ಆ್ಯಪ್ನಗರ

ಪುರುಷೋತ್ತಮ್ ಕೊಲೆ ಪ್ರಕರಣ: ಆರೋಪಿ ಗಿರೀಶ್ ಪೊಲೀಸ್‌ ವಶಕ್ಕೆ

ನಗರದ ಕಾಮಾಕ್ಷಿಪಾಳ್ಯದಲ್ಲಿ ಕುಡಿತದ ಅಮಲಿನಲ್ಲಿ ಪುರುಷೋತ್ತಮ್ ಎಂಬ ಯುವಕನನ್ನು ಚಾಕುವಿನಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Vijaya Karnataka Web 6 May 2020, 5:15 pm
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದಲ್ಲಿ ಕುಡಿತದ ಅಮಲಿನಲ್ಲಿ ಪುರುಷೋತ್ತಮ್ ಎಂಬ ಯುವಕನನ್ನು ಚಾಕುವಿನಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Vijaya Karnataka Web knife stab


ಗೆಳೆಯ ಗಿರೀಶ್ ನಿಂದಲೇ ಪುರುಷೊತ್ತಮ್ ಹತ್ಯೆಯಾಗಿದ್ದ. ಗಿರೀಶ್ ಮತ್ತು ಪುರುಷೊತ್ತಮ್ ಇಬ್ಬರೂ ಒಂದೇ ಏರಿಯಾದ ಗೆಳೆಯರು. ನಿನ್ನೆ ಬೆಳಗ್ಗೆಯಿಂದ ಇಬ್ಬರು ಒಟ್ಟಿಗೆ ಓಡಾಡಿಕೊಂಡು ಪಾರ್ಟಿ ಮಾಡಿದ್ದಾರೆ.

ಕೊಲೆಯಾದ ಪುರುಷೊತ್ತಮ್ ಮನೆಯಲ್ಲಿಯೇ ಪಾರ್ಟಿ ಮಾಡಲಾಗಿದೆ. ಪಾರ್ಟಿ ಮಾಡುವ ವೇಳೆ ಪುರುಷೋತ್ತಮ್ ಅವರ ಅಣ್ಣನಿಗೆ ಗಿರೀಶ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದೇ ವಿಚಾರವಾಗಿ ಪುರುಷೊತ್ತಮ್ ಮತ್ತು ಆತನ‌ ಅಣ್ಣನಿಗೆ ಗಿರೀಶ್ ಹಲ್ಲೆ ಮಾಡಿದ್ದಾನೆ.

ಕೊರೊನಾ ವೈರಸ್‌ ಚೀನಾದ ಸೃಷ್ಟಿಯೇ..? ಜಾಗತಿಕ ತಜ್ಞರು ಏನಂತಾರೆ..?

ಹಲ್ಲೆ ಮಾಡಿದ ಬಳಿಕ ಸ್ಥಳದಲ್ಲೇ ರಾಜಿಯಾಗಿ ಪುರುಷೊತ್ತಮ್ ಮತ್ತು ಗಿರೀಶ್ ಪಾರ್ಟಿ ಮಾಡಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಆರೋಪಿ ಗಿರೀಶ್ ಪಕ್ಕದ ರಸ್ತೆಯಲ್ಲಿ ನಿಂತಿದ್ದ. ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಮತ್ತೊಬ್ಬ ಗೆಳೆಯನ ಜೊತೆ ಬೈಕಿನಲ್ಲಿ ಪುರುಷೊತ್ತಮ್ ಬಂದಿದ್ದಾನೆ.

ಈ ವೇಳೆ ಬೈಕ್ ಅಡ್ಡಿಗಟ್ಟಿ‌ ಯಾಕೆ ನನಗೆ ಹಲ್ಲೆ ಮಾಡಿದ್ರಿ ಎಂದು ಗಿರೀಶ್ ಪ್ರಶ್ನಿಸಿದ್ದಾನೆ. ಅಯ್ಯೋ ನೀನೆ‌ ಕುಡಿದು ಅವಾಂತರ ಮಾಡಿದ್ದು ಎಂದ ಪುರುಷೊತ್ತಮ್ ಹೇಳಿದ್ದಾನೆ. ಅಷ್ಟರಲ್ಲಿ ಗಿರೀಶ್‌ ಚಾಕು ತೆಗೆದುಕೊಂಡು ಪುರುಷೋತ್ತಮ್ ಎದೆಗೆ ಹಾಗು ಹೊಟ್ಟೆಗೆ ಇರಿದಿದ್ದಾನೆ.

ಸರಕಾರದ ಅಮಾನುಷ ನಿರ್ಧಾರಗಳಿಗೆ ಕಾಂಗ್ರೆಸ್‌ ಬೆಂಬಲವಿಲ್ಲ: ಈಶ್ವರ ಖಂಡ್ರೆ

ಚಾಕುವಿನಿಂದ ಇರಿದು ತಕ್ಷಣ ಸ್ಥಳದಿಂದ ಎಸ್ಕೇಪ್ ಅಗಿದ್ದಾನೆ. ವಿಷಯ ತಿಳಿದ ಕೂಡಲೇ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಗಿರೀಶನನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ