ಆ್ಯಪ್ನಗರ

ರಂಗಾಸಕ್ತರಿಗೆ ಸಿಹಿಸುದ್ದಿ; ಬೆಂಗಳೂರಿನಲ್ಲಿ ಇಂದಿನಿಂದ ನ.26ರವರೆಗೆ 'ಶಂಕರ್‌ನಾಗ್‌ ನಾಟಕೋತ್ಸವ’ ಹಬ್ಬ

ಕೊರೊನಾ ನಂತರ ಆಯೋಜನೆಯಾಗುತ್ತಿರುವ ಮೊದಲ ನಾಟಕೋತ್ಸವ ಇದಾಗಿದ್ದು, ಸೋಮವಾರದಿಂದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಶಂಕರ್‌ನಾಗ್‌ ನಾಟಕೋತ್ಸವದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ರಂಗತಂಡ ತೆಗೆದುಕೊಂಡಿದೆ.

Vijaya Karnataka Web 23 Nov 2020, 7:08 am
ಬೆಂಗಳೂರು: ಕೊರೋನೋತ್ತರದಲ್ಲಿ ರಂಗಭೂಮಿಯೂ ಕಳೆಗಟ್ಟುತ್ತಿರುವುದಕ್ಕೆ ಸಾಕ್ಷಿ ಎಂಬಂತೆ 'ಶಂಕರ್‌ನಾಗ್‌ ನಾಟಕೋತ್ಸವ' ಸೋಮವಾರದಿಂದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ.
Vijaya Karnataka Web shankarnag drama festival


ರಂಗಕರ್ಮಿಗಳಾದ ರಾಜ್‌ಗುರು ಮತ್ತು ನಯನ ಸೂಡ ಅವರ ಸಾತ್ವಿಕ ರಂಗಪಯಣದ ವತಿಯಿಂದ ನಡೆಯುತ್ತಿರುವ ಈ ನಾಟಕೋತ್ಸವದಲ್ಲಿ ನ.26ರವರೆಗೆ ವಿವಿಧ ನಾಟಕಗಳ ಪ್ರದರ್ಶನ ಹಾಗೂ ರಂಗಗೀತೆಗಳ ಪ್ರಸ್ತುತಿ, ಸಭಾ ಕಾರ್ಯಕ್ರಮ, ಶಂಕರ್‌ನಾಗ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಸಂಜೆ 6ರಿಂದ ಜಾನ್‌ ದೇವರಾಜ್‌ ಅವರಿಂದ 'ಬ್ಲ್ಯಾಕ್‌ ಆ್ಯಂಡ್‌ ವೈಟ್‌' ನಾಟಕ ಪ್ರದರ್ಶನವಿದೆ.

ಕರ್ನಾಟಕ ಬಂದ್ ನಡೆದೇ ನಡೆಯುತ್ತೆ, ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ, ವಾಟಾಳ್

ಬಳಿಕ 6.20ಕ್ಕೆ ಬಾಲು ಜಂಬೆ ತಂಡದಿಂದ 'ರಿದಂ' ಪ್ರದರ್ಶನವಿದೆ. ಸಂಜೆ 7 ಗಂಟೆಗೆ ರಂಗ ನಿರ್ದೇಶಕಿಯರಿಂದ ಉದ್ಘಾಟನಾ ಕಾರ‍್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಸಾತ್ವಿಕ ರಂಗತಂಡದಿಂದ 'ಸೂಫಿ ನಡಿಗೆ, ತತ್ವಪದದ ಕಡೆಗೆ' ಕಾರ್ಯಕ್ರಮಗಳು ನಡೆಯಲಿವೆ. ಆನಂತರ ಶಂಕರ್‌ನಾಗ್‌ ಅವರ ಸ್ನೇಹಿತರು, ಒಡನಾಡಿಗಳು ನಾಗರಕಟ್ಟೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ನಾನು ಅರಳಿ ಮರ, ನನಗೂ ನೋವಾಗುತ್ತದೆ! ಬೆಂಗಳೂರಿನಲ್ಲಿ ಹೀಗೊಂದು ಅಭಿಯಾನ

ನ. 24ರ ಸಂಜೆ 5.30ಕ್ಕೆ 'ಲಂಕೇಶರ ವಿಚಾರಗಳು ಮತ್ತು ನಾವು', 6.35ಕ್ಕೆ 'ನಾಗರಕಟ್ಟೆ', 7.45ಕ್ಕೆ 'ಶ್ರದ್ಧಾ' ನಾಟಕ ಪ್ರದರ್ಶನವಿರಲಿದೆ. ನ. 25ರಂದು ಸಂಜೆ 5.30ಕ್ಕೆ 'ಬದುಕು ಕಲಿಸಿದ ಬೇಂದ್ರೆ', 6.35ಕ್ಕೆ ನಾಗರಕಟ್ಟೆ, 7.30ಕ್ಕೆ 'ಸೋಮಾಲಿಯ ಕಡಲ್ಗಳ್ಳರು' ನಾಟಕ ಪ್ರದರ್ಶನವಿರುತ್ತದೆ. ನ. 26ರಂದು ಸಂಜೆ 5.30ಕ್ಕೆ ಶಂಕರ್‌ನಾಗ್‌ ನಟಿಸಿದ್ದ ನಾಟಕಗಳ ರಂಗಗೀತೆಗಳ ಪ್ರಸ್ತುತಿ, 6.30ಕ್ಕೆ ಸಭಾ ಕಾರ್ಯಕ್ರಮ ಮತ್ತು 'ಶಂಕರ್‌ನಾಗ್‌ ಪ್ರಶಸ್ತಿ' ಪ್ರದಾನ, 8 ಗಂಟೆಗೆ 'ಬಿದ್ದೂರಿನ ಬಿಗ್‌ಬೆನ್‌' ನಾಟಕ ಪ್ರದರ್ಶನ ಇರುತ್ತವೆ.

ಹೀಗೆ ಸಾಕಷ್ಟು ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ನಡೆಯಲಿವೆ. ಕೊರೊನಾ ನಂತರ ಆಯೋಜನೆಯಾಗುತ್ತಿರುವ ಮೊದಲ ನಾಟಕೋತ್ಸವ ಇದಾಗಿದ್ದು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ರಂಗತಂಡ ತೆಗೆದುಕೊಂಡಿದೆ. 2018ರಿಂದ ಆರಂಭವಾದ ಈ ನಾಟಕೋತ್ಸವ ಈ ವರ್ಷ ಕೊರೊನಾ ಕಾರಣದಿಂದ ಕೊಂಚ ತಡವಾಗಿ ನಡೆಯುತ್ತಿದೆ ಎಂದು ಆಯೋಜಕರಾದ ರಾಜ್‌ಗುರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ