ಆ್ಯಪ್ನಗರ

ಸಿದ್ದರಾಮಯ್ಯನವರಿಗೆ ರಾಜಕೀಯ ಯಾವುದು, ಧಾರ್ಮಿಕ ಯಾವುದು ತಿಳಿದಿಲ್ಲ: ನಳಿನ್‌ ಆಕ್ರೋಶ

"ಸಿದ್ದರಾಮಯ್ಯ ಅವರಿಗೆ ಮಠ ಎಂದರೆ ಏನು, ಮಂದಿರ, ಧರ್ಮ, ಸಂಸ್ಕೃತಿ ಎಂದರೆ ಏನು ಎನ್ನುವುದು ತಿಳಿದಿಲ್ಲ. ಅವರ ಆಡಳಿತದಲ್ಲಿ ಮಠ-ಮಂದಿರಗಳಿಗೆ ಏನೆಲ್ಲಾ ಸಮಸ್ಯೆ ನೀಡಿದರು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ," ಎಂಬುದಾಗಿ ನಳಿನ್‌ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ.

Vijaya Karnataka 3 Jan 2020, 7:01 pm
ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ರಾಜಕೀಯ ಯಾವುದು, ಧಾರ್ಮಿಕ ಯಾವುದು ಎನ್ನುವುದು ತಿಳಿದಿಲ್ಲ. ಅವರ ಸರಕಾರ ಇದ್ದಾಗ ಮಠ-ಮಂದಿರಗಳಿಗೇ ದಿಗ್ಬಂಧನ ಹಾಕಲು ಹೊರಟಿದ್ದರು. ಇಂತವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಗುಡುಗಿದರು.
Vijaya Karnataka Web Nalin Kumar Kateel


ದಾಸರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸಿದ್ದರಾಮಯ್ಯ ಅವರಿಗೆ ಮಠ ಎಂದರೆ ಏನು, ಮಂದಿರ, ಧರ್ಮ, ಸಂಸ್ಕೃತಿ ಎಂದರೆ ಏನು ಎನ್ನುವುದು ತಿಳಿದಿಲ್ಲ. ಅವರ ಆಡಳಿತದಲ್ಲಿ ಮಠ-ಮಂದಿರಗಳಿಗೆ ಏನೆಲ್ಲಾ ಸಮಸ್ಯೆ ನೀಡಿದರು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಮೋದಿ ಅವರ ಬಗ್ಗೆ ಟ್ವೀಟ್‌ ಮಾಡಲು ಅವರಿಗೆ ಯಾವ ನೈತಿಕತೆ ಇದೆ,’’ ಎಂದು ಪ್ರಶ್ನಿಸಿದರು.

‘‘ಉಗ್ರಪ್ಪ ಅವರು ಸೂಕ್ತ ಅಧ್ಯಯನ ಮಾಡಿಕೊಂಡು ಮಾತನಾಡಬೇಕು. ಅವರು ಎಲ್ಲವನ್ನು ರಾಜಕೀಯಗೊಳಿಸುತ್ತಿದ್ದಾರೆ. ಪ್ರತಿಯೊಂದನ್ನು ಅವರು ಅಧ್ಯಯನ ಮಾಡುವುದು ಸೂಕ್ತ,’’ ಎಂದರು.

ಇದೇ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್‌.ಲೋಕೇಶ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಅಭಿನಂದಿಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಸ್‌ ಮುನಿರಾಜು, ಬಿಜೆಪಿ ಮುಖಂಡ ಬಿಎಂ ನಾರಾಯಣ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ