ಆ್ಯಪ್ನಗರ

ಮಳೆಗಾಗಿ ಪರ್ಜನ್ಯ ಜಪ: ವಿಚಾರವಾದಿಗಳ ಆಕ್ರೋಶ

ನಗರದ ಚಾಮರಾಜಪೇಟೆಯಲ್ಲಿನ ಧಾರ್ಮಿಕ ದತ್ತಿ ಇಲಾಖೆ ಮುಂಭಾಗ ಮೌನ ಪ್ರತಿಭಟನೆ ನಡೆಸಿದ ವಿಚಾರವಾದಿಗಳು, ‘ರಾಜ್ಯ ಸರಕಾರವು ಜನರಲ್ಲಿ ವೈಚಾರಿಕತೆ ಮೂಡಿಸುವ ಬದಲು ಮೌಢ್ಯವನ್ನು ಬಿತ್ತುತ್ತಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Vijaya Karnataka Web 7 Jun 2019, 10:38 am
ಬೆಂಗಳೂರು: ಮುಜರಾಯಿ ಇಲಾಖೆಗೆ ಸೇರಿದ ಎಲ್ಲ ದೇವಾಲಯಗಳಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಬ್ರಾಹ್ಮೀ ಮುಹೂರ್ತದಲ್ಲಿ ಪರ್ಜನ್ಯ ಜಪ, ವಿಶೇಷ ಪೂಜೆಗಳನ್ನು ನಡೆಸುವಂತೆ ಆದೇಶ ಹೊರಡಿಸಿರುವುದನ್ನು ಖಂಡಿಸಿ ಪ್ರಗತಿಪರ ಮತ್ತು ವಿಚಾರವಾದಿ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.
Vijaya Karnataka Web Vicharvadhigalu


ನಗರದ ಚಾಮರಾಜಪೇಟೆಯಲ್ಲಿನ ಧಾರ್ಮಿಕ ದತ್ತಿ ಇಲಾಖೆ ಮುಂಭಾಗ ಮೌನ ಪ್ರತಿಭಟನೆ ನಡೆಸಿದ ವಿಚಾರವಾದಿಗಳು, ‘ರಾಜ್ಯ ಸರಕಾರವು
ಜನರಲ್ಲಿ ವೈಚಾರಿಕತೆ ಮೂಡಿಸುವ ಬದಲು ಮೌಢ್ಯವನ್ನು ಬಿತ್ತುತ್ತಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ‘ಮಳೆಗಾಗಿ ಪರ್ಜನ್ಯ ಜಪ, ವಿಶೇಷ ಪೂಜೆ ನಡೆಸಲು ಪ್ರತಿ ದೇವಾಲಯಕ್ಕೆ 10 ಸಾವಿರ ರೂ. ನೀಡಲಾಗಿದೆ. ಮಳೆಗಾಲ ಆರಂಭದ ಹೊತ್ತಿನಲ್ಲಿ ಇದು ಹಾಸ್ಯಾಸ್ಪದ ಆದೇಶವಾಗಿದೆ. ಸಚಿವರು, ಶಾಸಕರ ಸಮ್ಮುಖದಲ್ಲೇ ಪೂಜೆಗಳು ನಡೆಯುತ್ತಿರುವುದು ದುರ್ದೈವದ ಸಂಗತಿ. ನೈಸರ್ಗಿಕವಾಗಿ ಮಳೆ ಸುರಿದರೂ, ಮಳೆಗೆ ಪೂಜೆಯೇ ಕಾರಣ ಎಂದು ಜನರನ್ನು ನಂಬಿಸಲು ಸರಕಾರ ಮುಂದಾಗಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ನಡೆಸಬೇಕು ಎಂದು ಸರಕಾರವೆ ಆದೇಶಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಗುರುವಾರ ವಿಚಾರವಾದಿಗಳು ಪ್ರತಿಭಟನೆ ನಡೆಸಿದರು.


‘ದೇವರು, ಧರ್ಮ, ನಂಬಿಕೆಗಳು ಮನಸ್ಸಿನಲ್ಲಿರಬೇಕು. ಅದನ್ನು ಬಿಟ್ಟು, ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಸರಕಾರವನ್ನು ದೇವರು, ಮಠ, ಮಂದಿರ, ಪುರಾಣಗಳು ಆಳುತ್ತಿವೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ