ವಿಕ ಸುದ್ದಿಲೋಕ ಬೆಂಗಳೂರು
ತುಮಕೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವ ಕುರಿತು ಮತ್ತೆ ಚರ್ಚೆ ಆರಂಭವಾದ ಬೆನ್ನಲ್ಲೇ ಅದಕ್ಕೂ ಮುನ್ನ ಉಪನಗರ ರೈಲು ಯೋಜನೆಗೆ ಆದ್ಯತೆ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ತುಮಕೂರು ರಸ್ತೆಯಲ್ಲಿ 2ನೇ ಹಂತದ ಮೆಟ್ರೊ ಯೋಜನೆಯಲ್ಲಿ ನಾಗಸಂದ್ರದಿಂದ ಬಿಐಇಸಿವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗವನ್ನು 70 ಕಿ.ಮೀ. ದೂರದ ತುಮಕೂರುವರೆಗೆ ವಿಸ್ತರಿಸುವ ಕುರಿತು ಚರ್ಚೆಯಾಗಿದೆ. ಈಗಾಗಲೇ ಲಭ್ಯವಿರುವ ರೈಲು ಸೌಲಭ್ಯವನ್ನು ಅಭಿವೃದ್ಧಿಪಡಿಸದೆ ದುಬಾರಿಯಾದ ಮೆಟ್ರೊ ಯೋಜನೆಯನ್ನು ಅನುಷ್ಠಾನಗೊಳಿಸುವ ಅಗತ್ಯವೇನಿದೆ ಎಂದು ರೈಲು ಸಾರಿಗೆ ತಜ್ಞರು ಪ್ರಶ್ನಿಸಿದ್ದಾರೆ.
ನಾಗಸಂದ್ರದಿಂದ ಬಿಐಇಸಿವರೆಗೆ 3 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗುತ್ತಿದೆ. ಇದನ್ನು ತುಮಕೂರುವರೆಗೆ ವಿಸ್ತರಿಸುವ ಯೋಜನೆ ಕುರಿತು 2016 ರಲ್ಲೇ ಚರ್ಚೆಯಾಗಿತ್ತು. ತುಮಕೂರುವರೆಗೆ ಮೆಟ್ರೊ ಮಾರ್ಗ ವಿಸ್ತರಿಸುವ ಯೋಜನೆಯ ಚಿಂತನೆ ಇನ್ನೂ ಇದೆ. ಈ ಯೋಜನೆಯ ಸಾಧ್ಯತೆ ಕುರಿತು ಅಧ್ಯಯನ ಮಾಡುವಂತೆ ಸರಕಾರ ಸೂಚನೆ ನೀಡಿದೆ ಎಂದು ಬಿಎಂಆರ್ಸಿಎಲ್ ಖಚಿತಪಡಿಸಿದೆ.
ಪ್ರತಿ ದಿನ ಬೆಂಗಳೂರಿನಿಂದ ಸುಮಾರು 40 ರೈಲುಗಳು ತುಮಕೂರು ಮಾರ್ಗವಾಗಿ ಕಾರ್ಯಾಚರಿಸುತ್ತಿವೆ. ಇತ್ತೀಚೆಗೆ ಬೆಂಗಳೂರಿನಿಂದ ಗುಬ್ಬಿವರೆಗೆ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚುವರಿ ರೈಲುಗಳನ್ನು ಕಾರ್ಯಾಚರಿಸಲಾಗುತ್ತಿದೆ. ಮೆಟ್ರೊ ಯೋಜನೆ ಬದಲು ಜೋಡಿ ಹಳಿಯನ್ನು ಮತ್ತಷ್ಟು ವಿಸ್ತರಿಸುವ ಕಾಮಗಾರಿ ಹಾಗೂ ರೈಲು ವಿದ್ಯುದೀಕರಣ ಕಾಮಗಾರಿ ನಡೆಸಿದರೆ ಉಪನಗರ ಮೆಮು ರೈಲುಗಳನ್ನು ಕಾರ್ಯಾಚರಿಸಬಹುದು ಎಂದು ರೈಲು ಸಾರಿಗೆ ತಜ್ಞ ಕೃಷ್ಣಪ್ರಸಾದ್ ಸಲಹೆ ನೀಡಿದ್ದಾರೆ.
ದುಬಾರಿ ಮೆಟ್ರೊ
1 ಕಿ.ಮೀ. ಉದ್ದದ ಮೆಟ್ರೊ ಎತ್ತರಿಸಿದ ಮಾರ್ಗದ ನಿರ್ಮಾಣಕ್ಕೆ 150-200 ಕೋಟಿ ರೂ. ಖರ್ಚಾಗುತ್ತದೆ. ಭೂಸ್ವಾಧೀನ ವೆಚ್ಚವನ್ನು ಸೇರಿಸಿದರೆ ಖರ್ಚು ಇನ್ನಷ್ಟು ಹೆಚ್ಚುತ್ತದೆ. ಇದರ ಬದಲು ಲಭ್ಯವಿರುವ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಉತ್ತಮ. ಮೆಟ್ರೊದ ಟಿಕೆಟ್ ದರಕ್ಕೆ ಹೋಲಿಸಿದರೆ ರೈಲು ಟಿಕೆಟ್ ದರ ಕಡಿಮೆ. ಮೆಟ್ರೊದಲ್ಲಿ ಸ್ಮಾರ್ಟ್ ಕಾರ್ಡ್ಗೆ ಶೇ.15 ರಷ್ಟು ರಿಯಾಯಿತಿ ಹೊರತುಪಡಿಸಿದರೆ ಪ್ರಯಾಣಿಕರಿಗೆ ಬೇರೆ ಯಾವುದೇ ಸೌಲಭ್ಯವಿಲ್ಲ. ಆದರೆ ರೈಲ್ವೆಯಲ್ಲಿ ಮೆಟ್ರೊಗಿಂತ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯ.
ಕೇಂದ್ರ ಸರಕಾರದ ಸಹಯೋಗದಲ್ಲಿ ರಾಜ್ಯ ಸರಕಾರ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು. ತುಮಕೂರಿಗೆ ಮೆಟ್ರೊ ಬದಲು ಉಪನಗರ ರೈಲು ತಂದರೆ ಸಮಯ ಹಾಗೂ ಖರ್ಚು ಉಳಿತಾಯವಾಗಿ ಜನರಿಗೆ ಅನುಕೂಲವಾಗುತ್ತದೆ.
-ಸಂಜೀವ್ ದ್ಯಾಮಣ್ಣವರ್, ರೈಲು ಸಾರಿಗೆ ತಜ್ಞ
ತುಮಕೂರಿಗೆ ಲಭ್ಯವಿರುವ ರೈಲು ಸಾರಿಗೆ ಮತ್ತಷ್ಟು ಅಭಿವೃದ್ಧಿಪಡಿಸಿ ಉಪನಗರ ರೈಲುಗಳನ್ನು ಕಾರ್ಯಾಚರಿಸುವತ್ತ ಸರಕಾರ ಗಮನಹರಿಸಬೇಕು. ಹೊಸದಾಗಿ ಮೆಟ್ರೊ ಯೋಜನೆ ರೂಪಿಸಿದರೆ ಮತ್ತಷ್ಟು ಮರಗಳನ್ನು ಕಡಿಯುವ, ಹೆಚ್ಚು ಖರ್ಚು ಮಾಡುವ ಹೊರೆ ಉಂಟಾಗುತ್ತದೆ.
-ಶ್ರೀನಿವಾಸ್ ಅಲವಿಲ್ಲಿ, ಸಹ ಸಂಸ್ಥಾಪಕ, ಸಿಟಿಜನ್ಸ್ ಫಾರ್ ಬೆಂಗಳೂರು
ತುಮಕೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವ ಚಿಂತನೆ ಇದೆ. ಈ ಯೋಜನೆಯ ಸಾಧ್ಯತೆಗಳ ಕುರಿತು ಅಧ್ಯಯನ ಮಾಡುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಆದರೆ ಸದ್ಯಕ್ಕೆ ಯಾವುದೇ ಅಧ್ಯಯನ ನಡೆದಿಲ್ಲ.
-ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್ಸಿಎಲ್
ತುಮಕೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವ ಕುರಿತು ಮತ್ತೆ ಚರ್ಚೆ ಆರಂಭವಾದ ಬೆನ್ನಲ್ಲೇ ಅದಕ್ಕೂ ಮುನ್ನ ಉಪನಗರ ರೈಲು ಯೋಜನೆಗೆ ಆದ್ಯತೆ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ತುಮಕೂರು ರಸ್ತೆಯಲ್ಲಿ 2ನೇ ಹಂತದ ಮೆಟ್ರೊ ಯೋಜನೆಯಲ್ಲಿ ನಾಗಸಂದ್ರದಿಂದ ಬಿಐಇಸಿವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗವನ್ನು 70 ಕಿ.ಮೀ. ದೂರದ ತುಮಕೂರುವರೆಗೆ ವಿಸ್ತರಿಸುವ ಕುರಿತು ಚರ್ಚೆಯಾಗಿದೆ. ಈಗಾಗಲೇ ಲಭ್ಯವಿರುವ ರೈಲು ಸೌಲಭ್ಯವನ್ನು ಅಭಿವೃದ್ಧಿಪಡಿಸದೆ ದುಬಾರಿಯಾದ ಮೆಟ್ರೊ ಯೋಜನೆಯನ್ನು ಅನುಷ್ಠಾನಗೊಳಿಸುವ ಅಗತ್ಯವೇನಿದೆ ಎಂದು ರೈಲು ಸಾರಿಗೆ ತಜ್ಞರು ಪ್ರಶ್ನಿಸಿದ್ದಾರೆ.
ನಾಗಸಂದ್ರದಿಂದ ಬಿಐಇಸಿವರೆಗೆ 3 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗುತ್ತಿದೆ. ಇದನ್ನು ತುಮಕೂರುವರೆಗೆ ವಿಸ್ತರಿಸುವ ಯೋಜನೆ ಕುರಿತು 2016 ರಲ್ಲೇ ಚರ್ಚೆಯಾಗಿತ್ತು. ತುಮಕೂರುವರೆಗೆ ಮೆಟ್ರೊ ಮಾರ್ಗ ವಿಸ್ತರಿಸುವ ಯೋಜನೆಯ ಚಿಂತನೆ ಇನ್ನೂ ಇದೆ. ಈ ಯೋಜನೆಯ ಸಾಧ್ಯತೆ ಕುರಿತು ಅಧ್ಯಯನ ಮಾಡುವಂತೆ ಸರಕಾರ ಸೂಚನೆ ನೀಡಿದೆ ಎಂದು ಬಿಎಂಆರ್ಸಿಎಲ್ ಖಚಿತಪಡಿಸಿದೆ.
ಪ್ರತಿ ದಿನ ಬೆಂಗಳೂರಿನಿಂದ ಸುಮಾರು 40 ರೈಲುಗಳು ತುಮಕೂರು ಮಾರ್ಗವಾಗಿ ಕಾರ್ಯಾಚರಿಸುತ್ತಿವೆ. ಇತ್ತೀಚೆಗೆ ಬೆಂಗಳೂರಿನಿಂದ ಗುಬ್ಬಿವರೆಗೆ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚುವರಿ ರೈಲುಗಳನ್ನು ಕಾರ್ಯಾಚರಿಸಲಾಗುತ್ತಿದೆ. ಮೆಟ್ರೊ ಯೋಜನೆ ಬದಲು ಜೋಡಿ ಹಳಿಯನ್ನು ಮತ್ತಷ್ಟು ವಿಸ್ತರಿಸುವ ಕಾಮಗಾರಿ ಹಾಗೂ ರೈಲು ವಿದ್ಯುದೀಕರಣ ಕಾಮಗಾರಿ ನಡೆಸಿದರೆ ಉಪನಗರ ಮೆಮು ರೈಲುಗಳನ್ನು ಕಾರ್ಯಾಚರಿಸಬಹುದು ಎಂದು ರೈಲು ಸಾರಿಗೆ ತಜ್ಞ ಕೃಷ್ಣಪ್ರಸಾದ್ ಸಲಹೆ ನೀಡಿದ್ದಾರೆ.
ದುಬಾರಿ ಮೆಟ್ರೊ
1 ಕಿ.ಮೀ. ಉದ್ದದ ಮೆಟ್ರೊ ಎತ್ತರಿಸಿದ ಮಾರ್ಗದ ನಿರ್ಮಾಣಕ್ಕೆ 150-200 ಕೋಟಿ ರೂ. ಖರ್ಚಾಗುತ್ತದೆ. ಭೂಸ್ವಾಧೀನ ವೆಚ್ಚವನ್ನು ಸೇರಿಸಿದರೆ ಖರ್ಚು ಇನ್ನಷ್ಟು ಹೆಚ್ಚುತ್ತದೆ. ಇದರ ಬದಲು ಲಭ್ಯವಿರುವ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಉತ್ತಮ. ಮೆಟ್ರೊದ ಟಿಕೆಟ್ ದರಕ್ಕೆ ಹೋಲಿಸಿದರೆ ರೈಲು ಟಿಕೆಟ್ ದರ ಕಡಿಮೆ. ಮೆಟ್ರೊದಲ್ಲಿ ಸ್ಮಾರ್ಟ್ ಕಾರ್ಡ್ಗೆ ಶೇ.15 ರಷ್ಟು ರಿಯಾಯಿತಿ ಹೊರತುಪಡಿಸಿದರೆ ಪ್ರಯಾಣಿಕರಿಗೆ ಬೇರೆ ಯಾವುದೇ ಸೌಲಭ್ಯವಿಲ್ಲ. ಆದರೆ ರೈಲ್ವೆಯಲ್ಲಿ ಮೆಟ್ರೊಗಿಂತ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯ.
ಕೇಂದ್ರ ಸರಕಾರದ ಸಹಯೋಗದಲ್ಲಿ ರಾಜ್ಯ ಸರಕಾರ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು. ತುಮಕೂರಿಗೆ ಮೆಟ್ರೊ ಬದಲು ಉಪನಗರ ರೈಲು ತಂದರೆ ಸಮಯ ಹಾಗೂ ಖರ್ಚು ಉಳಿತಾಯವಾಗಿ ಜನರಿಗೆ ಅನುಕೂಲವಾಗುತ್ತದೆ.
-ಸಂಜೀವ್ ದ್ಯಾಮಣ್ಣವರ್, ರೈಲು ಸಾರಿಗೆ ತಜ್ಞ
ತುಮಕೂರಿಗೆ ಲಭ್ಯವಿರುವ ರೈಲು ಸಾರಿಗೆ ಮತ್ತಷ್ಟು ಅಭಿವೃದ್ಧಿಪಡಿಸಿ ಉಪನಗರ ರೈಲುಗಳನ್ನು ಕಾರ್ಯಾಚರಿಸುವತ್ತ ಸರಕಾರ ಗಮನಹರಿಸಬೇಕು. ಹೊಸದಾಗಿ ಮೆಟ್ರೊ ಯೋಜನೆ ರೂಪಿಸಿದರೆ ಮತ್ತಷ್ಟು ಮರಗಳನ್ನು ಕಡಿಯುವ, ಹೆಚ್ಚು ಖರ್ಚು ಮಾಡುವ ಹೊರೆ ಉಂಟಾಗುತ್ತದೆ.
-ಶ್ರೀನಿವಾಸ್ ಅಲವಿಲ್ಲಿ, ಸಹ ಸಂಸ್ಥಾಪಕ, ಸಿಟಿಜನ್ಸ್ ಫಾರ್ ಬೆಂಗಳೂರು
ತುಮಕೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವ ಚಿಂತನೆ ಇದೆ. ಈ ಯೋಜನೆಯ ಸಾಧ್ಯತೆಗಳ ಕುರಿತು ಅಧ್ಯಯನ ಮಾಡುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಆದರೆ ಸದ್ಯಕ್ಕೆ ಯಾವುದೇ ಅಧ್ಯಯನ ನಡೆದಿಲ್ಲ.
-ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್ಸಿಎಲ್