ಆ್ಯಪ್ನಗರ

ಬೆಂಗಳೂರು: ಕುದುರೆ ರೇಸ್‌ ನಿಲ್ಲಿಸಲು ಸೂಚನೆ

ಬೆಂಗಳೂರು ರೇಸ್‌ ಕ್ಲಬ್‌ ಇಡೀ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಆದರೆ ಇನ್ನುಮುಂದೆ ಕುದುರೆ ರೇಸ್‌ ನಡೆಸಬಾರದು ಎಂದು ಸಮಿತಿಯೊಂದು ಸೂಚನೆ ನೀಡಿದೆ.

Vijaya Karnataka Web 19 Nov 2019, 8:42 pm
ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ಎಲ್ಲಾ ರೇಸಿಂಗ್ ಚಟುವಟಿಕೆಗಳನ್ನು ಡಿಸೆಂಬರ್ 2 ರಿಂದ ನಿಲ್ಲಿಸಬೇಕೆಂದು ಅಪರಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಧ್ಯಕ್ಷ ಎಚ್ ಕೆ ಪಾಟೀಲ್ ನಿರ್ದೇಶನ ನೀಡಿದ್ದಾರೆ.
Vijaya Karnataka Web ಕುದುರೆ ರೇಸ್‌
ಕುದುರೆ ರೇಸ್‌


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಟರ್ಫ್ ಕ್ಲಬ್ ಗುತ್ತಿಗೆ ಅವಧಿ 1989ರಲ್ಲೇ ಮುಕ್ತಾಯಗೊಂಡಿದ್ದು, ಸದರಿ ಜಮೀನನ್ನು ಸರಕಾರದ ವಶಕ್ಕೆ ನೀಡುವಂತೆ ಆದೇಶ ಮಾಡಿದ್ದರೂ ಟರ್ಫ್ ಕ್ಲಬ್ ಆದೇಶವನ್ನು ಪಾಲನೆ ಮಾಡಿಲ್ಲ ಎಂದರು.

ಮೇಲಾಗಿ ಸರಕಾರಕ್ಕೆ ನೀಡಬೇಕಾಗಿರುವ 32 ಕೋಟಿ ರೂಪಾಯಿ ಬಾಡಿಗೆ ಹಣ ವಸೂಲು ಮಾಡಲು ಕೂಡಲೇ ನೋಟಿಸ್ ಜಾರಿ ಮಾಡುವಂತೆಯೂ ಸಮಿತಿ ಸೂಚನೆ ಕೊಟ್ಟಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಬಾಕಿ ಇರುವ ಮೊಕದ್ದಮೆಯನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಸಮಿತಿ ಸೂಚನೆ ಕೊಟ್ಟಿದೆ ಎಂದು ಎಚ್ಕೆ ಪಾಟೀಲ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ