ಆ್ಯಪ್ನಗರ

ಸುಸ್ಥಿರ ನಗರ ನಿರ್ಮಾಣಕ್ಕೆ ಬದಲಾವಣೆ ಬೀಜ ಬಿತ್ತನೆ

ಸುಸ್ಥಿರ ಉತ್ಪನ್ನಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು 47 ವರ್ಷದ ಅವರು 2011ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದರು . ಐದು ವರ್ಷಗಳಿಂದ ರಾಸಾಯನಿಕ ಶ್ಯಾಂಪೂಗಳಿಗೆ ಪರ್ಯಾಯಗಳನ್ನು ಕಂಡುಕೊಳ್ಳುವ ಅವರ ಪ್ರಯತ್ನಗಳೀಗ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಿವೆ. ನವೆಂಬರ್ 2017 ರಲ್ಲಿ ಅವರು ಪ್ರಾಣಪೂರ್ಣ ಕಲೆಕ್ಟಿವ್-ನ್ಯಾಚುರಲ್ ಕ್ಲೀನರ್‌ ಆರಂಭಿಸಿದರು. ಅದರಡಿ ತಯಾರಾದ ಸೋಪ್‌ನಟ್ ಶ್ಯಾಂಪೂ, ಹ್ಯಾಂಡ್ ವಾಶ್ ಮತ್ತು ಡಿಶ್ವಾಶ್‌ಗಳೀಗ ಇ-ಕಾಮರ್ಸ್ ಸೈಟ್‌ಗಳಲ್ಲಿ ಲಭ್ಯವಿದೆ.

TIMESOFINDIA.COM 3 Jun 2019, 3:05 pm
ಬೆಂಗಳೂರು: ಪರಿಸರಕ್ಕೆ ಮಾರಕವಾದ ರಾಸಾಯನಿಕಗಳಿಗೆ ಪರ್ಯಾಯವಾಗಿ ಪರಿಸರ ಪೂರಕಗಳು ಇವೆಯೇ? ಹೌದೆನ್ನುತ್ತಾರೆ ಪಾಲಿಮರ್ ಎಂಜಿನಿಯರ್ ಮತ್ತು IT ಸಲಹೆಗಾರ್ತಿಯಾಗಿದ್ದ ಸ್ಮಿತಾ ಕಾಮತ್. ಸುಸ್ಥಿರ ಜೀವನಶೈಲಿಯಿಂದ ಸ್ಫೂರ್ತಿ ಪಡೆದ ಅವರು, ತಮ್ಮ ವೃತ್ತಿಗೆ ವಿದಾಯ ಹೇಳಿ ಸಾಮಾಜಿಕ ಉದ್ಯಮಿಯಾಗಿ ಮಾರ್ಪಟ್ಟಿದ್ದಾರೆ ಮತ್ತು ಅವರ ಸೋಪ್‌ನಟ್ (ಸಾಬೂನು ಬೀಜ)-ಆಧಾರಿತ ಉತ್ಪನ್ನಗಳು ಪರಿಸರ ಸ್ನೇಹಿ ವಲಯಗಳಲ್ಲಿ ಗುರುತಿಸಿಕೊಳ್ಳುತ್ತಿವೆ.
Vijaya Karnataka Web Sushma Kamat


ಸುಸ್ಥಿರ ಉತ್ಪನ್ನಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು 47 ವರ್ಷದ ಅವರು 2011ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದರು . ಐದು ವರ್ಷಗಳಿಂದ ರಾಸಾಯನಿಕ ಶ್ಯಾಂಪೂಗಳಿಗೆ ಪರ್ಯಾಯಗಳನ್ನು ಕಂಡುಕೊಳ್ಳುವ ಅವರ ಪ್ರಯತ್ನಗಳೀಗ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಿವೆ. ನವೆಂಬರ್ 2017 ರಲ್ಲಿ ಅವರು ಪ್ರಾಣಪೂರ್ಣ ಕಲೆಕ್ಟಿವ್-ನ್ಯಾಚುರಲ್ ಕ್ಲೀನರ್‌ ಆರಂಭಿಸಿದರು. ಅದರಡಿ ತಯಾರಾದ ಸೋಪ್‌ನಟ್ ಶ್ಯಾಂಪೂ, ಹ್ಯಾಂಡ್ ವಾಶ್ ಮತ್ತು ಡಿಶ್ವಾಶ್‌ಗಳೀಗ ಇ-ಕಾಮರ್ಸ್ ಸೈಟ್‌ಗಳಲ್ಲಿ ಲಭ್ಯವಿದೆ.

ನನ್ನ ಮಗಳಿಗಾದ ಚರ್ಮದ ಅಲರ್ಜಿ, ನೈಸರ್ಗಿಕವಾಗಿ ಲಭ್ಯವಿರುವ ಸಾಬೂನು ಬೀಜಗಳಾದ ಶಿಕಾಕಾಯಿ ಮತ್ತು ಅಂಟುವಾಳುಕಾಯಿಯಿಂದ ಶ್ಯಾಂಪೂ ಮತ್ತು ಹ್ಯಾಂಡ್‌ವಾಶ್ ತಯಾರಿಸಲು ನನಗೆ ಪ್ರೇರೇಪಣೆ ನೀಡಿತು. ರಾಸಾಯನಿಕ ರಹಿತ ಉತ್ಪನ್ನಗಳು ನನ್ನ ಮಗಳಿಗೆ ಯಾವುದೇ ದುಷ್ಪರಿಣಾಮಗಳನ್ನು ಬೀರದಿದ್ದಾಗ ನಾನು ನೈಸರ್ಗಿಕ ಶುದ್ಧೀಕರಣಗಳನ್ನು ತಯಾರಿಸುವುದನ್ನೇ ವೃತ್ತಿಯಾಗಿ ಮುಂದುವರಿಸುವ ಯೋಚನೆ ಮೂಡಿತು ಎನ್ನುತ್ತಾರೆ ಸ್ಮಿತಾ. ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯ ಒಂದು ಭಾಗ ಮನಿ ವರ್ಕ್ ಶಾಪ್ ಆಗಿ ಬದಲಾಗಿದೆ. ಅಲ್ಲಿ ಸಾಬೂನು ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ, ದೊಡ್ಡ ದೊಡ್ಡ ಕ್ಯಾನ್‌ಗಳಲ್ಲಿ ನೆನಸಿ ಇಡಲಾಗಿದೆ.

ನೆಲಮಂಗಲ, ಚಿಕ್ಕಮಗಳೂರು ಮತ್ತು ಹಾಸನದ ರೈತರಿಂದ ಅವರು ಆಂಟವಾಳು ಕಾಯಿಯನ್ನು ಅನ್ನು ಸಂಗ್ರಹಿಸುತ್ತಾರೆ. ಬೆಲೆಯಲ್ಲಿ ವೈಪರೀತ್ಯವಿದ್ದು ಕೆಜಿಗೆ 25 ರಿಂದ ರೂ 50 ರವರೆಗೆಇರುತ್ತದೆ. ಬಯೋ ಎಂಜಿಮ್ಸ್ ತಯಾರಿಸಲು, ಹಣ್ಣಿನ ಜ್ಯೂಸ್ ಅಂಗಡಿಯಿಂದ ಅವಳು ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಪಡೆಯುತ್ತಾರೆ.

" ನೈಸರ್ಗಿಕ ಶುದ್ಧೀಕರಣ ತಯಾರಿಸಲು ಬೇಕಾಗಿರುವ ಅಂಶಗಳು ನಮ್ಮ ಸುತ್ತಮುತ್ತಲೂ ಇವೆ. ಆದರೆ ನಾವು ಅವುಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳದೆ ತಿರಸ್ಕರಿಸುತ್ತೇವೆ.ಬಾಟಲ್ ಆಸಿಡ್ ಬದಲಿಗೆ ನೈಸರ್ಗಿಕ ಶುದ್ಧೀಕರಣವನ್ನು ಬಳಸಿಕೊಂಡು ನಮ್ಮ ನೀರಿನ ಸಂಪನ್ಮೂಲಗಳಿಗೆ ಮಾಲಿನ್ಯ ಉಂಟಾಗದಂತೆ ತಡೆಯಬಹುದು", ಎಂದು ಹೋಮ್ ಮೇಡ್ ಶ್ಯಾಂಪೂಗಳಿಗೆ ಸಾಕಷ್ಟು ಗ್ರಾಹಕರನ್ನು ಹೊಂದಿರುವ ಸ್ಮಿತಾ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ