ಆ್ಯಪ್ನಗರ

ಬೆಂಗಳೂರಲ್ಲಿ ದಸರಾ ಹಬ್ಬದವರೆಗೂ ಮಳೆ ಮುಂದುವರಿಕೆ

ಬೆಂಗಳೂರಲ್ಲಿ ಗುರುವಾರವೂ ಮಳೆಯಾಗಿದ್ದು, ದಸರಾ ಹಬ್ಬದವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುರುವಾರ ಕೂಡ ಬಿಬಿಎಂಪಿ ಒಳಗೊಂಡ ಬೆಂಗಳೂರು ನಗರ ಜಿಲ್ಲೆಯ ನಾನಾ ಕಡೆಗಳಲ್ಲಿ ಮಳೆಯಾಗಿದೆ.

Vijaya Karnataka Web 22 Oct 2020, 11:19 pm
ಬೆಂಗಳೂರು: ನಗರದಲ್ಲಿ ಗುರುವಾರವೂ ಮಳೆಯಾಗಿದ್ದು, ದಸರಾ ಹಬ್ಬದವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Vijaya Karnataka Web rains
Representative image


ಈ ಹಿಂದೆ ಅ.22ರವರೆಗೆ ಭಾರಿ ಮಳೆಯಾಗಲಿದೆ ಎಂಬ ಮೂನ್ಸೂಚನೆ ಇತ್ತು. ಈಗ ಸೋಮವಾರದವರೆಗೂ ಭಾರಿ ಮಳೆ ಸುರಿಯಲಿದೆ ಎಂದು ತಿಳಿದುಬಂದಿದೆ. ಕೆಲವೊಮ್ಮೆ ಗುಡುಗು ಸಹಿತ ವರ್ಷಧಾರೆಯಾಗಲಿದೆ. ಬಿಬಿಎಂಪಿ ಒಳಗೊಂಡ ಬೆಂಗಳೂರು ನಗರ ಜಿಲ್ಲೆಯ ನಾನಾ ಕಡೆಗಳಲ್ಲಿ ಮಳೆಯಾಗಿದೆ.

ಗುರುವಾರ ಮಧ್ಯಾಹ್ನ ಕೆಲ ಕಾಲ ಬಿಸಿಲು ಕಂಡಿತ್ತು. ಆ ಬಳಿಕ ಅಲ್ಲಲ್ಲಿ ಮಳೆಯಾಗಲು ಪ್ರಾರಂಭವಾಯಿತು. ಸಂಜೆ ಕೆಲ ನಿಮಿಷಗಳ ಕಾಲ ಜೋರು ಮಳೆ ಸುರಿಯತು. ಮತ್ತೆ ರಾತ್ರಿ ಕೆಲವೆಡೆ ಹೆಚ್ಚು ಮಳೆಯಾಗಿದೆ. ಪಾಲಿಕೆಯ ದಕ್ಷಿಣ, ಪೂರ್ವ ಹಾಗೂ ಆರ್‌.ಆರ್‌.ನಗರ ವಲಯಗಳಲ್ಲಿ ಹೆಚ್ಚು ಮಳೆಯಾಗಿದೆ. ಸಂಜೆ ಬಿದ್ದ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರ ನಿಧಾನಗತಿಗೆ ತಿರುಗಿತು. ದ್ವಿಚಕ್ರ ಸವಾರರು ಮಳೆಯಿಂದ ಆಶ್ರಯ ಪಡೆಯಲು ಕಟ್ಟಡಗಳ ಮೊರೆ ಹೋದರು.

ಎಲ್ಲೆಲ್ಲಿ ಎಷ್ಟು ಮಳೆ:
ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ನಲ್ಲಿ 33 ಮಿ.ಮೀ, ನಾಗರಬಾವಿ 31, ಮಾರುತಿ ಮಂದಿರ 31, ಜ್ಞಾನಭಾರತಿ 30, ಹಂಪಿನಗರ 27, ಕಾಡುಗೋಡಿ 24, ಚೌಡೇಶ್ವರಿ 24, ವಿದ್ಯಾಪೀಠ 23, ಸಂಪಂಗಿರಾಮನಗರ 20 ಮಿ.ಮೀ ನಷ್ಟು ಮಳೆಯಾಗಿದೆ. ಕೆಲವೆಡೆ ಮಧ್ಯರಾತ್ರಿವರೆಗೂ ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ