ಆ್ಯಪ್ನಗರ

ವಾರಾಂತ್ಯದ ವೇಳೆಗೆ ಸಿರ್ಸಿ ಮೇಲ್ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತ

ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್‌) ಮೇಲ್ಸೇತುವೆಯ ಒಂದು ಪಾಶ್ರ್ವದಲ್ಲಿ ದುರಸ್ತಿ ಕಾಮಗಾರಿಯು ಒಂದೆರಡು ದಿನದಲ್ಲಿ ಮುಗಿಯಲಿದ್ದು, ಫೆ. 8 ಅಥವಾ 9ರಿಂದ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗುವ ಸಾಧ್ಯತೆಗಳಿವೆ.

Vijaya Karnataka 6 Feb 2019, 5:00 am
ಬೆಂಗಳೂರು : ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್‌) ಮೇಲ್ಸೇತುವೆಯ ಒಂದು ಪಾಶ್ರ್ವದಲ್ಲಿ ದುರಸ್ತಿ ಕಾಮಗಾರಿಯು ಒಂದೆರಡು ದಿನದಲ್ಲಿ ಮುಗಿಯಲಿದ್ದು, ಫೆ. 8 ಅಥವಾ 9ರಿಂದ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗುವ ಸಾಧ್ಯತೆಗಳಿವೆ.
Vijaya Karnataka Web sirsi flyover one waywill open at weekend
ವಾರಾಂತ್ಯದ ವೇಳೆಗೆ ಸಿರ್ಸಿ ಮೇಲ್ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತ


ರಾಯನ್‌ ವೃತ್ತದಿಂದ ಮೈಸೂರು ರಸ್ತೆಯ ಕಡೆಗೆ ಡಾಂಬರೀಕರಣ ಕಾಮಗಾರಿ ಶುರುವಾಗಿದ್ದು, ಗುರುವಾರ ಸಂಜೆ ವೇಳೆಗೆ ಪೂರ್ಣಗೊಳ್ಳಲಿದೆ. ಆನಂತರ ಒಂದು ದಿನ ಕಾಲ ಡಾಂಬರು ಒಣಗಲು ಬಿಡಲಾಗುತ್ತಿದೆ. ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆಯಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಬಿಬಿಎಂಪಿ ತೀರ್ಮಾನಿಸಿದೆ.

ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆ ಕಡೆಗಿನ ಪಾಶ್ರ್ವವನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಬಳಿಕ ಮತ್ತೊಂದು ಬದಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆಗ ಮೈಸೂರು ರಸ್ತೆ ಕಡೆಯಿಂದ ನಗರಕ್ಕೆ ಬರುವ ವಾಹನಗಳಿಗೆ ಮೇಲ್ಸೇತುವೆಯಲ್ಲಿ ನಿರ್ಬಂಧ ಹೇರಲಾಗುತ್ತದೆ. ಮೇಲ್ಸೇತುವೆಯ ಕೆಳಭಾಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.

''ರಾಯನ್‌ ವೃತ್ತದಿಂದ ಮೈಸೂರು ರಸ್ತೆಯ ಕಡೆಗೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. 700-800 ಮೀ ದೂರದವರೆಗೆ ಡಾಂಬರು ಹಾಕಲಾಗಿದೆ. ಫೆ. 7ರ ಸಂಜೆಯೊಳಗೆ ಡಾಂಬರೀಕರಣ ಕೆಲಸ ಮುಗಿಯಲಿದೆ. ಆನಂತರ ಒಂದು ದಿನ ಒಣಗಲು ಬಿಡಲಾಗುವುದು. ಫೆ.8 ಅಥವಾ 9ರಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸಂಚಾರ ಪೊಲೀಸರಿಂದ ಅನುಮತಿ ದೊರೆತ ಬಳಿಕ ಮತ್ತೊಂದು ಬದಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು,'' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ