ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಹಂಚಿಕೆ ಪಡೆದಿರುವವರಿಗೆ ಬಾಕಿ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ ನೀಡುವ ಬಿಡಿಎ ನಿರ್ಣಯದ ಅನುಮೋದನೆಯ ಕಡತ ಸರಕಾರಕ್ಕೆ ಇನ್ನೂ ರವಾನೆಯಾಗಿಲ್ಲ.
ಬಿಡಿಎ ಮಂಡಳಿ ಸಭೆಯಲ್ಲಿ ಕೈಗೊಳ್ಳುವ ಎಲ್ಲಾ ನಿರ್ಣಯಗಳಿಗೆ ಸರಕಾರದ ಮುದ್ರೆ ಅಗತ್ಯ. ಇಲ್ಲದಿದ್ದಲ್ಲಿ ಅಂಥ ನಿರ್ಧಾರಗಳಿಗೆ ಬೆಲೆ ಇರುವುದಿಲ್ಲ.
ನಿವೇಶನ ಹಂಚಿಕೆ ಬಳಿಕ ಬಾಕಿ ಮೊತ್ತವನ್ನು 60 ದಿನಗಳೊಳಗೆ ಪಾವತಿಸಬೇಕು. ನಂತರದಲ್ಲಿ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಎರಡನೇ ಹಂತದ ಸೈಟ್ದಾರರಿಗೆ ಸಿಎಂ ಹಾಗೂ ಡಿಸಿಎಂ ನೀಡಿದ್ದ ಭರವಸೆಯನ್ನು ಜಾರಿಗೆ ತರಲು ಕಳೆದ ಡಿ.15ರಂದು ಕಾಲಾವಕಾಶ ವಿಸ್ತರಣೆ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆಯಲಾಗಿದೆ. ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಕಾರಣ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ತಲುಪಿಸಿಲ್ಲ.
ಈಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಪತ್ರಗಳನ್ನು ರವಾನಿಸಿ 60 ದಿನಗಳಲ್ಲಿ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಇವರ ಪೈಕಿ ಹೆಚ್ಚಿನವರಿಗೆ ಗಡುವು ಅವಧಿ ಮುಗಿದಿದ್ದು, ಹೆಚ್ಚುವರಿ ಕಾಲಾವಕಾಶದ ಸೌಲಭ್ಯ ಸಿಗದೆ ಪರಿತಪಿಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಅಧಿಕಾರಿಗಳು ''ಬೆಳಗಾವಿ ಅಧಿವೇಶನದಿಂದ ವಾಪಸಾದ ಬಳಿಕ ಕಡತವನ್ನು ರವಾನಿಸಲಾಗುತ್ತದೆ. ಹೀಗಾಗಿ ಸೈಟ್ದಾರರು ಆತಂಕ ಪಡುವುದು ಬೇಡ,'' ಎಂಬ ಸಮಜಾಯಿಷಿಯನ್ನು ನಾಗರಿಕರಿಗೆ ನೀಡಲಾಗುತ್ತಿದೆ.
ಬಿಡಿಎ ಮಂಡಳಿ ಸಭೆಯಲ್ಲಿ ಕೈಗೊಳ್ಳುವ ಎಲ್ಲಾ ನಿರ್ಣಯಗಳಿಗೆ ಸರಕಾರದ ಮುದ್ರೆ ಅಗತ್ಯ. ಇಲ್ಲದಿದ್ದಲ್ಲಿ ಅಂಥ ನಿರ್ಧಾರಗಳಿಗೆ ಬೆಲೆ ಇರುವುದಿಲ್ಲ.
ನಿವೇಶನ ಹಂಚಿಕೆ ಬಳಿಕ ಬಾಕಿ ಮೊತ್ತವನ್ನು 60 ದಿನಗಳೊಳಗೆ ಪಾವತಿಸಬೇಕು. ನಂತರದಲ್ಲಿ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಎರಡನೇ ಹಂತದ ಸೈಟ್ದಾರರಿಗೆ ಸಿಎಂ ಹಾಗೂ ಡಿಸಿಎಂ ನೀಡಿದ್ದ ಭರವಸೆಯನ್ನು ಜಾರಿಗೆ ತರಲು ಕಳೆದ ಡಿ.15ರಂದು ಕಾಲಾವಕಾಶ ವಿಸ್ತರಣೆ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆಯಲಾಗಿದೆ. ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಕಾರಣ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ತಲುಪಿಸಿಲ್ಲ.
ಈಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಪತ್ರಗಳನ್ನು ರವಾನಿಸಿ 60 ದಿನಗಳಲ್ಲಿ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಇವರ ಪೈಕಿ ಹೆಚ್ಚಿನವರಿಗೆ ಗಡುವು ಅವಧಿ ಮುಗಿದಿದ್ದು, ಹೆಚ್ಚುವರಿ ಕಾಲಾವಕಾಶದ ಸೌಲಭ್ಯ ಸಿಗದೆ ಪರಿತಪಿಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಅಧಿಕಾರಿಗಳು ''ಬೆಳಗಾವಿ ಅಧಿವೇಶನದಿಂದ ವಾಪಸಾದ ಬಳಿಕ ಕಡತವನ್ನು ರವಾನಿಸಲಾಗುತ್ತದೆ. ಹೀಗಾಗಿ ಸೈಟ್ದಾರರು ಆತಂಕ ಪಡುವುದು ಬೇಡ,'' ಎಂಬ ಸಮಜಾಯಿಷಿಯನ್ನು ನಾಗರಿಕರಿಗೆ ನೀಡಲಾಗುತ್ತಿದೆ.