ ಮುಖಂಡ ಮೊಹಮ್ಮದ್‌ ನಲಪಾಡ್‌ ಹಾಗೂ ಬೆಂಬಲಿಗರು ಬಳ್ಳಾರಿ ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ.
Vijaya Karnataka Web ಮೊಹಮ್ಮದ್‌ ನಲಪಾಡ್‌
ಮೊಹಮ್ಮದ್‌ ನಲಪಾಡ್‌


ಆದರೆ ಸಿದ್ದು ಹಳ್ಳೇಗೌಡ ಯಾವುದೇ ಹಲ್ಲೆಯಾಗಿಲ್ಲ. ಬಿಜೆಪಿ ಷಡ್ಯಂತ್ರ ನಡೆಸಿ ಸುಳ್ಳು ಸುದ್ದಿ ಹಬ್ಬಿಸಿದೆ ಎಂದು ಹೇಳಿದ್ದರೆ, ನಲಪಾಡ್‌, ''ನನ್ನ ವಿರುದ್ಧ ನಮ್ಮವರೇ ಪಿತೂರಿ ಮಾಡಿರಬಹುದು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸ್ಟಾರ್‌ ರಾಹುಲ್‌ ಜಾಮೀನಿಗೆ ಹಣ ಹೊಂದಿಸಲು ಗಾಂಜಾ ಮಾರಾಟ : ನಾಲ್ವರ ಬಂಧನ

ಬುಧವಾರ ಬೆಂಗಳೂರು ನಗರದ ಜೆ.ಡಬ್ಲ್ಯೂ. ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ನಲಪಾಡ್‌ ಸಭೆ ಕರೆದಿದ್ದರು. ರಾತ್ರಿ ಯಲಹಂಕ ಬಳಿಯ ಕ್ಲಬ್‌ನಲ್ಲಿ ಭೋಜನ ವ್ಯವಸ್ಥೆಯಾಗಿತ್ತು. ಅಲ್ಲಿ ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್‌ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಿದ್ದು ಹಳ್ಳೇಗೌಡ ಅವರೇ ಯುವ ಕಾಂಗ್ರೆಸ್‌ನ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ ಹಾಕಿ, ನಂತರ ಡಿಲೀಟ್‌ ಆಗಿದೆ ಎನ್ನಲಾಗಿದೆ. ಹಲ್ಲೆಆರೋಪ ಸುಳ್ಳು ಈ ಬಗ್ಗೆ ವಿಡಿಯೊ ಸಂದೇಶದಲ್ಲಿ ಸ್ಪಷ್ಟನೆ ನೀಡಿರುವ ಸಿದ್ದು ಹಳ್ಳೇಗೌಡ,''ನಲಪಾಡ್‌ ಅವರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದು ಬಿಜೆಪಿಯವರ ಷಡ್ಯಂತ್ರ. ಯುವ ಕಾಂಗ್ರೆಸ್‌ ಒಂದು ಕುಟುಂಬದಂತಿದ್ದು, ನಮ್ಮಲ್ಲಿಅಂತಹ ಯಾವುದೇ ಘಟನೆ ನಡೆದಿಲ್ಲ''ಎಂದು ಹೇಳಿದ್ದಾರೆ.

ಲಾಕ್‌ಡೌನ್ ಕುರಿತ ಪ್ರತಾಪ್‌ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ ಹೊರಟ ಸಚಿವ ಸುಧಾಕರ್

ನಲಪಾಡ್‌ ಮಾತನಾಡಿ, ''10 ದಿನದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿ ಪದಗ್ರಹಣವಾಗಬೇಕಿದೆ. ಅಧ್ಯಕ್ಷ ಸ್ಥಾನ ತಪ್ಪಿಸಲು ನಮ್ಮವರೇ ಪಿತೂರಿ ಮಾಡಿರಬಹುದು. ನಾನು ಏನೂ ಮಾಡದಿದ್ದರೂ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಬುಧವಾರ ಮಧ್ಯಾಹ್ನ ನಾನೇ ಸಭೆ ಆಯೋಜಿಸಿದ್ದೆ. ರಾತ್ರಿ ಯುವ ಕಾಂಗ್ರೆಸಿನ ಕೆಲವರು ಭೋಜನ ಕೂಟಕ್ಕೆ ಸೇರಿದ್ದರು. ನಾನು 10 ನಿಮಿಷ ಹೋಗಿ ಬಂದೆ. ಬೇಕಿದ್ದರೆ ಅಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಿ'' ಎಂದು ತಿಳಿಸಿದರು.

ಜ.30ರ ಬಳಿಕ ನಲಪಾಡ್‌ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಲಿರುವ ಹಿನ್ನೆಲೆಯಲ್ಲಿ ಬುಧವಾರ ಯಲಹಂಕ ಬಳಿಯ ಕ್ಲಬ್‌ನಲ್ಲಿ ಊಟದ ವ್ಯವಸ್ಥೆಯಾಗಿತ್ತು. ಆ ಸಂದರ್ಭದಲ್ಲಿಸಿದ್ದು ಹಳ್ಳೇಗೌಡ ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಮೊಹಮ್ಮದ್‌ ನಲಪಾಡ್‌ ಹಾಗೂ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದರು ಎಂಬ ಆರೋಪವುಳ್ಳ ಸಂದೇಶ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ