ಆ್ಯಪ್ನಗರ

ಶಬರಿಮಲೆ ತೀರ್ಪು: ಮರುಪರಿಶೀಲನೆಗೆ ಆಗ್ರಹ

ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ತೀರ್ಪನ್ನು ಮರುಪರಶೀಲಿಸುವಂತೆ ಅಯ್ಯಪ್ಪ ದೇವಾಲಯ ಸಂಘವು ಒತ್ತಾಯಿಸಿ, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ.

TIMESOFINDIA.COM 15 Oct 2018, 4:01 pm
[This story originally published in Times of India oct 15, 2018]
Vijaya Karnataka Web shabarimal


ಬೆಂಗಳೂರು: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ, ಅಯ್ಯಪ್ಪ ಭಕ್ತರು ಫ್ರೀಂಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ 45 ಅಯ್ಯಪ್ಪ ದೇವಸ್ಥಾನಗಳ ಆಡಳಿತ ವರ್ಗ, ಅಯ್ಯಪ್ಪ ದೇವಾಲಯಗಳ ಸಂಘವು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಬಹುದು ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವಂತೆ ಅವರು ಆಗ್ರಹಿಸಿದರು.

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶ ನಿಷೇಧ ಇರುವುದು ಸಾವಿರಾರು ವರ್ಷಗಳಿಂದ ನಡೆದು ಬಂದ ಆಚರಣೆ. 10 ವರ್ಷದೊಳಗೆ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ದೇವಾಲಯ ಇರುವ ಸ್ಥಳ, ತಲುಪುವ ಬಗೆ, ದಾರಿ ದುರ್ಗಮವಾಗಿರುವುದು ಇದಕ್ಕೆ ಕಾರಣವಷ್ಟೇ ಹೊರತು, ಇಲ್ಲಿ ಲಿಂಗ ಸಮಾನತೆಯ ವಿಚಾರವೇ ಇಲ್ಲ ಎಂದು ಅಖಿಲ ಭಾರತೀಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಪ್ರಧಾನ ಕಾರ್ಯದರ್ಶಿ ಬಿ ಜೆ ಪ್ರಕಾಶ್ ಹೇಳಿದ್ದಾರೆ.

ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ವಿಚಾರ. ಸ್ವತಃ ಮಹಿಳೆಯರೇ ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಮಹಿಳೆಯರ ಒಂದು ವರ್ಗ ಮಾತ್ರ ಕಟ್ಟುಪಾಡುಗಳನ್ನು ಬದಿಗೊತ್ತಲು ಯತ್ನಿಸುತ್ತಿದೆ ಎಂದು ಹಿರಿಯ ಚಿತ್ರ ನಟ ಶಿವರಾಂ ಹೇಳಿದ್ದಾರೆ.

ಅ.16ರಿಂದ 6 ದಿನಗಳ ಕಾಲ ದೇವಾಲಯ ತೆರೆದಿರುತ್ತದೆ. ಶಬರಿಮಲೆಯ ಹಿರಿಯ ಅರ್ಚಕರನ್ನೂ ಈ ವಿಚಾರದಲ್ಲಿ ಕೋರ್ಟ್‌ ಅಭಿಪ್ರಾಯ ಕೇಳಬೇಕು. ಕಾನೂನು, ಸಂವಿಧಾನದ ದೃಷ್ಟಿಯಿಂದ ಮಾತ್ರ ಈ ವಿಚಾರವನ್ನು ನೋಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಧಾರ್ಮಿಕ ವಿಚಾರಗಳನ್ನು ಕೇವಲ ಸಂವಿಧಾನದ ಆಧಾರದಲ್ಲಿ ಪರಿಗಣಿಸಬಾರದು ಎಂದು ವಕೀಲ ವಿಜಯಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ