ಸುಮನಹಳ್ಳಿ ಮೇಲ್ಸೇತುವೆ ಸಂಚಾರ ಬಂದ್ , ಡಿ.15 ರಿಂದ ಮತ್ತೆ ದುರಸ್ತಿ
ಕೆಲವು ದೋಷಗಳು ಕಂಡುಬಂದಿರುವ ಹಿನ್ನೆಲೆ ಮಾಗಡಿ ರಸ್ತೆಗೆ ಸುಮನಹಳ್ಳಿ ಜಂಕ್ಷನ್ನಲ್ಲಿಅಡ್ಡವಾಗಿ ನಿರ್ಮಿಸಿರುವ ಮೇಲ್ಸೇತುವೆ ದುರಸ್ತಿ. 40 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಕಾರ್ಯ. ಕೆಲ ದಿನ ಸಂಚಾರ ಬಂದ್.
Vijaya Karnataka Web 11 Dec 2019, 12:06 pm
ಬೆಂಗಳೂರು: ಮಾಗಡಿ ರಸ್ತೆಗೆ ಸುಮನಹಳ್ಳಿ ಜಂಕ್ಷನ್ನಲ್ಲಿಅಡ್ಡವಾಗಿ ನಿರ್ಮಿಸಿರುವ ಮೇಲ್ಸೇತುವೆಯಲ್ಲಿ ಕೆಲವೊಂದು ದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಡಿ. 15ರಿಂದ ಕಾಮಗಾರಿ ಆರಂಭವಾಗಲಿದೆ ಎಂದು ಮೇಯರ್ ಎಂ.ಗೌತಮ್ಕುಮಾರ್ ತಿಳಿಸಿದರು.
ಮೇಲ್ಸೇತುವೆಯಲ್ಲಿಇತ್ತೀಚೆಗೆ ಕಾಂಕ್ರೀಟ್ ಸಡಿಲಗೊಂಡು ಕುಸಿದ ಹಿನ್ನೆಲೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಆನಂತರ ವಾಹನ ಸಂಚಾರ ನಿಷೇಧಿಸಿ, ದುರಸ್ತಿಪಡಿಸಲಾಯಿತು. ಬಳಿಕ ಮೇಲ್ಸೇತುವೆಯ ದೃಢತೆಯ ಬಗ್ಗೆ ವರದಿ ಸಲ್ಲಿಸುವಂತೆ ಸಿವಿಲ್ ಎಡ್ ಟೆಕ್ನೋ ಕ್ಲಿನಿಕ್ ಸಂಸ್ಥೆಗೆ ಸೂಚಿಸಲಾಗಿತ್ತು. ಅದರಂತೆ ಸಂಸ್ಥೆಯ ತಾಂತ್ರಿಕ ತಜ್ಞರ ತಂಡವು ಮೇಲ್ಸೇತುವೆಯ ಬೇರಿಂಗ್ಸ್ ಸೇರಿದಂತೆ ಇನ್ನಿತರೆ ದುರಸ್ತಿ ಕಾಮಗಾರಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್, ''ಬೇರಿಂಗ್ಸ್ ಸೇರಿದಂತೆ ಇನ್ನಿತರೆ ದುರಸ್ತಿ ಕಾಮಗಾರಿಗಳಿಗೆ 40 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2016ರಲ್ಲಿ ಮೇಲ್ಸೇತುವೆಯನ್ನು ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಾಗಿ, ದುರಸ್ತಿ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು. ಮೇಲ್ಸೇತುವೆಗೆ ಬಳಸಿರುವ ಕಾಂಕ್ರೀಟ್ ಮಿಶ್ರಣದಲ್ಲಿ ಲೋಪವಾಗಿದೆ. ಮೇಲ್ಸೇತುವೆ ಸದೃಢವಾಗಿದ್ದು, ಸವಾರರು ಆತಂಕಪಡುವ ಅಗತ್ಯವಿದೆ. ಆದಷ್ಟು ಬೇಗ ದುರಸ್ತಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ,'' ಎಂದು ಹೇಳಿದರು.
ಸಿರ್ಸಿ ಮೇಲ್ಸೇತುವೆ ದುರಸ್ತಿ, ಮೈಸೂರು ರಸ್ತೆ ಕಡೆಯಿಂದ ಟೌನ್ಹಾಲ್ ಕಡೆಗಿನ ಮಾರ್ಗ 1 ತಿಂಗಳು ಬಂದ್
''ಮೇಲ್ಸೇತುವೆಗಳ ವಿಭಜಕಗಳಲ್ಲಿನ ಸ್ಪ್ಯಾಬ್ಗಳನ್ನು ಸರಿಪಡಿಸಿ, ಮಳೆ ನೀರು ಸರಾಗವಾರಿ ಹರಿದು ಹೋಗುವಂತೆ ಮಾಡಲಾಗುವುದು. ವಿಭಜಕಗಳಲ್ಲಿ ಹೂ ಕುಂಡಗಳನ್ನಿಟ್ಟು, ಸುಂದರೀಕರಣಗೊಳಿಸಲಾಗುವುದು,'' ಎಂದು ತಿಳಿಸಿದರು.
ರಾಜರಾಜೇಶ್ವರಿನಗರ ವಲಯದ ವಿಶೇಷ ಆಯುಕ್ತ ಲೋಕೇಶ್, ಜಂಟಿ ಆಯುಕ್ತ ಬಾಲಶೇಖರ್, ಮುಖ್ಯ ಎಂಜಿನಿಯರ್ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೇಲ್ಸೇತುವೆಯಲ್ಲಿಇತ್ತೀಚೆಗೆ ಕಾಂಕ್ರೀಟ್ ಸಡಿಲಗೊಂಡು ಕುಸಿದ ಹಿನ್ನೆಲೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಆನಂತರ ವಾಹನ ಸಂಚಾರ ನಿಷೇಧಿಸಿ, ದುರಸ್ತಿಪಡಿಸಲಾಯಿತು. ಬಳಿಕ ಮೇಲ್ಸೇತುವೆಯ ದೃಢತೆಯ ಬಗ್ಗೆ ವರದಿ ಸಲ್ಲಿಸುವಂತೆ ಸಿವಿಲ್ ಎಡ್ ಟೆಕ್ನೋ ಕ್ಲಿನಿಕ್ ಸಂಸ್ಥೆಗೆ ಸೂಚಿಸಲಾಗಿತ್ತು. ಅದರಂತೆ ಸಂಸ್ಥೆಯ ತಾಂತ್ರಿಕ ತಜ್ಞರ ತಂಡವು ಮೇಲ್ಸೇತುವೆಯ ಬೇರಿಂಗ್ಸ್ ಸೇರಿದಂತೆ ಇನ್ನಿತರೆ ದುರಸ್ತಿ ಕಾಮಗಾರಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್, ''ಬೇರಿಂಗ್ಸ್ ಸೇರಿದಂತೆ ಇನ್ನಿತರೆ ದುರಸ್ತಿ ಕಾಮಗಾರಿಗಳಿಗೆ 40 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2016ರಲ್ಲಿ ಮೇಲ್ಸೇತುವೆಯನ್ನು ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಾಗಿ, ದುರಸ್ತಿ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು. ಮೇಲ್ಸೇತುವೆಗೆ ಬಳಸಿರುವ ಕಾಂಕ್ರೀಟ್ ಮಿಶ್ರಣದಲ್ಲಿ ಲೋಪವಾಗಿದೆ. ಮೇಲ್ಸೇತುವೆ ಸದೃಢವಾಗಿದ್ದು, ಸವಾರರು ಆತಂಕಪಡುವ ಅಗತ್ಯವಿದೆ. ಆದಷ್ಟು ಬೇಗ ದುರಸ್ತಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ,'' ಎಂದು ಹೇಳಿದರು.
ಸಿರ್ಸಿ ಮೇಲ್ಸೇತುವೆ ದುರಸ್ತಿ, ಮೈಸೂರು ರಸ್ತೆ ಕಡೆಯಿಂದ ಟೌನ್ಹಾಲ್ ಕಡೆಗಿನ ಮಾರ್ಗ 1 ತಿಂಗಳು ಬಂದ್
''ಮೇಲ್ಸೇತುವೆಗಳ ವಿಭಜಕಗಳಲ್ಲಿನ ಸ್ಪ್ಯಾಬ್ಗಳನ್ನು ಸರಿಪಡಿಸಿ, ಮಳೆ ನೀರು ಸರಾಗವಾರಿ ಹರಿದು ಹೋಗುವಂತೆ ಮಾಡಲಾಗುವುದು. ವಿಭಜಕಗಳಲ್ಲಿ ಹೂ ಕುಂಡಗಳನ್ನಿಟ್ಟು, ಸುಂದರೀಕರಣಗೊಳಿಸಲಾಗುವುದು,'' ಎಂದು ತಿಳಿಸಿದರು.
ರಾಜರಾಜೇಶ್ವರಿನಗರ ವಲಯದ ವಿಶೇಷ ಆಯುಕ್ತ ಲೋಕೇಶ್, ಜಂಟಿ ಆಯುಕ್ತ ಬಾಲಶೇಖರ್, ಮುಖ್ಯ ಎಂಜಿನಿಯರ್ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.