ಆ್ಯಪ್ನಗರ

'ಸ್ಪೀಕ್‌ ಫಾರ್‌ ಇಂಡಿಯಾ ' ಅಂತಿಮ ಹಂತದ ಸ್ಪರ್ಧೆ ಇಂದು

ಫೆಡರಲ್‌ ಬ್ಯಾಂಕ್‌, ವಿಜಯ ಕರ್ನಾಟಕ ಮತ್ತು ದಿ ಟೈಮ್ಸ್‌ ಆಫ್‌ ಇಂಡಿಯಾ ಸಹಯೋಗದಲ್ಲಿನಡೆಯುತ್ತಿರುವ 'ಸ್ಪೀಕ್‌ ಫಾರ್‌ ಇಂಡಿಯಾಕರ್ನಾಟಕ ಆವೃತ್ತಿ' ಅಂತಿಮ ಹಂತದ ಸ್ಪರ್ಧೆಯು ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆಯಲಿದೆ.

Vijaya Karnataka Web 22 Feb 2018, 9:35 am
ಬೆಂಗಳೂರು: ಫೆಡರಲ್‌ ಬ್ಯಾಂಕ್‌, ವಿಜಯ ಕರ್ನಾಟಕ ಮತ್ತು ದಿ ಟೈಮ್ಸ್‌ ಆಫ್‌ ಇಂಡಿಯಾ ಸಹಯೋಗದಲ್ಲಿನಡೆಯುತ್ತಿರುವ 'ಸ್ಪೀಕ್‌ ಫಾರ್‌ ಇಂಡಿಯಾ ಕರ್ನಾಟಕ ಆವೃತ್ತಿ' ಅಂತಿಮ ಹಂತದ ಸ್ಪರ್ಧೆಯು ಗುರುವಾರ (ಫೆ.22) ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆಯಲಿದೆ.
Vijaya Karnataka Web speak for india
'ಸ್ಪೀಕ್‌ ಫಾರ್‌ ಇಂಡಿಯಾ ' ಅಂತಿಮ ಹಂತದ ಸ್ಪರ್ಧೆ ಇಂದು


ಮಧ್ಯಾಹ್ನ 2 ಗಂಟೆಗೆ ಸ್ಪರ್ಧೆಗೆ ಚಾಲನೆ ದೊರೆಯಲಿದೆ. ಮೊದಲಿಗೆ ನಡೆಯಲಿರುವ ಪ್ರಿಫೈನಲ್‌ ಸ್ಪರ್ಧೆಯಲ್ಲಿಎರಡು ಹಂತಗಳಲ್ಲಿ ತಲಾ 4 ಸ್ಪರ್ಧಿಗಳ ಎರಡು ಗುಂಪುಗಳು ಪಾಲ್ಗೊಳ್ಳಲಿವೆ. ಇದಾದ ಬಳಿಕ ಅಂತಿಮ ಹಂತದ ಸ್ಪರ್ಧೆ (ಗ್ರ್ಯಾಂಡ್‌ ಫೈನಲ್‌) ನಡೆಯಲಿದೆ. ಇದಕ್ಕೂ ಮುನ್ನ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿನಟ ಪ್ರಕಾಶ್‌ ರೈ ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ 'ವೋಸ್ಟ್‌ ಪಾಪ್ಯುಲರ್‌ ಸ್ಪೀಕರ್‌ ಪ್ರಶಸ್ತಿ'ಯನ್ನು ಪ್ರದಾನ ಮಾಡಲಿದ್ದಾರೆ. ಫೆಡರಲ್‌ ಬ್ಯಾಂಕ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್‌ ಶ್ರೀನಿವಾಸನ್‌, ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್‌ ಜನರಲ್‌ ಡಿ.ರೂಪ ಭಾಷಣ ಮಾಡಲಿದ್ದಾರೆ. ಫೆಡರಲ್‌ ಬ್ಯಾಂಕ್‌ನ ಅಧ್ಯಕ್ಷ ಕೆ.ಎಂ.ಚಂದ್ರಶೇಖರ್‌ ಭಾಷಣ ಮಾಡುವುದರ ಜತೆಗೆ 'ಕಾಫಿ ಟೇಬಲ್‌' ಪುಸ್ತಕ ಬಿಡುಗಡೆ ಮಾಡುವರು. ವಿಜಯ ಕರ್ನಾಟಕ ಪತ್ರಿಕೆಯ ಸಿಇಒ ರಂಜಿತ್‌ ಕಾಟೆ, ದಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ನಿರ್ದೇಶಕ ದೀಪಕ್‌ ಸಲುಜ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವೇದಿಕೆ ಕಾರ್ಯಕ್ರಮದ ನಂತರ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿಇಬ್ಬರು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಬಳಿಕ ನಡೆಯಲಿರುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿನಟಿ ರಾಗಿಣಿ ದ್ವಿವೇದಿ ಮಾತನಾಡಲಿದ್ದಾರೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಿಜೇತರನ್ನು ಘೋಷಣೆ ಮಾಡಿ ಬಹುಮಾನ ವಿತರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ