ಆ್ಯಪ್ನಗರ

ಕೊರೊನಾ ನಿಯಂತ್ರಣ: ‘ಸೀಲ್‌ ಡೌನ್’ ಜಾರಿಯಲ್ಲಿದ್ದರೂ ಜನ ಸಂಚಾರಕ್ಕಿಲ್ಲ ಬ್ರೇಕ್

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಎರಡು ಪ್ರದೇಶಗಳಲ್ಲಿ ಸೀಲ್‌ ಡೌನ್ ಜಾರಿಯಲ್ಲಿದೆ. ಪ್ರಾಯೋಗಿಕವಾಗಿ ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಸೀಲ್‌ಡೌನ್ ಜಾರಿಗೊಳಿಸಲಾಗಿದೆ. ಹೀಗಿದ್ದರೂ ಜನರು ಮನೆಯಿಂದ ಹೊರಬರುತ್ತಿದ್ದಾರೆ.

Vijaya Karnataka Web 12 Apr 2020, 10:00 am
ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಲವೊಂದು ಹಾಟ್‌ಸ್ಪಾಟ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಬಾಪೂಜಿನಗರದಲ್ಲಿ ಪ್ರಾಯೋಗಿಕವಾಗಿ ಸೀಲ್‌ ಡೌನ್‌ ಜಾರಿಯಲ್ಲಿದೆ. ಹೀಗಿದ್ದರೂ ಜನರ ಓಡಾಟ ಮಾತ್ರ ನಿಂತಿಲ್ಲ.
Vijaya Karnataka Web seal down to control coronavirus people not follow rules in bengaluru
ಕೊರೊನಾ ನಿಯಂತ್ರಣ: ‘ಸೀಲ್‌ ಡೌನ್’ ಜಾರಿಯಲ್ಲಿದ್ದರೂ ಜನ ಸಂಚಾರಕ್ಕಿಲ್ಲ ಬ್ರೇಕ್


ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಬಿಬಿಎಂಪಿ ಈ ನಿರ್ಧಾರವನ್ನು ಕೈಗೊಂಡಿದೆ. ಹಾಟ್‌ಸ್ಪಾಟ್‌ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ಮೂಲಕ ಕೊರೊನಾ ನಿಯಂತ್ರಣ ಮಾಡುವುದು ಸರ್ಕಾರದ ಯೋಜನೆಯಾಗಿದೆ.

ನಿಲ್ಲದ ಪಡಿತರ ಪರದಾಟ: ಸಾವಿರಾರು ಅಂಗಡಿಗಳಿಗೆ ಇನ್ನೂ ತಲುಪದ ಆಹಾರ ಧಾನ್ಯ

ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಇವರೆಡು ಪ್ರದೇಶಗಳಲ್ಲಿ ಜಾರಿಗೆ ತಂದರೂ ಅದು ಯಶಸ್ವಿಯಾಗಿಲ್ಲ. ಭಾನುವಾರ ಸೀಲ್‌ಡೌನ್‌ ಜಾರಿಯ ನಡುವೆಯೂ ಜನರು ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಮನೆಯಿಂದ ಹೊರಬರುತ್ತಿದ್ದಾರೆ.

ಸೀಲ್‌ಡೌನ್‌ ಪ್ರಾಯೋಗಿಕ ಘೋಷಣೆ ಮಾಡಿದರೂ ಅದನ್ನು ಯಶಸ್ವಿಗೊಳಿಸಲು ಸರ್ಕಾರ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿಲ್ಲ. ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದರೂ ಅದು ಜಾರಿಗೆ ಬಂದಿಲ್ಲ. ಇದಕ್ಕೆ ಅಗತ್ಯ ತಯಾರಿಗಳನ್ನು ಮಾಡದೇ ಇರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ಲಾಕ್ ಡೌನ್ ಹಿನ್ನಲೆ: ಗವಿಮಠದ ಗಜರಾಜನಿಗೆ ಆಹಾರದ ಕೊರತೆ, ಸಹಾಯಕ್ಕಾಗಿ ಮಾವುತ ಜನರ ಮೊರೆ!

ಇದರ ಪರಿಣಾಮ ಜನರು ಅನಿವಾರ್ಯವಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಜನರ ಓಡಾಟ ಹಾಗೂ ವಾಹನಗಳ ಓಡಾಟವನ್ನು ನಿರ್ಬಂಧಿಸಿ ಅಲ್ಲಲ್ಲಿ ರಸ್ತೆಗಳನ್ನು ಸಂಪೂರ್ಣವಾಗಿ ಬ್ಲಾಕ್‌ ಮಾಡಲಾದರೂ ಜನ ಸಂಚಾರವಿದೆ.

ಸದ್ಯ ಇವೆರಡು ಪ್ರದೇಶಗಳಲ್ಲಿ ಪ್ರಾಯೋಗಿಕ ಸೀಲ್‌ಡೌನ್ ಜಾರಿಯಲ್ಲಿದ್ದು ಮುಂದಿನ ದಿನಗಳಲ್ಲಿ ಬೇರೆ ಕಡೆಗಳಲ್ಲೂ ಸೀಲ್‌ಡೌನ್‌ ಜಾರಿಗೊಳಿಸುವುದು ಸರ್ಕಾರ ಚಿಂತನೆ. ಆದರೆ ಪುರ್ವ ತಯಾರಿಗಳಿಲ್ಲದೆ ಸೀಲ್‌ಡೌನ್ ಜಾರಿಗೆ ತಂದರೆ ಜನರೂ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ