ಆ್ಯಪ್ನಗರ

ಕಾಶ್ಮೀರ ಗಡಿಯಲ್ಲಿ ಉಗ್ರರೊಂದಿಗೆ ಯೋಧನ ಕಾದಾಟ.. ಇಲ್ಲಿ ‘ಮನೆಹಾಳ’ರ ಆರ್ಭಟ..!

ಹಣ ಕೊಟ್ಟರೂ ಕೂಡಾ ಸಬೂಬು ಹೇಳುತ್ತಿದ್ದ ನಾರಾಯಣ ಸ್ವಾಮಿ ವರ್ತನೆಗೆ ರೋಸಿ ಹೋದ ಅಶೋಕ್ ಕುಮಾರ್ ಶರ್ಮಾ ಆತನ ಮನೆಗೇ ಭೇಟಿ ಕೊಟ್ಟರು. ಆತನ ಅಳಿಯನ ಜೊತೆಗೂ ವಾದಿಸಿದರು. ಕೆಲಸ ಪೂರ್ಣಗೊಳಿಸಿ, ಇಲ್ಲವೇ ಹಣ ವಾಪಸ್ ಕೊಡಿ ಎಂದು ಪಟ್ಟು ಹಿಡಿದರು.

Bangalore Mirror Bureau 3 Feb 2020, 3:22 pm
ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಡಿ ಭದ್ರತಾ ಪಡೆ ಸಬ್‌ ಇನ್ಸ್‌ಪೆಕ್ಟರ್ ಒಬ್ಬರಿಗೆ ನಗರದಲ್ಲಿ ಭಾರೀ ಮೋಸವಾಗಿದೆ. ಕಷ್ಟಪಟ್ಟ ದುಡಿದಿದ್ದ 26 ಲಕ್ಷ ರೂ. ‘ಮನೆಹಾಳ’ರ ಪಾಲಾಗಿದೆ.
Vijaya Karnataka Web house
ಕಾಶ್ಮೀರ ಗಡಿಯಲ್ಲಿ ಉಗ್ರರೊಂದಿಗೆ ಯೋಧನ ಕಾದಾಟ.. ಇಲ್ಲಿ ‘ಮನೆಹಾಳ’ರ ಆರ್ಭಟ..!


53 ವರ್ಷ ವಯಸ್ಸಿನ ಅಶೋಕ್ ಕುಮಾರ್ ಶರ್ಮಾ ನಗರದ ಸೊಣ್ಣಪ್ಪನ ಹಳ್ಳಿಯ ಕಮಾಂಡೋ ಲೇಔಟ್‌ನಲ್ಲಿ ನಿವೇಶನ ಹೊಂದಿದ್ದಾರೆ. ಈ ನಿವೇಶನದಲ್ಲಿ ಮೂರು ಮಹಡಿಗಳ ಮನೆ ಕಟ್ಟಬೇಕೆನ್ನುವುದು ಅವರ ಆಸೆ. ಇದಕ್ಕಾಗಿ 26 ಲಕ್ಷ ರೂ, ಕೂಡಿಟ್ಟಿದ್ದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ನಾರಾಯಣಸ್ವಾಮಿ ಹಾಗೂ ಆತನ ಅಳಿಯ ಮಂಜುನಾಥನ ಪರಿಚಯವಾಯ್ತು. ಅಶೋಕ್ ಅವರ ಜೊತೆಗೆ ಮಾತುಕತೆಗೆ ಕುಳಿತ ನಾರಾಯಣಸ್ವಾಮಿ, ತಮ್ಮ ಅಳಿಯ ಮಂಜುನಾಥನನ್ನೇ ಸಾಕ್ಷಿಯನ್ನಾಗಿ ಇಟ್ಟುಕೊಂಡರು. ಎರಡು ಮಹಡಿಗಳ ಮನೆ ನಿರ್ಮಾಣಕ್ಕೆ 20 ಲಕ್ಷ ರೂ. ಮೂರನೇ ಮಹಡಿಗೆ 5 ಲಕ್ಷ ರೂ. ಹಾಗೂ ವಿದ್ಯುತ್‌, ಫ್ಲಂಬಿಂಗ್ ಕೆಲಸಕ್ಕೆ 1 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಮಾತುಕತೆಯಾಯ್ತು. ಈ ಪ್ರಕಾರ, 26 ಲಕ್ಷ ರೂ. ಹಣ ಪಡೆದ ನಾರಾಯಣ ಸ್ವಾಮಿ, ಅಗ್ರಿಮೆಂಟ್ ಕೂಡಾ ಮಾಡಿಕೊಂಡರು.

ಇದೇ ಸಮಯಕ್ಕೆ ಸರಿಯಾಗಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಸರ್ಕಾರ ತೆಗೆದುಹಾಕಿತು. ಯೋಧ ಅಶೋಕ್ ಕುಮಾರ್ ಶರ್ಮಾ ತುರ್ತಾಗಿ ಕಣಿವೆ ರಾಜ್ಯಕ್ಕೆ ಹೋಗಬೇಕಾಯ್ತು. ಹಲವು ತಿಂಗಳುಗಳ ಕಾಲ ರಜೆ ಕೂಡಾ ಸಿಗಲಿಲ್ಲ. ಇತ್ತ ಹಣ ಪಡೆದಿದ್ದ ನಾರಾಯಣ ಸ್ವಾಮಿ, ಎಲ್ಲಾ ಕೆಲಸ ಮುಗಿದಿದೆ ಎಂದೇ ಮಾಹಿತಿ ನೀಡುತ್ತಿದ್ದ.

'ಲಿಫ್ಟ್‌ ಕೊಡ್ಲಾ' ಅಂದ್ರು.. ಬೇಡ ಅಂದಿದ್ದಕ್ಕೆ ಚಾಕು ತೋರಿಸಿ ಹಿಗ್ಗಾಮುಗ್ಗಾ ಥಳಿಸಿ ಲೂಟಿ ಮಾಡಿದ್ರು..!

ಇತ್ತೀಚೆಗಷ್ಟೇ ರಜೆಯ ಮೇಲೆ ಬೆಂಗಳೂರಿಗೆ ಬಂದ ಅಶೋಕ್ ಕುಮಾರ್ ಶರ್ಮಾ ತಮ್ಮ ಕಟ್ಟಡ ನಿರ್ಮಾಣ ಕಾಮಗಾರಿ ನೀಡಲು ಹೋದಾಗ ಶಾಕ್‌ಗೆ ಒಳಗಾದ್ರು. ಯಾಕಂದ್ರೆ, ಅರ್ಧದಷ್ಟೂ ಕೆಲಸ ಆಗಿರಲಿಲ್ಲ. ಏಕೆ ಹೀಗೆ ಎಂದು ನಾರಾಯಣಸ್ವಾಮಿಗೆ ಕೇಳಿದರೆ, ಆತ ಏನೇನೋ ಸಬೂಬು ಹೇಳುತ್ತಿದ್ದ. ನಾನು ಹಾಗೂ ನನ್ನ ಅಳಿಯ ಪರಸ್ಪರ ದೂರವಾಗಿದ್ದೇವೆ, ಹೀಗಾಗಿ ತಡವಾಗಿದೆ ಎನ್ನುತ್ತಿದ್ದ. ಮರದ ಕೆಲಸ ಹಾಗೂ ಪೇಂಟಿಂಗ್ ಮಾತ್ರ ಬಾಕಿ ಇದೆ ಎಂದು ಬುರುಡೆ ಬಿಟ್ಟ.

ಮಹಿಳೆ ಶೌಚಗೃಹದಲ್ಲಿದ್ದಾಗ ಇಣುಕಿ ನೋಡಿ ಮೊಬೈಲ್‌ನಲ್ಲಿ ದೃಶ್ಯಾವಳಿ ಸೆರೆ ಹಿಡಿದ ಕಾಮುಕ..!

ಹಣ ಕೊಟ್ಟರೂ ಕೂಡಾ ಸಬೂಬು ಹೇಳುತ್ತಿದ್ದ ನಾರಾಯಣ ಸ್ವಾಮಿ ವರ್ತನೆಗೆ ರೋಸಿ ಹೋದ ಅಶೋಕ್ ಕುಮಾರ್ ಶರ್ಮಾ ಆತನ ಮನೆಗೇ ಭೇಟಿ ಕೊಟ್ಟರು. ಆತನ ಅಳಿಯನ ಜೊತೆಗೂ ವಾದಿಸಿದರು. ಕೆಲಸ ಪೂರ್ಣಗೊಳಿಸಿ, ಇಲ್ಲವೇ ಹಣ ವಾಪಸ್ ಕೊಡಿ ಎಂದು ಪಟ್ಟು ಹಿಡಿದರು. ಈ ವೇಳೆ, ಶರ್ಮಾ ಅವರಿಗೆ ಮನಬಂದಂತೆ ಬೈದ ನಾರಾಯಣಸ್ವಾಮಿ, ತಮ್ಮ ಮನೆಯ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದೆ ಎಂದು ದೂರು ನೀಡೋದಾಗಿ ಬೆದರಿಕೆಯನ್ನೂ ಹಾಕಿದ. ಇದರಿಂದ ಸಿಟ್ಟಿಗೆದ್ದ ಶರ್ಮಾ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ಧಾರೆ.

ಡೇಟಿಂಗ್ ಹೆಸರಲ್ಲಿ ಮನಸ್ಸಲ್ಲೇ ಮಂಡಿಗೆ ತಿನ್ನಿಸಿ ಟೆಕ್ಕಿಗೆ 4 ಲಕ್ಷ ರೂ. ಬ್ಲೇಡ್‌! ಎರಡೆರಡು ಸಲ ಮೋಸ ಹೋದ ಭೂಪ..!

ಇತ್ತ ಅಷ್ಟು ಹಣ ಕೊಟ್ಟರೂ ಕೆಲಸವಾಗಿಲ್ಲ ಎಂಬ ಬೇಸರದೊಂದಿಗೇ ಮತ್ತೆ 4 ಲಕ್ಷ ರೂ. ಸಾಲ ಪಡೆದು ತಕ್ಕಮಟ್ಟಿಗೆ ತಮ್ಮ ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿಕೊಂಡಿದ್ದಾರೆ.

ಮಹಿಳೆಯ ಖಾಸಗಿ ಕ್ಷಣಗಳ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್: ಮದ್ವೆಯಾಗೋದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ