ಆ್ಯಪ್ನಗರ

ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯರಶ್ಮಿಯ ಅಭಿಷೇಕ

ಸೂರ್ಯಾಸ್ತಮಾನಕ್ಕೆ ಮುಂಚಿತವಾಗಿ ಸೂರ್ಯರಶ್ಮಿಯು ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5.20ರಿಂದ 5.30ರ ಮಧ್ಯದಲ್ಲಿ ಒಂದು ನಿಮಿಷ ಹಾದು ಹೋಯಿತು

Vijaya Karnataka Web 15 Jan 2019, 6:46 pm
ಬೆಂಗಳೂರು: ಮಕರ ಸಂಕ್ರಾಂತಿ (ಜ.15) ಯಂದು ಸಂಜೆ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯ ರಶ್ಮಿಯ ಅಭಿಷೇಕ ಆಯಿತು. ಈ ವಿಸ್ಮಯ, ಅಪರೂಪದ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು.
Vijaya Karnataka Web ಗವಿ ಗಂಗಾಧರೇಶ್ವರ ದೇಗುಲ
ಗವಿ ಗಂಗಾಧರೇಶ್ವರ ದೇಗುಲ


''ಪಂಚಾಂಗದ ಪ್ರಕಾರ ಜ. 15ರಂದು ಮಧ್ಯಾಹ್ನ ನಂತರ ಉತ್ತರಾಯಣ ಪುಣ್ಯಕಾಲ ಪ್ರವೇಶ ಆರಂಭವಾಗುತ್ತದೆ. ಹೀಗಾಗಿ ಸೂರ್ಯಾಸ್ತಮಾನಕ್ಕೆ ಮುಂಚಿತವಾಗಿ ಸೂರ್ಯರಶ್ಮಿಯು ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5.20ರಿಂದ 5.30ರ ಮಧ್ಯದಲ್ಲಿ ಒಂದು ನಿಮಿಷ ಹಾದು ಹೋಯಿತು. ಶಿವನ ವಿಗ್ರಹಕ್ಕೆ ಸೂರ್ಯಾಭಿಷೇಕ ಆಗುವ ವೇಳೆಗೆ ಎಳನೀರು ಮತ್ತು ಹಾಲಿನಿಂದ ಸ್ವಾಮಿಗೆ ಅಭಿಷೇಕ ಮಾಡಲಾಯಿತು'' ಎಂದು ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್‌ ತಿಳಿಸಿದ್ದಾರೆ.

''ಸೂರ್ಯನ ಕಿರಣಗಳು ಶಿವನ ಲಿಂಗವನ್ನು ಸ್ಪರ್ಶಿಸುವುದನ್ನು ವೀಕ್ಷಿಸುವುದರಿಂದ ದೋಷ ನಿವಾರಣೆಯಾಗಲಿದೆ ಎಂಬುದು ಜನರ ನಂಬಿಕೆ. ಹೀಗಾಗಿ ಈ ಅಪರೂಪದ ಕ್ಷಣವನ್ನು ಭಕ್ತರು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಬೃಹತ್‌ ಎಲ್‌ಸಿಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ'' ಎಂದು ಹೇಳಿದರು.

''ಈ ವರ್ಷ ಎರಡು ದಿನ ತಡವಾಗಿ ಧನುರ್ಮಾಸ ಪೂಜೆ ಆರಂಭವಾಗಿದ್ದು, ಒಂದು ದಿನ ಮುಂಚಿತವಾಗಿ ಮುಗಿಯುತ್ತಿದೆ. ಹೀಗಾಗಿ ಐದು ವರ್ಷಕ್ಕೊಮ್ಮೆ ಜ. 15ಕ್ಕೆ ಬರುತ್ತಿದ್ದ ಸಂಕ್ರಾಂತಿಯನ್ನು, ಈ ವರ್ಷ ಪುನಃ ಅದೇ ದಿನದಂದು ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ'' ಎಂದರು.

ಸೂರ್ಯದೇವ ದಕ್ಷಿಣಾಯನ ಪಥ ಮುಗಿಸಿ ಶಿವ ಲಿಂಗವನ್ನು ಸ್ಪರ್ಶಿಸಿ ಉತ್ತರಾಯಣ ಪ್ರವೇಶಿಸುವ ಸಂದರ್ಭದಲ್ಲಿ ಸ್ವಾಮಿಗೆ ಎಳನೀರು ಮತ್ತು ಕ್ಷೀರಾಭಿಷೇಕ . ನಂತರ ಪೂಜೆ ನಡೆಯಿತು..
- ಡಾ. ಸೋಮಸುಂದರ ದೀಕ್ಷಿತ್‌, ಶ್ರೀ ಗವಿಗಂಗಾಧರೇಶ್ವರ ದೇವಾಲಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ