ಆ್ಯಪ್ನಗರ

ಜ.22 ರಿಂದ 28ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಕೊರೊನಾ ಜಾಗೃತಿಗೆ ಆದ್ಯತೆ

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ರಾಜ್ಯ ತೋಟಗಾರಿಕಾ ಇಲಾಖೆ ತೀರ್ಮಾನಿಸಿದ್ದು, ಪ್ರದರ್ಶನದಲ್ಲಿ ಕೊರೊನಾ ಕುರಿತು ಜಾಗೃತಿಗೆ ಆದ್ಯತೆ ನೀಡಲಾಗುತ್ತಿದೆ. ಜ.22 ರಿಂದ 28ರವರೆಗೆ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ.

Vijaya Karnataka Web 14 Jan 2021, 4:59 pm
ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜ.22 ರಿಂದ 28ರವರೆಗೆ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ರಾಜ್ಯ ತೋಟಗಾರಿಕಾ ಇಲಾಖೆ ತೀರ್ಮಾನಿಸಿದ್ದು, ಪ್ರದರ್ಶನದಲ್ಲಿ ಕೊರೊನಾ ಕುರಿತು ಜಾಗೃತಿಗೆ ಆದ್ಯತೆ ನೀಡಲಾಗುತ್ತಿದೆ.
Vijaya Karnataka Web lalbagh


ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಏರ್ಪಡಿಸಲಾಗುವುದು. ಕೊರೊನಾ ಜಾಗೃತಿಯೇ ಈ ಬಾರಿಯ ಪ್ರದರ್ಶನದ ಮುಖ್ಯ ವಿಷಯವಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಫೌಸಿಯಾ ತರುನಂ ತಿಳಿಸಿದರು.

ಕೊರೊನಾ ವೈರಸ್‌ಗಳಿಂದ ಆವರಿಸುವ ಗ್ಲೋಬ್‌ಅನ್ನು ವೈದ್ಯರು ಎತ್ತಿ ಹಿಡಿದಿರುವ ಹೂವಿನ ಕಲಾಕೃತಿ ಗಾಜಿನ ಮನೆಯಲ್ಲಿವಿಶೇಷ ಆಕರ್ಷಣೆಯಾಗಿರಲಿದೆ. ಇಡೀ ವಿಶ್ವ ವೈದ್ಯರಿಂದ ರಕ್ಷಿಸಲ್ಪಟ್ಟಿದೆ ಎಂಬ ಪರಿಕಲ್ಪನೆಯೊಂದಿಗೆ ಕಲಾಕೃತಿ ನಿರ್ಮಿಸಲಾಗುತ್ತಿದೆ. ನಾನಾ ಪ್ರತಿಮೆ ಮತ್ತು ಹೂವಿನ ಚಿತ್ರಗಳ ಮೂಲಕ ಕೊರೊನಾ ಹಾವಳಿ ಮತ್ತು ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನರನ್ನು ಸೆಳೆಯಲು ನಿರ್ಧರಿಸಲಾಗಿದೆ. ಕೊರೊನಾ ವಾರಿಯರ್ಸ್ಗಳಾದ ನರ್ಸ್‌, ಡಾಕ್ಟರ್‌, ಆಶಾ ಕಾರ್ಯಕರ್ತರ ಪ್ರತಿಮೆ ನಿರ್ಮಿಸಿ ಹೂಗಳ ಅಲಂಕಾರದ ಮೂಲಕ ಪುಷ್ಪನಮನ ಸಲ್ಲಿಸಲು ನಿರ್ಧರಿಸಲಾಗಿದೆ.

ಗಣರಾಜ್ಯೋತ್ಸವಕ್ಕೂ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಇಲ್ಲ..! ಕೊರೊನಾ ಭೀತಿಯಿಂದ ರದ್ದು

ಪ್ರವೇಶ ಶುಲ್ಕ, ಸುರಕ್ಷತೆ ಮತ್ತು ಭದ್ರತೆ, ಸಾರ್ವಜನಿಕರಿಗೆ ಮೂಲ ಸೌಲಭ್ಯ ಇತ್ಯಾದಿಗಳ ಬಗ್ಗೆ ಶುಕ್ರವಾರದ ನಂತರ ತೀರ್ಮಾನವಾಗಲಿದೆ. ಪ್ರದರ್ಶನ ಆಯೋಜಿಸುವ ಬಗ್ಗೆ ನಿರ್ಧಾರ ತಡವಾಗಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿಹೆಚ್ಚಿನ ಆಕರ್ಷಣೆಗಳು ಇಲ್ಲದೆ ಸರಳವಾಗಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ