ಕೆ.ಎಂ.ಪಂಕಜ ಬೆಂಗಳೂರು
ಕ್ಯಾನ್ಸರ್ ರೋಗಿಗಳಿಗೆ ಇನ್ನು ಮುಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯಲಿದೆ.
ನಗರದಲ್ಲಿ ಸರಕಾರದ ಏಕೈಕ ಕ್ಯಾನ್ಸರ್ ಸಂಸ್ಥೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭಾರಿ ಸಂಖ್ಯೆಯ ರೋಗಿಗಳು ಬರುತ್ತಿದ್ದು, ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ತಗ್ಗಿಸಲು ಹಾಗೂ ಚಿಕಿತ್ಸೆಗಾಗಿ ಕಾಯುವುದನ್ನು ತಪ್ಪಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರಾರಂಭಿಸುವಂತೆ ಸರಕಾರ ಆದೇಶ ಹೊರಡಿಸಿದೆ.
ವಿಕ್ಟೋರಿಯಾ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಇನ್ನು ಮುಂದೆ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ)ಗಳು ಹೊರ ರೋಗಿಗಳ ಸೇವೆ ದೊರೆಯಲಿದೆ. ಜತೆಗೆ ಕಿಮೋಥೆರಪಿ ಹಾಗೂ ರೇಡಿಯೋ ಥೆರಪಿ ಮತ್ತು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿಂದತೆ ಶಸ್ತ್ರಚಿಕಿತ್ಸಾ ಸೇವೆಯೂ ಲಭ್ಯವಾಗಲಿದೆ ಎಂದು ವಿಭಾಗದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಭಾಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಪ್ರೋಗ್ರಾಂ(ಎನ್ಸಿಸಿಪಿ) ಅಡಿಯಲ್ಲಿ ವಾರ್ಷಿಕ 2 ಕೋಟಿ ರೂ. ಅನುದಾನ ದೊರೆಯಲಿದೆ.
ಸೌಲಭ್ಯಗಳ ಅಗತ್ಯತೆ
ಎನ್ಎಬಿಎಚ್ ನಿಯಮಾನುಸಾರ ಪ್ರಸ್ತುತ ಕ್ಯಾನ್ಸರ್ ವಿಭಾಗದಲ್ಲಿ ಸೇವೆ ಆರಂಭಿಸಲು ಇಬ್ಬರು ಪ್ರಾಧ್ಯಾಪಕರು, ಇಬ್ಬರು ಸಹಾಯಕ ಪ್ರಾಧ್ಯಾಪಕರು, ಶುಶ್ರೂಷಕರು, ವಿಕಿರಣ ಚಿಕಿತ್ಸಾ ತಜ್ಞರು ಸೇರಿದಂತೆ ಅಗತ್ಯ ವೈದ್ಯ ಸಿಬ್ಬಂದಿಯನ್ನು ಒದಗಿಸಬೇಕಿದೆ. ಜತೆಗೆ 3ಡಿ ಲಿನ್ಯಾಕ್ (ಲೀನಿಯರ್ ಆ್ಯಕ್ಸಿಲರೇಟರ್) ಯಂತ್ರದ ಅಗತ್ಯವಿದೆ. ನಿರ್ವಹಣೆ ಇಲ್ಲದೆ ಸೊರಗಿರುವ ವಿಭಾಗದ ಕಟ್ಟಡವನ್ನು ನವೀಕರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಹಾಗಾದಲ್ಲಿ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸೇವೆ ದೊರೆಯಲಿದೆ. ಜತೆಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ವಿಭಾಗದ ವೈದ್ಯರು.
ಹಳೆಯ ಪದ್ಧತಿಯಲ್ಲಿ ಚಿಕಿತ್ಸೆ :
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಕ್ಯಾನ್ಸರ್ ವಿಭಾಗ 1965ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಲಾಲ್ಬಹದ್ದೂರ್ ಶಾಸ್ತ್ರಿ ಅವರಿಂದ ಉದ್ಘಾಟನೆಗೊಂಡಿತ್ತು. ಕೆಲ ವರ್ಷಗಳಿಂದ ವೈದ್ಯರ ಕೊರತೆ, ನಿರ್ವಹಣೆ ಇಲ್ಲದೆ ವಿಭಾಗದಲ್ಲಿ ಸೂಕ್ತ ಸೇವೆ ದೊರೆಯುತ್ತಿರಲಿಲ್ಲ. ಹಳೆಯದಾದ '2ಡಿ ಕೊಬಾಲ್ಟ್ 60' ಯಂತ್ರವನ್ನು ಬಳಸಿಕೊಂಡು ನಿತ್ಯ ಬೆರಳೆಣಿಕೆಯಷ್ಟು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯದ ಕಾರಣ ರೋಗಿಗಳು ಬಂದರೂ ಅರ್ಧಕ್ಕೆ ವಾಪಸ್ ಹೋಗುತ್ತಿದ್ದರು.
''ವಿಕ್ಟೋರಿಯಾದಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಇದೆ ಎಂಬ ಮಾಹಿತಿಯೇ ಹೆಚ್ಚಿನವರಿಗೆ ಇಲ್ಲ. ಇದೀಗ ಸರಕಾರ ಹೊರ ರೋಗಿಗಳ ಸೇವೆಯೊಂದಿಗೆ ಕಿಮೋಥೆರಪಿ, ರೇಡಿಯೋ ಥೆರಪಿ ಹಾಗೂ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿರುವುದರಿಂದ ಇನ್ನು ಮುಂದೆ ರೋಗಿಗಳು ವಿಕ್ಟೋರಿಯಾದಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗಾಗಿ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಬೇಗ ಒದಗಿಸಿದರೆ ರೋಗಿಗಳಿಗೆ ಅನುಕೂಲವಾಗಲಿದೆ,'' ಎನ್ನುತ್ತಾರೆ ವಿಕಿರಣ ಚಿಕಿತ್ಸಾ ವೈದ್ಯ ಡಾ. ಮದುಸೂದನ್.
ಕ್ಯಾನ್ಸರ್ ರೋಗಿಗಳಿಗೆ ಇನ್ನು ಮುಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯಲಿದೆ.
ನಗರದಲ್ಲಿ ಸರಕಾರದ ಏಕೈಕ ಕ್ಯಾನ್ಸರ್ ಸಂಸ್ಥೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭಾರಿ ಸಂಖ್ಯೆಯ ರೋಗಿಗಳು ಬರುತ್ತಿದ್ದು, ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ತಗ್ಗಿಸಲು ಹಾಗೂ ಚಿಕಿತ್ಸೆಗಾಗಿ ಕಾಯುವುದನ್ನು ತಪ್ಪಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರಾರಂಭಿಸುವಂತೆ ಸರಕಾರ ಆದೇಶ ಹೊರಡಿಸಿದೆ.
ವಿಕ್ಟೋರಿಯಾ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಇನ್ನು ಮುಂದೆ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ)ಗಳು ಹೊರ ರೋಗಿಗಳ ಸೇವೆ ದೊರೆಯಲಿದೆ. ಜತೆಗೆ ಕಿಮೋಥೆರಪಿ ಹಾಗೂ ರೇಡಿಯೋ ಥೆರಪಿ ಮತ್ತು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿಂದತೆ ಶಸ್ತ್ರಚಿಕಿತ್ಸಾ ಸೇವೆಯೂ ಲಭ್ಯವಾಗಲಿದೆ ಎಂದು ವಿಭಾಗದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಭಾಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಪ್ರೋಗ್ರಾಂ(ಎನ್ಸಿಸಿಪಿ) ಅಡಿಯಲ್ಲಿ ವಾರ್ಷಿಕ 2 ಕೋಟಿ ರೂ. ಅನುದಾನ ದೊರೆಯಲಿದೆ.
ಸೌಲಭ್ಯಗಳ ಅಗತ್ಯತೆ
ಎನ್ಎಬಿಎಚ್ ನಿಯಮಾನುಸಾರ ಪ್ರಸ್ತುತ ಕ್ಯಾನ್ಸರ್ ವಿಭಾಗದಲ್ಲಿ ಸೇವೆ ಆರಂಭಿಸಲು ಇಬ್ಬರು ಪ್ರಾಧ್ಯಾಪಕರು, ಇಬ್ಬರು ಸಹಾಯಕ ಪ್ರಾಧ್ಯಾಪಕರು, ಶುಶ್ರೂಷಕರು, ವಿಕಿರಣ ಚಿಕಿತ್ಸಾ ತಜ್ಞರು ಸೇರಿದಂತೆ ಅಗತ್ಯ ವೈದ್ಯ ಸಿಬ್ಬಂದಿಯನ್ನು ಒದಗಿಸಬೇಕಿದೆ. ಜತೆಗೆ 3ಡಿ ಲಿನ್ಯಾಕ್ (ಲೀನಿಯರ್ ಆ್ಯಕ್ಸಿಲರೇಟರ್) ಯಂತ್ರದ ಅಗತ್ಯವಿದೆ. ನಿರ್ವಹಣೆ ಇಲ್ಲದೆ ಸೊರಗಿರುವ ವಿಭಾಗದ ಕಟ್ಟಡವನ್ನು ನವೀಕರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಹಾಗಾದಲ್ಲಿ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸೇವೆ ದೊರೆಯಲಿದೆ. ಜತೆಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ವಿಭಾಗದ ವೈದ್ಯರು.
ಹಳೆಯ ಪದ್ಧತಿಯಲ್ಲಿ ಚಿಕಿತ್ಸೆ :
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಕ್ಯಾನ್ಸರ್ ವಿಭಾಗ 1965ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಲಾಲ್ಬಹದ್ದೂರ್ ಶಾಸ್ತ್ರಿ ಅವರಿಂದ ಉದ್ಘಾಟನೆಗೊಂಡಿತ್ತು. ಕೆಲ ವರ್ಷಗಳಿಂದ ವೈದ್ಯರ ಕೊರತೆ, ನಿರ್ವಹಣೆ ಇಲ್ಲದೆ ವಿಭಾಗದಲ್ಲಿ ಸೂಕ್ತ ಸೇವೆ ದೊರೆಯುತ್ತಿರಲಿಲ್ಲ. ಹಳೆಯದಾದ '2ಡಿ ಕೊಬಾಲ್ಟ್ 60' ಯಂತ್ರವನ್ನು ಬಳಸಿಕೊಂಡು ನಿತ್ಯ ಬೆರಳೆಣಿಕೆಯಷ್ಟು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯದ ಕಾರಣ ರೋಗಿಗಳು ಬಂದರೂ ಅರ್ಧಕ್ಕೆ ವಾಪಸ್ ಹೋಗುತ್ತಿದ್ದರು.
''ವಿಕ್ಟೋರಿಯಾದಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಇದೆ ಎಂಬ ಮಾಹಿತಿಯೇ ಹೆಚ್ಚಿನವರಿಗೆ ಇಲ್ಲ. ಇದೀಗ ಸರಕಾರ ಹೊರ ರೋಗಿಗಳ ಸೇವೆಯೊಂದಿಗೆ ಕಿಮೋಥೆರಪಿ, ರೇಡಿಯೋ ಥೆರಪಿ ಹಾಗೂ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿರುವುದರಿಂದ ಇನ್ನು ಮುಂದೆ ರೋಗಿಗಳು ವಿಕ್ಟೋರಿಯಾದಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗಾಗಿ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಬೇಗ ಒದಗಿಸಿದರೆ ರೋಗಿಗಳಿಗೆ ಅನುಕೂಲವಾಗಲಿದೆ,'' ಎನ್ನುತ್ತಾರೆ ವಿಕಿರಣ ಚಿಕಿತ್ಸಾ ವೈದ್ಯ ಡಾ. ಮದುಸೂದನ್.