ಆ್ಯಪ್ನಗರ

ತುಮಕೂರು ರಸ್ತೆ ಮೇಲ್ಸೇತುವೆಗೆ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಹೆಸರು

ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್‌ ಕಾರ್ಖಾನೆ ಸಮೀಪ ಕೊನೆಗೊಳ್ಳುವ 8.4 ಕಿ.ಮೀ ಉದ್ದದ ಮೇಲುರಸ್ತೆಗೆ ಸಿದ್ಧಗಂಗಾ ಮಠದ ಪರಮಪೂಜ್ಯ 'ಡಾ. ಶಿವಕುಮಾರ ಸ್ವಾಮೀಜಿ' ಅವರ ಹೆಸರಿಡಲು ಬಿಬಿಎಂಪಿ ನಿರ್ಣಯ ಕೈಗೊಂಡಿದೆ.

Vijaya Karnataka 29 Dec 2018, 8:51 am
ಬೆಂಗಳೂರು: ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್‌ ಕಾರ್ಖಾನೆ ಸಮೀಪ ಕೊನೆಗೊಳ್ಳುವ 8.4 ಕಿ.ಮೀ ಉದ್ದದ ಮೇಲುರಸ್ತೆಗೆ ಸಿದ್ಧಗಂಗಾ ಮಠದ ಪರಮಪೂಜ್ಯ 'ಡಾ. ಶಿವಕುಮಾರ ಸ್ವಾಮೀಜಿ' ಅವರ ಹೆಸರಿಡಲು ಬಿಬಿಎಂಪಿ ನಿರ್ಣಯ ಕೈಗೊಂಡಿದೆ.
Vijaya Karnataka Web shivakumar


ಹಾಗೆಯೇ, ಯಶವಂತಪುರ ವೃತ್ತದಿಂದ (ಸಂವಿಧಾನ ವೃತ್ತ) ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೂ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರು ಇಡಲು ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಬಳಿಕ ಜನರ ಅಭಿಪ್ರಾಯಗಳನ್ನು ಮತ್ತೆ ಕೌನ್ಸಿಲ್‌ ಮುಂದೆ ಮಂಡಿಸಿ, ಅನುಮೋದನೆ ನೀಡಲಾಗುತ್ತದೆ. ಆನಂತರ ನಾಮಕರಣದ ಪ್ರಸ್ತಾವವನ್ನು ಸರಕಾರದ ಅನುಮೋದನೆಗೆ ಕಳುಹಿಸಲಾಗುತ್ತಿದೆ. ಸರಕಾರ ಒಪ್ಪಿಗೆ ನೀಡಿದ ಬಳಿಕ ನಾಮಕರಣ ಕಾರ್ಯಕ್ರಮ ನಡೆಯಲಿದೆ.

ವಸಂತಪುರ ವಾರ್ಡ್‌ನ ಬಿಕಾಸಿಪುರ ಬಳಿಯ ಬಿಡಿಎ ಬಡಾವಣೆಗೆ 'ರೆಬಲ್‌ಸ್ಟಾರ್‌ ಅಂಬರೀಶ್‌ ಬಡಾವಣೆ' ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಲಾಯಿತು. ಅದೇ ರೀತಿ ನ್ಯಾಷನಲ್‌ ಕಾಲೇಜು ಬಳಿಯ ಉದ್ಯಾನಕ್ಕೆ 'ಅನಂತ ಸ್ಮೃತಿವನ, ಬಸವನಗುಡಿ ವಾರ್ಡ್‌ನ ಎನ್‌.ಆರ್‌.ಕಾಲೊನಿಯಲ್ಲಿನ ಬ್ಯಾಡ್ಮಿಂಟನ್‌ ಕೋರ್ಟ್‌, ಉತ್ತರಹಳ್ಳಿ ವಾರ್ಡ್‌ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ನಿರ್ಮಿಸಿರುತ್ತಿರುವ ಉದ್ಯಾನಕ್ಕೆ ದಿವಂಗತ ಅನಂತಕುಮಾರ್‌ ಅವರ ಹೆಸರಿಡಲು ತೀರ್ಮಾನಿಸಲಾಯಿತು.

ಅರಮನೆ ರಸ್ತೆಗೆ 'ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ರಸ್ತೆ', ಸಂಜಯನಗರ ಮುಖ್ಯರಸ್ತೆಯಿಂದ ಪೆಟ್ರೋಲ್‌ ಬಂಕ್‌ ಎದುರಾಗಿ ಎನ್‌ಜಿಎಫ್‌ ಬಡಾವಣೆಯ 60 ಅಡಿ ರಸ್ತೆಗೆ 'ಅಟಲ್‌ ಬಿಹಾರಿ ವಾಜಪೇಯಿ ರಸ್ತೆ', ಯಲಹಂಕದ ಅಳ್ಳಾಳಸಂದ್ರ ಈಜುಕೊಳಕ್ಕೆ 'ಅಟಲ್‌ ಬಿಹಾರಿ ವಾಜಪೇಯಿ ಈಜುಕೊಳ', ಗೋವಿಂದರಾಜನಗರ ವಾರ್ಡ್‌ನಲ್ಲಿನ ಪಾಲಿಕೆಯ ಕ್ರೀಡಾ ಸಂಕೀರ್ಣಕ್ಕೆ 'ಭಾರತ ರತ್ನ ಅಟಲ್‌ಜೀ ಕ್ರೀಡಾ ಸಂಕೀರ್ಣ', ಕೆ.ಆರ್‌.ಪುರ ಬಳಿಯ ಭಟ್ಟರಹಳ್ಳಿಯಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ಗೆ 'ಅಟಲ್‌ ಬಿಹಾರಿ ವಾಜಪೇಯಿ ಒಳಾಂಗಣ ಕ್ರೀಡಾಂಗಣ', ಕೆ.ಪಿ.ಅಗ್ರಹಾರದಲ್ಲಿನ ಪಾಲಿಕೆಯ ಜೂನಿಯರ್‌ ಕಾಲೇಜ್‌ ಹಿಂಭಾಗದ ಉದ್ಯಾನಕ್ಕೆ ಇತ್ತೀಚೆಗೆ ಮೃತಪಟ್ಟ ಕಾರ್ಪೋರೇಟರ್‌ ಮಹದೇವಮ್ಮ ನಾಗರಾಜ್‌ ಹೆಸರಿಡಲು ನಿರ್ಣಯ ಕೈಗೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ