ಆ್ಯಪ್ನಗರ

ಬೆಂಗಳೂರಲ್ಲಿ ಕರ್ಫ್ಯೂ: ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ, ಏನಿದೆ-ಏನಿಲ್ಲಾ?

ಲಾಕ್‌ಡೌನ್‌-1 ಮತ್ತು 2ರಲ್ಲಿ ಇದ್ದ ಕಟ್ಟುನಿಟ್ಟಿನ ನಿಯಮಗಳು ಭಾನುವಾರವೂ ಜಾರಿಯಲ್ಲಿ ಇರುತ್ತವೆ. ಆದ್ದರಿಂದ ಅನಗತ್ಯವಾಗಿ ಯಾರೂ ವಾಹನಗಳಲ್ಲಿ ಓಡಾಡಬಾರದು. ಅಗತ್ಯ ಹಾಗೂ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ

Vijaya Karnataka Web 23 May 2020, 12:57 pm
ಬೆಂಗಳೂರು: ಲಾಕ್‌ಡೌನ್‌ ವಿಸ್ತರಣೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ನಗರದಾದ್ಯಂತ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅನಗತ್ಯವಾಗಿ ಓಡಾಡುವ ವಾಹನ ಸವಾರರು, ಸಾರ್ವಜನಿಕರ ವಿರುದ್ಧ ಪೊಲೀಸರು ಕೇಸು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಕರ್ಫ್ಯೂ ನಿಯಮಗಳು
  1. ಹಣ್ಣು- ತರಕಾರಿ, ಮಾಂಸ- ದಿನಸಿ, ಹಾಲು ಖರೀದಿಗೆ ಅವಕಾಶ.
  2. ವೈದ್ಯರು, ನರ್ಸ್‌, ಆ್ಯಂಬುಲೆನ್ಸ್‌, ಮಾಧ್ಯಮ ಪ್ರತಿನಿಧಿಗಳು ಓಡಾಡಬಹುದು.
  3. ಭಾನುವಾರ ಸಂಪೂರ್ಣ ಲಾಕ್‌ಡೌನ್‌ನಿಂದ ಬ್ಯಾರಿಕೇಡ್‌ ಹಾಕಿ ರಸ್ತೆಗಳ ಬಂದ್‌.
  4. ಅನಗತ್ಯವಾಗಿ ವಾಹನಗಳು ರಸ್ತೆಗಿಳಿದರೆ ಜಪ್ತಿ ಮಾಡಿ ಕಾನೂನು ಕ್ರಮ.
  5. ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲ.
  6. ಆಸ್ಪತ್ರೆ, ಮೆಡಿಕಲ್‌ ಸ್ಟೋರ್‌ ತೆರೆಯಲು ಅವಕಾಶ.
  7. ಡಯಾಲಿಸಿಸ್‌,ಅನಾರೋಗ್ಯ ಸಮಸ್ಯೆ ಇದ್ದವರ ಓಡಾಟಕ್ಕೆ ಅನುಮತಿ.
  8. ಗರ್ಭಿಣಿಯರು, ಹಿರಿಯ ನಾಗರಿಕರು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಬಹುದು.
  9. ಹೋಟೆಲ್‌, ದರ್ಶಿನಿಗಳಿಂದ ಪಾರ್ಸೆಲ್‌ ಕೊಂಡೊಯ್ಯಬಹುದು.
ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 7 ರವರೆಗೆ ಕರ್ಫ್ಯೂ: ಭಾಸ್ಕರ್‌ ರಾವ್‌
ಯಾವುದು ಬಂದ್‌?
  1. ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶವಿಲ್ಲ.
  2. ಬ್ಯೂಟಿ ಪಾರ್ಲರ್‌, ಸಲೂನ್‌, ಸ್ಪಾ, ಬಟ್ಟೆ ಅಂಗಡಿ,ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್‌.
  3. ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ.
  4. ಗಾರ್ಮೆಂಟ್ಸ್‌ ,ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಬಂದ್‌.
  5. ಖಾಸಗಿ ಕಂಪನಿಗಳೂ ಕೂಡ ಬಂದ್‌
  6. ಎಲ್ಲ ಪಾರ್ಕ್‌ಗಳಿಗೂ ಬೀಗ. ಜಾಗಿಂಗ್‌, ವಾಕಿಂಗ್‌ಗೆ ಅವಕಾಶವಿಲ್ಲ.
  7. ಚಿನ್ನದ ಅಂಗಡಿಗಳು ಕೂಡ ಬಂದ್‌.
  8. ಆಟೊ, ಕ್ಯಾಬ್‌ಗಳು ರಸ್ತೆಗೆ ಇಳಿಯುವಂತಿಲ್ಲ
  9. ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ.
  10. ಬೇರೆ ಜಿಲ್ಲೆಗೆ ಹೋಗಲು ಅನುಮತಿ ಇಲ್ಲವೇ ಇಲ್ಲ.
  11. ಗಲ್ಲಿ ಗಲ್ಲಿಗಳಲ್ಲೂ ಪೊಲೀಸರ ನಿಯೋಜನೆ.
ಉಗುಳಿದಕ್ಕೆ, ಮಾಸ್ಕ್‌ ಧರಿಸದಕ್ಕೆ 22 ದಿನದಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡ 5.85 ಲಕ್ಷ ರೂ.!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ