ಆ್ಯಪ್ನಗರ

ನಗರದಲ್ಲಿ ಇಂದು ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನಲ್ಲಿ ಟ್ರಫ್‌ ಇರುವುದರಿಂದ ಏ.25 ಹಾಗೂ 29 ರಂದು ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Vijaya Karnataka 25 Apr 2019, 5:00 am
ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಟ್ರಫ್‌ ಇರುವುದರಿಂದ ಏ.25 ಹಾಗೂ 29 ರಂದು ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Vijaya Karnataka Web rain bangalore2


ವಾರದ ಹಿಂದಷ್ಟೆ ನಗರದಲ್ಲಿ ಭಾರಿ ಮಳೆ ಸುರಿದಿತ್ತು. ನಂತರ ಟ್ರಫ್‌ ಪರಿಣಾಮವಿದ್ದರೂ ಮಳೆ ಕಡಿಮೆಯಾಗಿದೆ. ರಾತ್ರಿ ಹೊರವಲಯಗಳಲ್ಲಿ ಕೆಲವೆಡೆ ಮಾತ್ರ ತುಂತುರು ಮಳೆಯಾಗುತ್ತಿದೆ. ಈಗ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಳೆಯ ಪರಿಣಾಮದಿಂದ ತಾಪಮಾನ 33-32 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಈಗ ಮತ್ತೆ ತಾಪಮಾನ 34 ಡಿಗ್ರಿಗೆ ಬಂದಿದೆ. ನಗರದ ಕೇಂದ್ರಭಾಗದಲ್ಲಿ 34.4 ಡಿಗ್ರಿ, ಎಚ್‌ಎಎಲ್‌ನಲ್ಲಿ 33.3 ಡಿಗ್ರಿ, ಕೆಐಎಎಲ್‌ನಲ್ಲಿ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ರಾತ್ರಿಯ ವೇಳೆ ಸೆಕೆ ಕಡಿಮೆಯಾಗಿದೆ.

ಜೋರು ಗಾಳಿ ಬೀಸುವ ಸಾಧ್ಯತೆ : ಮಳೆ ಬರುವ ಸಮಯದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಸಾರ್ವಜನಿಕರು ಮಳೆ ಬರುವಾಗ ಮರದಡಿ ನಿಲ್ಲದಂತೆ ಹಾಗೂ ವಾಹನ ನಿಲ್ಲಿಸದಂತೆ ಎಚ್ಚರ ವಹಿಸಬೇಕು ಎಂದು ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ