Please enable javascript.ಸರಣಿ ಅಪಘಾತ: ನಾಲ್ವರ ಸ್ಥಿತಿ ಗಂಭೀರ - Road Accident: Four Injured - Vijay Karnataka

ಸರಣಿ ಅಪಘಾತ: ನಾಲ್ವರ ಸ್ಥಿತಿ ಗಂಭೀರ

Vijaya Karnataka Web 9 Mar 2015, 4:00 am
Subscribe

ಅತ್ತಿಬೆಲೆ ಸಮೀಪದ ವಾಣಿಜ್ಯ ತೆರಿಗೆ ತನಿಖೆ ಠಾಣೆ ಬಳಿ ಹೆದ್ದಾರಿಯಲ್ಲಿ ಮೂರು ವಾಹನಗಳ ಮಧ್ಯೆ ನಡೆದ ಸರಣಿ ಅಫಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

road accident four injured
ಸರಣಿ ಅಪಘಾತ: ನಾಲ್ವರ ಸ್ಥಿತಿ ಗಂಭೀರ
ಆನೇಕಲ್: ಅತ್ತಿಬೆಲೆ ಸಮೀಪದ ವಾಣಿಜ್ಯ ತೆರಿಗೆ ತನಿಖೆ ಠಾಣೆ ಬಳಿ ಹೆದ್ದಾರಿಯಲ್ಲಿ ಮೂರು ವಾಹನಗಳ ಮಧ್ಯೆ ನಡೆದ ಸರಣಿ ಅಫಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಲಕರಾದ ಮಂಜುನಾಥ್, ಪ್ರಸನ್ನ (39), ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾವ್ಯ (13) ಹಾಗೂ ತನ್ವಿ (5) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಕಡೆಯಿಂದ ಅತ್ತಿಬೆಲೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಹೆದ್ದಾರಿ ಮಧ್ಯೆ ಇದ್ದ ರಸ್ತೆ ವಿಭಜಕದ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಪಕ್ಕದ ಮಾರ್ಗಕ್ಕೆ ನುಗ್ಗಿದೆ. ಇದೇ ಸಮಯದಲ್ಲಿ ಬೆಂಗಳೂರು ಕಡೆಗೆ ಹೊರಟಿದ್ದ ಕಂಟೇನರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ನಂತರ ಕಂಟೇನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಮೂರು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಗಾಯಾಳುಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ