ಆ್ಯಪ್ನಗರ

ಸರ್ಜಾಪುರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ತಿರುಮಲೆಯ ಶ್ರೀನಿವಾಸ ದೇವರ ಅನುಗ್ರಹವಿದ್ದರೆ ಯಾವ ಭಯವೂ ಇರುವುದಿಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 25 Dec 2018, 5:00 am
ಆನೇಕಲ್‌: ತಿರುಮಲೆಯ ಶ್ರೀನಿವಾಸ ದೇವರ ಅನುಗ್ರಹವಿದ್ದರೆ ಯಾವ ಭಯವೂ ಇರುವುದಿಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web srinivas kalyanotsava at sarjapura
ಸರ್ಜಾಪುರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ


ತಾಲೂಕಿನ ಸರ್ಜಾಪುರದ ಡಾ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಟಿಟಿಡಿ ಹಾಗೂ ಸ್ಥಳೀಯ ಕಲ್ಯಾಣೋತ್ಸವ ಸಮಿತಿ ಭಾನುವಾರ ಆಯೋಜಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

''ಶ್ರೀನಿವಾಸ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ಈ ದೇವರ ರಕ್ಷೆಯಿದ್ದರೆ ಯಾರಿಂದಲೂ ನಮಗೆ ತೊಂದರೆಯಾಗದು. ಎಲ್ಲರೂ ತಿಮ್ಮಪ್ಪನನ್ನು ಪ್ರತಿದಿನ ನೆನೆದು ಧನ್ಯರಾಗಬೇಕು,'' ಎಂದರು.

ಪೇಜಾವರ ಮಠದ ಕಿರಿಯ ಪೀಠಾಧಿಪತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ ''ಲೋಕ ಕಲ್ಯಾಣಾರ್ಥವಾಗಿ ಇಂತಹ ಕಾರ್ಯಗಳು ನಡೆಯುವುದು ಅಗತ್ಯ,'' ಎಂದರು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ ''ತಿರುಪತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವಂತೆಯೇ ಇಲ್ಲಿಯೂ ಆಯೋಜಿಸಿರುವುದು ಸಂತಸದ ವಿಷಯ. ಅಲ್ಲಿನ ಉತ್ಸವ ಮೂರ್ತಿಗೆ ಕಲ್ಯಾಣೋತ್ಸವ ನಡೆಸುವ ಮೂಲಕ ಸ್ಥಳೀಯರಿಗೆ ದೇವರ ದರ್ಶನ ಮಾಡಿಸಲಾಗಿದೆ,'' ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ ''ಲೋಕ ಕಲ್ಯಾಣಾರ್ಥವಾಗಿ ಈ ಉತ್ಸವ ನಡೆಸಲಾಗುತ್ತಿದೆ,'' ಎಂದರು.

ಟಿಟಿಡಿ ಆಸ್ಥಾನ ವಿದ್ವಾಂಸ ರಘನಾಥ್‌ ಮತ್ತು ತಂಡದವರು ನಾಮ ಸಂಕೀರ್ತನೆ ನಡೆಸಿದರು. ಕಲ್ಯಾಣೋತ್ಸವ ಬಗ್ಗೆ ಹರಿಕಥೆ ಹಾಗೂ ಭರತನಾಟ್ಯ ಪ್ರದರ್ಶಿಸಲಾಯಿತು.

ರಾಜ್ಯ ಸಭಾ ಸದಸ್ಯ ಕುಪೇಂದ್ರರೆಡ್ಡಿ, ಮೇಲ್ಮನೆ ಸದಸ್ಯ ಅ.ದೇವೇಗೌಡರನ್ನು ಅಭಿನಂದಿಸಲಾಯಿತು.

ಕಲ್ಯಾಣೋತ್ಸವ ಸಮಿತಿ ಸಂಚಾಲಕ ಎಸ್‌.ವಿ.ರಾಘವೇಂದ್ರ, ಮಾಜಿ ಸಚಿವ ಡಾ.ಎ.ನಾರಾಯಣಸ್ವಾಮಿ, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಜಿ.ಪಂ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಸದಸ್ಯರಾದ ಚೋಳನಾಯಕನಹಳ್ಳಿ ಹನುಮಂತಯ್ಯ, ರಾಮಚಂದ್ರ, ಬಾಗಲೂರು ರಮೇಶ್‌, ಕುಂಬಳಗೋಡು ನರಸಿಂಹಮೂರ್ತಿ ಮತ್ತಿತರರು ಇದ್ದರು.

ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ಭಕ್ತರಿಗೆ ತಿರುಪತಿ ಲಡ್ಡು ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ