ಕೃಷ್ಣರಾಜಪುರ: ರಾಮಮೂರ್ತಿ ನಗರದ ರೈಲ್ವೆ ಕ್ರಾಸಿಂಗ್ ಬಳಿ ನಿರ್ಮಿಸಿದ ರೈಲ್ವೇ ಮೇಲುರಸ್ತೆಯನ್ನು ಶಾಸಕ ಬಿ ಎ ಬಸವರಾಜ್ ಸೋಮವಾರ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಮೂಲಕ ಈ ಪ್ರದೇಶದಲ್ಲಿ ಉಂಟಾಗುತ್ತಿದ್ದ ಭಾರಿ ಟ್ರಾಫಿಕ್ ಜಾಮ್ಗೆ ಪರಿಹಾರ ದೊರಕಿದೆ.
ಯಶವಂತಪುರದಿಂದ ಕೆಆರ್ಪುರ ರೈಲ್ವೆ ನಿಲ್ದಾಣಕ್ಕೆ ರಾಮಮೂರ್ತಿ ನಗರ ಮಾರ್ಗವಾಗಿ ಹಾದು ಹೋಗಿರುವ ಹಳಿಗಳ ಮೇಲೆ ವಾಹನ ಸಂಚಾರಕ್ಕೆ ಸೇತುವೆ ನಿರ್ಮಿಸುವ ಕಾರ್ಯ ಕಳೆದೊಂದು ವರ್ಷದ ಹಿಂದೆ ಆರಂಭಗೊಂಡಿತ್ತು. ನಿಧಾನವಾಗಿ ಸಾಗಿದ ಕಾಮಗಾರಿ ಇದೀಗ ಮುಕ್ತಾಯಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ದೊರೆತಿದೆ. ಇದು ಈ ಪ್ರದೇಶದ ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.
ಹೊರಮಾವು, ಕೆಆರ್ಪುರ, ಚನ್ನಸಂದ್ರ, ರಾಮಮೂರ್ತಿ ನಗರ ಸೇರಿದಂತೆ ಬೆಂಗಳೂರು ಪೂರ್ವ ತಾಲೂಕಿನ ಹಲವರಿಗೆ ನಗರಕ್ಕೆ ತೆರಳಲು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಇದ್ದ ಏಕೈಕ ಸಂಪರ್ಕ. ಆದರೆ, ರಾಮಮೂರ್ತಿ ನಗರದಲ್ಲಿರುವ ಮೇಲುರಸ್ತೆಯು ಮೇಲ್ಸೇತುವೆ ಕಿರಿದಾಗಿದ್ದು, ವಾಹನ ಸವಾರರಿಗೆ ಅಡಚಣೆಯಾಗುತ್ತಿತ್ತು. ಹೀಗಾಗಿ ರೈಲ್ವೆ ಕ್ರಾಸಿಂಗ್ ಬಳಿ ಮತ್ತೊಂದು ಮೇಲುರಸತೆ ನಿರ್ಮಾಣಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಬಿಡಿಎ ಹಾಗೂ ರೈಲ್ವೇ ಇಲಾಖೆಯು 17 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿಸಿದೆ. ಈ ಮಾರ್ಗವನ್ನು ಮಾ.4ರಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ, ಡಾಂಬರೀಕರಣ ಕಾಮಗಾರಿ ಬಾಕಿಯಿದ್ದ ಆಗಲೇ ಸಂಚಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಡಾಂಬರೀಕರಣ ಪೂರ್ತಿಯಾದ ಕಾರಣ ಶಾಸಕರು ಸಂಚಾರಕ್ಕೆ ಮುಕ್ತಗೊಳಿಸಿದರು.
ಬ್ಲಾಕ್ ಅಧ್ಯಕ್ಷ ಮುನೇಗೌಡ, ಕೃಷ್ಣಮೂರ್ತಿ, ಹಿಟಾಚಿ ಮಂಜು, ಮಧುಗೌಡ ಸೇರಿದಂತೆ ಇತರರಿದ್ದರು.
ಯಶವಂತಪುರದಿಂದ ಕೆಆರ್ಪುರ ರೈಲ್ವೆ ನಿಲ್ದಾಣಕ್ಕೆ ರಾಮಮೂರ್ತಿ ನಗರ ಮಾರ್ಗವಾಗಿ ಹಾದು ಹೋಗಿರುವ ಹಳಿಗಳ ಮೇಲೆ ವಾಹನ ಸಂಚಾರಕ್ಕೆ ಸೇತುವೆ ನಿರ್ಮಿಸುವ ಕಾರ್ಯ ಕಳೆದೊಂದು ವರ್ಷದ ಹಿಂದೆ ಆರಂಭಗೊಂಡಿತ್ತು. ನಿಧಾನವಾಗಿ ಸಾಗಿದ ಕಾಮಗಾರಿ ಇದೀಗ ಮುಕ್ತಾಯಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ದೊರೆತಿದೆ. ಇದು ಈ ಪ್ರದೇಶದ ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.
ಹೊರಮಾವು, ಕೆಆರ್ಪುರ, ಚನ್ನಸಂದ್ರ, ರಾಮಮೂರ್ತಿ ನಗರ ಸೇರಿದಂತೆ ಬೆಂಗಳೂರು ಪೂರ್ವ ತಾಲೂಕಿನ ಹಲವರಿಗೆ ನಗರಕ್ಕೆ ತೆರಳಲು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಇದ್ದ ಏಕೈಕ ಸಂಪರ್ಕ. ಆದರೆ, ರಾಮಮೂರ್ತಿ ನಗರದಲ್ಲಿರುವ ಮೇಲುರಸ್ತೆಯು ಮೇಲ್ಸೇತುವೆ ಕಿರಿದಾಗಿದ್ದು, ವಾಹನ ಸವಾರರಿಗೆ ಅಡಚಣೆಯಾಗುತ್ತಿತ್ತು. ಹೀಗಾಗಿ ರೈಲ್ವೆ ಕ್ರಾಸಿಂಗ್ ಬಳಿ ಮತ್ತೊಂದು ಮೇಲುರಸತೆ ನಿರ್ಮಾಣಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಬಿಡಿಎ ಹಾಗೂ ರೈಲ್ವೇ ಇಲಾಖೆಯು 17 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿಸಿದೆ. ಈ ಮಾರ್ಗವನ್ನು ಮಾ.4ರಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ, ಡಾಂಬರೀಕರಣ ಕಾಮಗಾರಿ ಬಾಕಿಯಿದ್ದ ಆಗಲೇ ಸಂಚಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಡಾಂಬರೀಕರಣ ಪೂರ್ತಿಯಾದ ಕಾರಣ ಶಾಸಕರು ಸಂಚಾರಕ್ಕೆ ಮುಕ್ತಗೊಳಿಸಿದರು.
ಬ್ಲಾಕ್ ಅಧ್ಯಕ್ಷ ಮುನೇಗೌಡ, ಕೃಷ್ಣಮೂರ್ತಿ, ಹಿಟಾಚಿ ಮಂಜು, ಮಧುಗೌಡ ಸೇರಿದಂತೆ ಇತರರಿದ್ದರು.