ಏಷ್ಯನ್ ಯೋಗ ಚಾಂಪಿಯನ್ ಶಿಪ್ಗೆ ಪುತ್ತೂರಿನ ಸಂಧ್ಯಾ ಎನ್ ಭಟ್ ಆಯ್ಕೆ
ರಾಷ್ಟ್ರ ಮಟ್ಟದ ಮುಕ್ತ ಯೋಗ ಚ್ಯಾಂಪಿಯನ್ಶಿಪ್ನಲ್ಲಿ ಪುತ್ತೂರು ಮಾಜಿ ಶಾಸಕ, ಹಿರಿಯ ಮುಖಂಡ ಉರಿಮಜಲು ರಾಮಭಟ್ ಅವರ ಪುತ್ರಿ ಸಂಧ್ಯಾ ಎನ್ ಭಟ್ ಏಷ್ಯನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಫೆಡೆರೇಷನ್ನ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಅವರು, ಸಂಧ್ಯಾ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
Vijaya Karnataka Web 30 Nov 2018, 3:03 pm
ಬೆಂಗಳೂರು: ರಾಷ್ಟ್ರೀಯ ಯೋಗ ಹಾಗೂ ಸ್ಪೋರ್ಟ್ಸ್ ಫೆಡರೇಷನ್ ಸಂಸ್ಥೆ ಪಂಜಾಬಿನ ಪಟಿಯಾಲದಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೋಗ ಚಾಪಿಯನ್ಶಿಪ್ನ ಮಹಿಳಾ ವಿಭಾಗದಲ್ಲಿ ಪುತ್ತೂರಿನ ಶ್ರೀಮತಿ ಸಂಧ್ಯಾ ಎನ್ ಭಟ್ ಏಷ್ಯನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಫೆಡೆರೇಷನ್ನ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಅವರು, ಸಂಧ್ಯಾ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುವ ಸಂಧ್ಯಾ, ಸೆಪ್ಟೆಂಬರ್ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
ಯೋಗಾಚಾರ್ಯ ಡಾ. ಪಿ.ಯನ್. ಗಣೇಶ್ ಕುಮಾರ್ ಅವರ ಶಿಷ್ಯೆಯಾಗಿರುವ ಅವರು, ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.
ಸಂಧ್ಯಾ ಅವರು ಪುತ್ತೂರಿನ ಮಾಜಿ ಶಾಸಕ, ಜನಸಂಘದ ಹಿರಿಯ ನಾಯಕ ಹಾಗೂ ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಲಾಲ್ ಕೃಷ್ಣ ಅಡ್ವಾಣಿ ಅವರ ಆಪ್ತರೂ ಆಗಿದ್ದ ಉರಿಮಜಲು ರಾಮಭಟ್ ಅವರ ಪುತ್ರಿ ಹಾಗೂ ಪಟ್ಣಡ್ಕ ನಾರಾಯಣ ಭಟ್ ಅವರ ಪತ್ನಿ.
ಫೆಡೆರೇಷನ್ನ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಅವರು, ಸಂಧ್ಯಾ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುವ ಸಂಧ್ಯಾ, ಸೆಪ್ಟೆಂಬರ್ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
ಯೋಗಾಚಾರ್ಯ ಡಾ. ಪಿ.ಯನ್. ಗಣೇಶ್ ಕುಮಾರ್ ಅವರ ಶಿಷ್ಯೆಯಾಗಿರುವ ಅವರು, ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.
ಸಂಧ್ಯಾ ಅವರು ಪುತ್ತೂರಿನ ಮಾಜಿ ಶಾಸಕ, ಜನಸಂಘದ ಹಿರಿಯ ನಾಯಕ ಹಾಗೂ ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಲಾಲ್ ಕೃಷ್ಣ ಅಡ್ವಾಣಿ ಅವರ ಆಪ್ತರೂ ಆಗಿದ್ದ ಉರಿಮಜಲು ರಾಮಭಟ್ ಅವರ ಪುತ್ರಿ ಹಾಗೂ ಪಟ್ಣಡ್ಕ ನಾರಾಯಣ ಭಟ್ ಅವರ ಪತ್ನಿ.