ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ರಾಜಧಾನಿಯಲ್ಲಿ ಮಳೆ ನೀರು ಕಾಲುವೆಯ ಪಥದ ದಿಕ್ಕನ್ನೇ ಬದಲಿಸಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಿಗೂಢವಾಗಿ ನಡೆದಿದೆಯೇ? ಹೌದು, ಒತ್ತುವರಿ ತೆರವು ಕಾರ್ಯಾಚರಣೆ ನಿರಂತರವಾಗಿ ಸಾಗಿದೆ ಎನ್ನುತ್ತಾರೆ ಬಿಬಿಎಂಪಿಯ ರಾಜಕಾಲುವೆ ವಿಭಾಗದ ಅಧಿಕಾರಿಗಳು! 4 ವರ್ಷಗಳ ಹಿಂದೆ ಬಲು ಅಬ್ಬರದಿಂದ ಶುರುವಾಗಿ ಅಷ್ಟೇ ವೇಗದಲ್ಲಿ ತಣ್ಣಗಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯು ತೆರೆ ಮರೆಯಲ್ಲಿಯೇ ನಡೆಯುತ್ತಿದೆ. ಖಾಲಿ ಜಾಗಗಳನ್ನಷ್ಟೇ ತೆರವು ಮಾಡಲಾಗುತ್ತಿದೆ. ಆದರೆ, ರಾಜಕಾಲುವೆಗಳ ಮೇಲಿನ ಕಟ್ಟಡಗಳನ್ನು ಮುಟ್ಟುವ ಸಾಹಸ ಮಾಡಿಲ್ಲ.
ಬೊಮ್ಮಸಂದ್ರ ಕೆರೆಯಲ್ಲಿ ಬೆಂಕಿ ಅವಘಡ, ರಾಜಕಾಲುವೆಯ ಗಿಡಮರಗಳು ಬೆಂಕಿಗಾಹುತಿ
ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದ್ದು, 2626 ಕಡೆ ಒತ್ತುವರಿ ಗುರುತಿಸಲಾಗಿತ್ತು. ಇದರಲ್ಲಿ 1890 ಒತ್ತುವರಿ ಜಾಗ ತೆರವುಗೊಳಿಸಿದ್ದು, 736 ಕಡೆ ತೆರವುಗೊಳಿಸುವುದು ಬಾಕಿ ಇದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಇತ್ತೀಚೆಗೆ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದಾಗ್ಯೂ, ತೆರವು ಕಾರ್ಯ ವೇಗ ಪಡೆದುಕೊಳ್ಳದೆ ತೆವಳುತ್ತಿದೆ.
ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆಗೆ ಯಾಕೆ ಕ್ರಮ ಕೈಗೊಂಡಿಲ್ಲ: ಸರಕಾರಕ್ಕೆ ಹೈಕೋರ್ಟ್ ಚಾಟಿ
ಕಾಲುವೆಯಲ್ಲಿನ 298 ಕಟ್ಟಡಗಳಿಗೆ ಕುತ್ತು
ರಾಜಕಾಲುವೆ ಅತಿಕ್ರಮಣ ತೆರವಿಗೆ ಬಾಕಿ ಇರುವ 736 ಪ್ರಕರಣಗಳಲ್ಲಿ 298 ಕಟ್ಟಡಗಳು, 69 ಕಾಂಪೌಂಡ್ಗಳೂ ಸೇರಿವೆ. ಈಗಾಗಲೇ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ65 ಕಟ್ಟಡ ಮಾಲೀಕರು ಒತ್ತುವರಿ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ಕೇರಳ ಅಪಾರ್ಟ್ಮೆಂಟ್ ನೆಲಸಮ ಬಳಿಕ, ಬೆಂಗಳೂರು ಕೆರೆ ಒತ್ತುವರಿದಾರರಲ್ಲಿ ನಡುಕ
ಭೂದಾಖಲೆಗಳ ಇಲಾಖೆಯ ಸರ್ವೇಯರ್ಗಳು ರಾಜಕಾಲುವೆಯನ್ನು ಕಬಳಿಸಿರುವ ಖಾಲಿ ನಿವೇಶನಗಳು, ಕಟ್ಟಡಗಳು, ಕಾಂಪೌಂಡ್ಗಳನ್ನು ಗುರುತಿಸಿ, ವರದಿ ಕೊಟ್ಟಿದ್ದಾರೆ. ಇದಲ್ಲದೆ, 369 ಒತ್ತುವರಿ ಪ್ರಕರಣಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಒತ್ತುವರಿ ಗುರುತಿಸಿಕೊಟ್ಟಿರುವ ಕಡೆ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹೀಗಾಗಿ, ನಗರದ ಕೆಲ ಪ್ರದೇಶಗಳಲ್ಲಿಜೆಸಿಬಿ, ಬುಲ್ಡೋಜರ್ಗಳು ಮತ್ತೆ ಆರ್ಭಟಿಸುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಕಾಲುವೆಗೆ ಜಿಗಿದು ಈಜುಕೊಳ ಎಂದು ಈಜಾಡಿದ ಪಾನಮತ್ತ !
2016ರ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಮಳೆ ನೀರು ಹರಿದು ಹೋಗಲು ದಾರಿಯೇ ಇಲ್ಲದೆ ರಸ್ತೆಗಳೆಲ್ಲವೂ ನದಿಯ ರೂಪ ತಾಳಿದ್ದವು. ದೋಣಿಗಳನ್ನು ಬಳಸಿ ಅಲ್ಲಿನ ನಿವಾಸಿಗಳನ್ನು ರಕ್ಷಿಸಲಾಗಿತ್ತು. ಮಳೆ ಅನಾಹುತದಿಂದ ಕೋಟ್ಯಾಂತರ ರೂ. ಆಸ್ತಿ-ಪಾಸ್ತಿ ನಷ್ಟವಾಗಿತ್ತು.
ಹುಳಿಮಾವು ಕೆರೆಯ 17.33 ಎಕರೆಯಲ್ಲಿ ಬಡಾವಣೆ ನಿರ್ಮಾಣ, ಕೆರೆ ಅಂಗಳವನ್ನೇ ಒತ್ತುವರಿ ಮಾಡಿದ ಬಿಡಿಎ!
ಪ್ರವಾಹಕ್ಕೆ ರಾಜಕಾಲುವೆಗಳ ಒತ್ತುವರಿಯೇ ಕಾರಣವಾಗಿದ್ದರಿಂದ ಬಿಬಿಎಂಪಿಯು ಎಲ್ಲೆಡೆ ತೆæರವು ಕಾರ್ಯಾಚರಣೆ ಕೈಗೊಂಡಿತು. ಅವನಿ ಶೃಂಗೇರಿನಗರ, ಸರಸ್ವತಿಪುರ, ಕೋಡಿಚಿಕ್ಕನಹಳ್ಳಿ, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ, ಕಲ್ಕೆರೆ, ಕಸವನಹಳ್ಳಿ ಸೇರಿದಂತೆ ಎಲ್ಲೆಡೆ ರಾಜಕಾಲುವೆ ಜಾಗದಲ್ಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಬಡವರು, ಮಧ್ಯಮ ವರ್ಗದವರ ಮನೆಗಳನ್ನು ಕೆಡವಲು ಶುರು ಮಾಡಿದಾಗ ಯಾವ ಸಮಸ್ಯೆಯೂ ಎದುರಾಗಲಿಲ್ಲ. ಅದೇ ಮಾಲ್ಗಳು, ಆಸ್ಪತ್ರೆಗಳು, ಬಲಾಢ್ಯರ ಬಂಗಲೆಗಳು ರಾಜಕಾಲುವೆ ಜಾಗದಲ್ಲಿರುವುದು ಗೊತ್ತಾಗುತ್ತಿದ್ದಂತೆಯೇ ಜಂಟಿ ಸರ್ವೆ ನೆಪವೊಡ್ಡಿ ತೆರವು ಕಾರ್ಯಕ್ಕೆ ಎಳ್ಳು-ನೀರು ಬಿಡಲಾಯಿತು.
ಪ್ರಭಾವಿಗಳಿಂದ ತೆರವಿಗೆ ಪ್ರತಿರೋಧ
ಹೈಕೋರ್ಟ್ ರಾಜಕಾಲುವೆಗಳ ಒತ್ತುವರಿ ತೆರವಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಪಾಲಿಕೆಯ ಅಧಿಕಾರಿಗಳ ಕಿವಿ ಹಿಂಡುತ್ತಿದೆ. ಆದರೆ, ರಾಜಕಾಲುವೆ ಜಾಗದಲ್ಲಿರುವ ಕಟ್ಟಡಗಳ ತೆರವಿಗೆ ಪ್ರಭಾವಿಗಳು, ಬಲಾಢ್ಯರು ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಅಧಿಕಾರಿಗಳ ಮೇಲೂ ಒತ್ತಡ ಹಾಕುತ್ತಿದ್ದಾರೆ.
ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಕಾಲುವೆಗಳ ಬಳಿ ನಿರ್ದಿಷ್ಟ ಬಫರ್ಜೋನ್ ಕಾಯ್ದುಕೊಳ್ಳಬೇಕಿದೆ. ಆದರೆ, ಬಫರ್ಜೋನ್ನಲ್ಲೇ ಲಕ್ಷಾಂತರ ಕಟ್ಟಡಗಳು ತಲೆಯೆತ್ತಿವೆ. ಈಗಲೂ ಅನಧಿಕೃತ ನಿರ್ಮಾಣ ಕಾರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಬಫರ್ಜೋನ್ನಲ್ಲಿನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
389 ಕಿ.ಮೀ. ಉದ್ದದ ಕಾಲುವೆ ಅಭಿವೃದ್ಧಿ
ನಗರದಲ್ಲಿನ 842 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗವಿದ್ದು, ಇದರಲ್ಲಿಈವರೆಗೆ 389 ಕಿ.ಮೀ. ಉದ್ದದ ರಾಜಕಾಲುವೆಯನ್ನಷ್ಟೇ ಅಭಿವೃದ್ಧಿಪಡಿಸಲಾಗಿದೆ. ಕಾಲುವೆಯ ಉದ್ದಕ್ಕೂ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿ, ಮಳೆಗಾಲದಲ್ಲಿಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
''2019-20ನೇ ಸಾಲಿನ ಬಜೆಟ್ನಲ್ಲಿರಾಜಕಾಲುವೆಗಳ ನಿರ್ಮಾಣಕ್ಕೆ 640 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ75 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 440 ಕಿ.ಮೀ. ಉದ್ದದ ರಾಜಕಾಲುವೆಯ ವಾರ್ಷಿಕ ನಿರ್ವಹಣೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಎರಡು ಸುತ್ತು ಹೂಳು ತೆರವುಗೊಳಿಸಿದ್ದು, ಮೂರನೇ ಸುತ್ತು ಆರಂಭವಾಗಿದೆ. ಮಳೆಗಾಲ ಆರಂಭವಾಗುವ ವೇಳೆಗೆ ಹೂಳು ತೆರವು ಕಾರ್ಯ ಪೂರ್ಣಗೊಳ್ಳಲಿದೆ,'' ಎಂದು ಬಿಬಿಎಂಪಿಯ ರಾಜಕಾಲುವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಬೊಮ್ಮಸಂದ್ರ ಕೆರೆಯಲ್ಲಿ ಬೆಂಕಿ ಅವಘಡ, ರಾಜಕಾಲುವೆಯ ಗಿಡಮರಗಳು ಬೆಂಕಿಗಾಹುತಿ
ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದ್ದು, 2626 ಕಡೆ ಒತ್ತುವರಿ ಗುರುತಿಸಲಾಗಿತ್ತು. ಇದರಲ್ಲಿ 1890 ಒತ್ತುವರಿ ಜಾಗ ತೆರವುಗೊಳಿಸಿದ್ದು, 736 ಕಡೆ ತೆರವುಗೊಳಿಸುವುದು ಬಾಕಿ ಇದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಇತ್ತೀಚೆಗೆ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದಾಗ್ಯೂ, ತೆರವು ಕಾರ್ಯ ವೇಗ ಪಡೆದುಕೊಳ್ಳದೆ ತೆವಳುತ್ತಿದೆ.
ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆಗೆ ಯಾಕೆ ಕ್ರಮ ಕೈಗೊಂಡಿಲ್ಲ: ಸರಕಾರಕ್ಕೆ ಹೈಕೋರ್ಟ್ ಚಾಟಿ
ಕಾಲುವೆಯಲ್ಲಿನ 298 ಕಟ್ಟಡಗಳಿಗೆ ಕುತ್ತು
ರಾಜಕಾಲುವೆ ಅತಿಕ್ರಮಣ ತೆರವಿಗೆ ಬಾಕಿ ಇರುವ 736 ಪ್ರಕರಣಗಳಲ್ಲಿ 298 ಕಟ್ಟಡಗಳು, 69 ಕಾಂಪೌಂಡ್ಗಳೂ ಸೇರಿವೆ. ಈಗಾಗಲೇ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ65 ಕಟ್ಟಡ ಮಾಲೀಕರು ಒತ್ತುವರಿ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ಕೇರಳ ಅಪಾರ್ಟ್ಮೆಂಟ್ ನೆಲಸಮ ಬಳಿಕ, ಬೆಂಗಳೂರು ಕೆರೆ ಒತ್ತುವರಿದಾರರಲ್ಲಿ ನಡುಕ
ಭೂದಾಖಲೆಗಳ ಇಲಾಖೆಯ ಸರ್ವೇಯರ್ಗಳು ರಾಜಕಾಲುವೆಯನ್ನು ಕಬಳಿಸಿರುವ ಖಾಲಿ ನಿವೇಶನಗಳು, ಕಟ್ಟಡಗಳು, ಕಾಂಪೌಂಡ್ಗಳನ್ನು ಗುರುತಿಸಿ, ವರದಿ ಕೊಟ್ಟಿದ್ದಾರೆ. ಇದಲ್ಲದೆ, 369 ಒತ್ತುವರಿ ಪ್ರಕರಣಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಒತ್ತುವರಿ ಗುರುತಿಸಿಕೊಟ್ಟಿರುವ ಕಡೆ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹೀಗಾಗಿ, ನಗರದ ಕೆಲ ಪ್ರದೇಶಗಳಲ್ಲಿಜೆಸಿಬಿ, ಬುಲ್ಡೋಜರ್ಗಳು ಮತ್ತೆ ಆರ್ಭಟಿಸುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಕಾಲುವೆಗೆ ಜಿಗಿದು ಈಜುಕೊಳ ಎಂದು ಈಜಾಡಿದ ಪಾನಮತ್ತ !
2016ರ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಮಳೆ ನೀರು ಹರಿದು ಹೋಗಲು ದಾರಿಯೇ ಇಲ್ಲದೆ ರಸ್ತೆಗಳೆಲ್ಲವೂ ನದಿಯ ರೂಪ ತಾಳಿದ್ದವು. ದೋಣಿಗಳನ್ನು ಬಳಸಿ ಅಲ್ಲಿನ ನಿವಾಸಿಗಳನ್ನು ರಕ್ಷಿಸಲಾಗಿತ್ತು. ಮಳೆ ಅನಾಹುತದಿಂದ ಕೋಟ್ಯಾಂತರ ರೂ. ಆಸ್ತಿ-ಪಾಸ್ತಿ ನಷ್ಟವಾಗಿತ್ತು.
ಹುಳಿಮಾವು ಕೆರೆಯ 17.33 ಎಕರೆಯಲ್ಲಿ ಬಡಾವಣೆ ನಿರ್ಮಾಣ, ಕೆರೆ ಅಂಗಳವನ್ನೇ ಒತ್ತುವರಿ ಮಾಡಿದ ಬಿಡಿಎ!
ಪ್ರವಾಹಕ್ಕೆ ರಾಜಕಾಲುವೆಗಳ ಒತ್ತುವರಿಯೇ ಕಾರಣವಾಗಿದ್ದರಿಂದ ಬಿಬಿಎಂಪಿಯು ಎಲ್ಲೆಡೆ ತೆæರವು ಕಾರ್ಯಾಚರಣೆ ಕೈಗೊಂಡಿತು. ಅವನಿ ಶೃಂಗೇರಿನಗರ, ಸರಸ್ವತಿಪುರ, ಕೋಡಿಚಿಕ್ಕನಹಳ್ಳಿ, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ, ಕಲ್ಕೆರೆ, ಕಸವನಹಳ್ಳಿ ಸೇರಿದಂತೆ ಎಲ್ಲೆಡೆ ರಾಜಕಾಲುವೆ ಜಾಗದಲ್ಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಬಡವರು, ಮಧ್ಯಮ ವರ್ಗದವರ ಮನೆಗಳನ್ನು ಕೆಡವಲು ಶುರು ಮಾಡಿದಾಗ ಯಾವ ಸಮಸ್ಯೆಯೂ ಎದುರಾಗಲಿಲ್ಲ. ಅದೇ ಮಾಲ್ಗಳು, ಆಸ್ಪತ್ರೆಗಳು, ಬಲಾಢ್ಯರ ಬಂಗಲೆಗಳು ರಾಜಕಾಲುವೆ ಜಾಗದಲ್ಲಿರುವುದು ಗೊತ್ತಾಗುತ್ತಿದ್ದಂತೆಯೇ ಜಂಟಿ ಸರ್ವೆ ನೆಪವೊಡ್ಡಿ ತೆರವು ಕಾರ್ಯಕ್ಕೆ ಎಳ್ಳು-ನೀರು ಬಿಡಲಾಯಿತು.
ಪ್ರಭಾವಿಗಳಿಂದ ತೆರವಿಗೆ ಪ್ರತಿರೋಧ
ಹೈಕೋರ್ಟ್ ರಾಜಕಾಲುವೆಗಳ ಒತ್ತುವರಿ ತೆರವಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಪಾಲಿಕೆಯ ಅಧಿಕಾರಿಗಳ ಕಿವಿ ಹಿಂಡುತ್ತಿದೆ. ಆದರೆ, ರಾಜಕಾಲುವೆ ಜಾಗದಲ್ಲಿರುವ ಕಟ್ಟಡಗಳ ತೆರವಿಗೆ ಪ್ರಭಾವಿಗಳು, ಬಲಾಢ್ಯರು ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಅಧಿಕಾರಿಗಳ ಮೇಲೂ ಒತ್ತಡ ಹಾಕುತ್ತಿದ್ದಾರೆ.
ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಕಾಲುವೆಗಳ ಬಳಿ ನಿರ್ದಿಷ್ಟ ಬಫರ್ಜೋನ್ ಕಾಯ್ದುಕೊಳ್ಳಬೇಕಿದೆ. ಆದರೆ, ಬಫರ್ಜೋನ್ನಲ್ಲೇ ಲಕ್ಷಾಂತರ ಕಟ್ಟಡಗಳು ತಲೆಯೆತ್ತಿವೆ. ಈಗಲೂ ಅನಧಿಕೃತ ನಿರ್ಮಾಣ ಕಾರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಬಫರ್ಜೋನ್ನಲ್ಲಿನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
389 ಕಿ.ಮೀ. ಉದ್ದದ ಕಾಲುವೆ ಅಭಿವೃದ್ಧಿ
ನಗರದಲ್ಲಿನ 842 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗವಿದ್ದು, ಇದರಲ್ಲಿಈವರೆಗೆ 389 ಕಿ.ಮೀ. ಉದ್ದದ ರಾಜಕಾಲುವೆಯನ್ನಷ್ಟೇ ಅಭಿವೃದ್ಧಿಪಡಿಸಲಾಗಿದೆ. ಕಾಲುವೆಯ ಉದ್ದಕ್ಕೂ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿ, ಮಳೆಗಾಲದಲ್ಲಿಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
''2019-20ನೇ ಸಾಲಿನ ಬಜೆಟ್ನಲ್ಲಿರಾಜಕಾಲುವೆಗಳ ನಿರ್ಮಾಣಕ್ಕೆ 640 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ75 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 440 ಕಿ.ಮೀ. ಉದ್ದದ ರಾಜಕಾಲುವೆಯ ವಾರ್ಷಿಕ ನಿರ್ವಹಣೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಎರಡು ಸುತ್ತು ಹೂಳು ತೆರವುಗೊಳಿಸಿದ್ದು, ಮೂರನೇ ಸುತ್ತು ಆರಂಭವಾಗಿದೆ. ಮಳೆಗಾಲ ಆರಂಭವಾಗುವ ವೇಳೆಗೆ ಹೂಳು ತೆರವು ಕಾರ್ಯ ಪೂರ್ಣಗೊಳ್ಳಲಿದೆ,'' ಎಂದು ಬಿಬಿಎಂಪಿಯ ರಾಜಕಾಲುವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.