ಆ್ಯಪ್ನಗರ

ನೀರು ಉಳಿಸುವುದು ಇಂದಿನ ಅಗತ್ಯ|

ಚಂಡೀಗಡದಲ್ಲಿ ನೀರಿನ ದುರ್ಬಳಕೆ ತಡೆಯಲು, ಅಲ್ಲಿನ ಸರಕಾರದವರು ನೀರನ್ನು ವ್ಯರ್ಥ ಮಾಡಿದವರಿಗೆ ದಂಡ ಹಾಕುತ್ತಿದ್ದಾರೆ. 2000 ರೂಪಾಯಿವರೆಗೆ ದಂಡ ವಿಧಿಸುತ್ತಿದ್ದಾರೆ.

Vijaya Karnataka Web 24 Mar 2018, 9:18 am
ಈ ವಾರದ ನನ್ನ ಶೋ ಹಾಯ್‌ ಬೆಂಗಳೂರಿನಲ್ಲಿ ನೀರಿನ ಬಗ್ಗೆ ಮಾತಾಡಿದೆ. ಚಂಡೀಗಡದಲ್ಲಿ ನೀರಿನ ದುರ್ಬಳಕೆ ತಡೆಯಲು, ಅಲ್ಲಿನ ಸರಕಾರದವರು ನೀರನ್ನು ವ್ಯರ್ಥ ಮಾಡಿದವರಿಗೆ ದಂಡ ಹಾಕುತ್ತಿದ್ದಾರೆ. 2000 ರೂಪಾಯಿವರೆಗೆ ದಂಡ ವಿಧಿಸುತ್ತಿದ್ದಾರೆ. ಲಾನ್‌, ಕಾರ್‌ ಕ್ಲೀನಿಂಗ್‌, ಮನೆಯಂಗಳ ಯಾವುದಕ್ಕೂ ಪೈಪ್‌ ಬಳಸುವ ಹಾಗಿಲ್ಲ. ಏನಾದರೂ ವ್ಯರ್ಥ ಆಗೋದು ಕಂಡಲ್ಲಿ ತಕ್ಷಣ ದಂಡ ಹಾಕುತ್ತಾರೆ ಅಥವಾ ನೀರಿನ ಬಿಲ್‌ನಲ್ಲಿ ಅದನ್ನು ಸೇರಿಸುತ್ತಾರೆ. ವಿಡಿಯೋಗಳನ್ನು ತೆಗಿತಾರೆ. ಆಗ ಜನ ವಾದ ಮಾಡುವ ಹಾಗಿಲ್ಲ.
Vijaya Karnataka Web save water
ನೀರು ಉಳಿಸುವುದು ಇಂದಿನ ಅಗತ್ಯ|


ನಮ್ಮ ಬೆಂಗಳೂರಿನಲ್ಲಿ ಜನ ಹೇಗೆ ನೀರು ವ್ಯರ್ಥ ಮಾಡುತ್ತಾರೆ ಅಂತ ಕೇಳಿದಾಗ ಬಹಳಷ್ಟು ಉದಾಹರಣೆಗಳನ್ನು ಕೊಟ್ಟರು. ಆರ್‌ಒ ಕುಡಿಯೊ ನೀರಿಂದ ವ್ಯರ್ಥವಾಗುತ್ತೆ. ಕಾರು ತೊಳಿಯೋದಕ್ಕೆ ಮಕ್ಕಳನ್ನು ಕರ್ಕೊಂಡು ಹೋದಾಗ, ಪಾತ್ರೆ ತೊಳಿದಾಗ, ಸಾಕು ಪ್ರಾಣಿಗಳ ಸ್ನಾನ, ನಲ್ಲಿಗಳು ಸೋರಿದಾಗ ಸರಿಪಡಿಸದೇ ಇದ್ದಾಗ, ಓವರ್‌ ಫ್ಲೋ ಆಗೋ ವಾಟರ್‌ ಟ್ಯಾಂಕ್‌, ಓವರ್‌ ಹೆಡ್‌ ಟ್ಯಾಂಕ್‌, ಸ್ನಾನಕ್ಕೆ ಶವರ್‌ ಬಳಿಸಿದಾಗ, ಮದುವೆ ಮನೆಗಳಲ್ಲಿ ನೀರಿನ ಬಾಟಲಿ ಕೊಟ್ಟಾಗ, ಹೋಟೆಲ್‌ಗಳಲ್ಲಿ ಬೇಡ ಅಂದ್ರೂ, ತುಂಬಿಸೋ ಲೋಟಗಳು, ಈ ತರ ಎಷ್ಟೋ ಕಡೆ ನೀರು ವ್ಯರ್ಥವಾಗುತ್ತದೆ ಅಂತ ಹೇಳಿದರು. ಇದರಿಂದ ಏನು ಗೊತ್ತಾಗುತ್ತದೆ ಎಂದರೆ, ನಮೆಲ್ಲರಲ್ಲೂ ನೀರು ಅಮೂಲ್ಯ ಎಂದು ಗೊತ್ತಿದೆ. ಅದನ್ನ ಉಳಿಸಬೇಕೆಂದು ತಿಳಿದಿದೆ. ಆದರೆ ಕೆಲವರು ಅದನ್ನು ಪಾಲಿಸಲು ಹಿಂಜರಿಯುತ್ತಾರೆ.

ಗುರುವಾರ ವಿಶ್ವ ನೀರಿನ ದಿನ ಆಚರಿಸಲಾಗಿದೆ. ಯುನೆಸ್ಕೊ ವರದಿ ಪ್ರಕಾರ 2050ರ ವೇಳಗೆ ನಮ್ಮ ದೇಶದಲ್ಲಿ ನೀರಿನ ಕೊರತೆ ವಿಪರೀತವಾಗುತ್ತದೆ. ಕೇವಲ ನದಿಗಳು ಕೆರೆಗಳು ಅಷ್ಟೇ ಅಲ್ಲ, ಅಂತರ್ಜಲ ಕೂಡ ಕಲುಷಿತ. ಇತ್ತೀಚಿಗೆ ದಕ್ಷಿಣಾ ಆಫ್ರಿಕಾದ ಕೇಪ್‌ಟೌನ್‌ ನೀರಿನ ವಿಷಯದಲ್ಲಿ ಹೆಸರು ಮಾಡಿದೆ. ಅಲ್ಲಿ ನೀರಿನ ಕೊರತೆ ವಿಪರೀತ ಇದ್ದು ಅತೀ ಶೀಘ್ರದಲ್ಲಿ 'ಡೇ ಜೀರೊ' ಜಾರಿಗೆ ಬರುತ್ತದೆ ಅಂತ ಹೇಳಿದ್ದಾರೆ. ಅವತ್ತಿನ ದಿನ ಸರಕಾರದವರು ಎಲ್ಲ ಕಡೆ ನೀರು ಬಂದ್‌ ಮಾಡ್ತಾರೆ. ನಮ್ಮ ಬೆಂಗಳೂರಿನಲ್ಲೂ ಎಷ್ಟೋ ಕಡೆ ನೀರಿನ ಸಮಸ್ಯೆ ಇದೆ. ಒಂದು ದಿನಕ್ಕೆ ಪ್ರತಿಯೊಬ್ಬರಿಗೂ 135 ಲೀಟರ್‌ ನೀರು ಬೇಕು. ಆದರೆ 2031 ಅಷ್ಟರಲ್ಲಿ ಕೇವಲ 88 ಲೀಟರ್‌ಗಳು ಮಾತ್ರ ಸಿಗುತ್ತದೆ. ನಮ್ಮಲ್ಲಿ ಮಳೆ ಚೆನ್ನಾಗಿ ಬಂದರೂ ಮಳೆ ನೀರು ಸಂಗ್ರಹಣೆ ಸರಿಯಾಗಿ ಮಾಡದ ಕಾರಣ ಬಹಳ ನೀರು ವ್ಯರ್ಥವಾಗುತ್ತಿದೆ.

ಸರಕಾರದವರು ಈಗ ಸ್ವಲ್ಪ ಕಟ್ಟುನಿಟ್ಟಾಗಿ ಮಳೆ ನೀರು ಕೊಯ್ಲು ಕಾಯಿದೆಯನ್ನ ಜಾರಿಗೆ ತಂದಿದ್ದಾರೆ. ಈ ನಡುವೆ ನಾವು ನೀರನ್ನು ಉಳಿಸೋ. ನೀರು ಉಳಿಸಿ, ಯೋಚನೆ ಮಾಡಿಕೊಂಡು ಬಳಸೋಣ. ಎಲ್ಲರಿಗೂ ಇದನ್ನು ತಿಳಿಸಿ. ನಾನು ಹೇಳಿರುವುದನ್ನ ಪರಿಗಣಿಸಿ. ನಿಮ್ಮ ಮನೆಗಳಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಪರಿಶೀಲಿಸಿ. ನೀರಿನ ವಿಷಯದಲ್ಲಿ ತಪ್ಪು ಹೇಳಿದ್ದರೆ ಕ್ಷ ಮಿಸಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ