ಆ್ಯಪ್ನಗರ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಗಂಧದ ಮರ ಕಳ್ಳತನಕ್ಕೆ ಬ್ರೇಕ್

ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಧದ ಮರ ಕಳುವಾಗಿತ್ತು. ಮುಖ್ಯ ನ್ಯಾಯಾಧೀಶರ ಮನೆ , ಆಕಾಶವಾಣಿ ಆವರಣದಲ್ಲಿ, ಎಸ್.ಜೆ .ಪಾಲಿಟೆಕ್ನಿಕ್, ಪ್ರೆಸ್ಟಿಜ್ ಅಪಾರ್ಟ್ ಮೆಂಟ್, ಐಐಎಸ್ ಸಿ ಹೆಚ್.ಎಸ್.ಆರ್.ಲೇಔಟ್ ನ ಐಎಎಸ್ ಅಧಿಕಾರಿ ಮನೆ ಸೇರಿದಂತೆ ಹಲವು ಕಡೆ ಗಂಧದ ಮರ ಕಳ್ಳತನವಾಗಿತ್ತು.

Vijaya Karnataka Web 11 Dec 2018, 3:01 pm
ಬೆಂಗಳೂರು: ಗಂಧದ ಮರದ ಕಳ್ಳತನ ಮಾಡುತ್ತ ನಗರದ ಪೊಲೀಸರಿಗೆ ತಲೆನೋವಾಗಿದ್ದ ನಟೋರಿಯಸ್ ಕಳ್ಳ ಸಹೋದರರ ಸಮೇತ 5 ಮಂದಿ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸುವ ಮೂಲಕ ಕಬ್ಬನ್ ಪಾರ್ಕ್ ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಎರಡು ವರ್ಷಗಳಿಂದ ಎಗ್ಗಿಲ್ಲದೇ ನಡೆಯುತ್ತಿದ್ದ ಕಳ್ಳತನಕ್ಕೆ ಬ್ರೇಕ್ ಹಾಕಿದ್ದಾರೆ.
Vijaya Karnataka Web Arrest 23


ರಾಮಸ್ವಾಮಿ, ರಂಗನಾಥ್, ಲಕ್ಷ್ಮಣ್ ಮತ್ತು ಪ್ರಮುಖ ಆರೋಪಿಗಳಾದ ಇಮ್ದಾದುಲ್ಲಾ ಹಾಗೂ ಮುಜಾಹಿದ್ದುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ.

ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಧದ ಮರ ಕಳುವಾಗಿತ್ತು. ಮುಖ್ಯ ನ್ಯಾಯಾಧೀಶರ ಮನೆ , ಆಕಾಶವಾಣಿ ಆವರಣದಲ್ಲಿ, ಎಸ್.ಜೆ .ಪಾಲಿಟೆಕ್ನಿಕ್, ಪ್ರೆಸ್ಟಿಜ್ ಅಪಾರ್ಟ್ ಮೆಂಟ್, ಐಐಎಸ್ ಸಿ ಹೆಚ್.ಎಸ್.ಆರ್.ಲೇಔಟ್ ನ ಐಎಎಸ್ ಅಧಿಕಾರಿ ಮನೆ ಸೇರಿದಂತೆ ಹಲವು ಕಡೆ ಗಂಧದ ಮರ ಕಳ್ಳತನವಾಗಿತ್ತು.

ತಮಿಳುನಾಡಿನಿಂದ ಬಂದ ಗ್ಯಾಂಗ್ ಗಂಧದ ಮರ ಕಡಿಯುತ್ತಿದ್ದರು ಅನ್ನೋ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಸೇಲಂ ಬಳಿಯ ಅರ್ಕಾಟ್‌ನಲ್ಲಿ ಮೂವರನ್ನ ವಶಕ್ಕೆ ಪಡೆದಿದ್ದರು.
ತಮಿಳುನಾಡಿನ ರಾಮಸ್ವಾಮಿ, ರಂಗನಾಥ್ ಹಾಗೂ ಲಕ್ಷಣ್‌ನನ್ನು ಬಂಧಿತರಾಗಿದ್ದಾರೆ. ಲಕ್ಷ್ಮಣ್ ಬಿಬಿಎಂಪಿಯಲ್ಲಿ ತಾತ್ಕಾಲಿಕವಾಗಿ ಮರ ಕಟಿಂಗ್ ಮಾಡೊ ಕೆಲಸ ಮಾಡ್ತಿದ್ದ.
ಹೀಗಾಗಿ ಬೆಂಗಳೂರಿನ ಎಲ್ಲಾ ಏರಿಯಾಗಳು ಲಕ್ಷ್ಮಣ್‌ಗೆ ಗೊತ್ತಿತ್ತು.

ರಂಗನಾಥ್ ರೆಕ್ಕಿ ಕೆಲಸ ಮಾಡುತ್ತ ಪ್ರತಿಷ್ಠಿತ ಸರ್ಕಾರಿ ಬಂಗಲೆಗಳಲ್ಲಿರೋ ಗಂಧದ ಮರ ಪತ್ತೆ ಮಾಡ್ತಿದ್ದ. ಇದಕ್ಕಾಗಿ ಪ್ರತಿ ಮರಕ್ಕೆ 10ಸಾವಿರ ಹಣ ಪಡೆಯುತ್ತಿದ್ದ. ಲಕ್ಷ್ಮಣ್ ಮರ ಕಡಿದು ಸಾಗಾಟನೆ ಮಾಡ್ತಿದ್ದ. ಇಮ್ದಾದುಲ್ಲಾ ಹಾಗೂ ಮುಜಾಹಿದ್ದುಲ್ಲಾ ಸಹೋದರರು ಈ ಕಳ್ಳತನದಲ್ಲಿ ಪಾಲುದಾರರಾಗಿದ್ದರು. ಇವರಿಬ್ಬರು ಲಕ್ಷ್ಮಣ್ ಮತ್ತು, ರಾಮಸ್ವಾಮಿಗೆ ಊಟ ಮತ್ತು ವಸತಿ ನೀಡಿ ಕಳ್ಳತನ ಮಾಡಿಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಇಬ್ಬರು ಸಹೋದರರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿ ಮಾಡಿ ಕರೆತರಲಾಗ್ತಿತ್ತು.

ಈ ವೇಳೆ ಮುಜಾಹಿದ್ದುಲ್ಲಾ ಕೈ ಕೋಳದ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಶರಣಾಗುವಂತೆ ಸೂಚನೆ ನೀಡಿದರೂ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ.
ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸಪೆಕ್ಟರ್ ಐಯಣ್ಣ ರೆಡ್ಡಿ ಕಳ್ಳನ ಕಾಲಿಗೆ ಗುಂಡಿಕ್ಕಿದ್ದಾರೆ.ಈ ಕಳ್ಳರ ಗ್ಯಾಂಗ್ ಬೆಂಗಳೂರಿನಲ್ಲಿ ಒಟ್ಟು 60 ಗಂಧದ ಮರ ಕಳವು ಪ್ರಕರಣಗಳು ಬಯಲಾಗಿದ್ದು, ಇವರು ಪ್ರತಿಷ್ಟಿತ ಏರಿಯಾಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಆಂಧ್ರದ ರೆಡ್ ಸ್ಯಾಂಡಲ್‌ವುಡ್ ಖದೀಮರ ಜೊತೆ ಸಹ ಈ ಸಹೋದರರು ಕೈ ಜೋಡಿಸಿರೋ ಶಂಕೆ ಪೊಲೀಸರಿಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ