ಬೆಂಗಳೂರು: ಪ್ರೇಯಸಿಯ ಚಿಕಿತ್ಸೆ ಖರ್ಚು ನಿಭಾಯಿಸಿಲು ವೃತ್ತಿಯಲ್ಲಿ ದರ್ಜಿಯಾಗಿರುವ ಪ್ರಿಯತಮ ಬರೊಬ್ಬರಿ 51 ಬೈಕ್ಗಳನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನಗರದ ಹೊಂಗಸಂದ್ರದ ನಾಯ್ಡು ಲೇಔಟ್ನ ಮನೋಹರ ಅಲಿಯಾಸ್ ಮನು (23) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 21 ಲಕ್ಷ ರೂ.ಮೌಲ್ಯದ 51 ಬೈಕ್ಗಳನ್ನು ವಶಪಡಿಸಿಕೊಂಡು ಜೈಲಿಗೆ ಅಟ್ಟಲಾಗಿದೆ.
ಅಸ್ವಸ್ಥ ಪ್ರೀಯಸಿಯನ್ನು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲು ತನಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಬೇರೆ ದಾರಿ ಇಲ್ಲದೆ ಕಳ್ಳತನಕ್ಕೆ ಇಳಿಯಬೇಕಾಯಿತು ಎಂದು ಮನು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಮನೋಹರ ಹಾಗೂ ಆತನ ಸಹೋದ್ಯೋಗಿ ಪರಸ್ಪರ ಪ್ರೀತಿಸಿ ಮದುವೆಯಾಗಲು ಇಚ್ಚಿಸಿದ್ದರು. ದುರಾದೃಷ್ಟವಶಾತ್ ಆ ಹುಡುಗಿ ಅನಾರೋಗ್ಯಕ್ಕೆ ತುತ್ತಾಗಿ ಇದೇ ಜನವರಿಯಲ್ಲಿ ಆಂಧ್ರಪ್ರದೇಶಕ್ಕೆ ಮರಳಿದ್ದರು. ತದನಂತರ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ತನ್ನ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಹುಡುಗಿ ಮನೋಹರ ಬಳಿ ಕೇಳಿಕೊಂಡಿದ್ದಳು.
ಮನೋಹರನ ಪ್ರೇಯಸಿ ಕಾಮಾಲೆ ಮತ್ತು ಹಾರ್ಮೋನ್ ಸಂಬಂಧಿತ ಕಾಯಿಲೆಯಿಂದ ನರಳುತ್ತಿದ್ದಳು. ಈಕೆಯ ಚಿಕಿತ್ಸೆಗೆ 5 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.
ವಿಚಾರಣೆಯಲ್ಲಿ ಆರೋಪಿಯು ಪ್ರೇಯಸಿಯ ಚಿಕಿತ್ಸೆಗಾಗಿ ಬೈಕ್ ಕಳವು ಮಾಡುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾನೆ. ಪ್ರಿಯಕರ ಬೈಕ್ ಕಳವು ಮಾಡಿ ತನ್ನನ್ನು ಸಾಕುತ್ತಿರುವುದು ಪ್ರೇಯಸಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹೊಂಗಸಂದ್ರದ ನಾಯ್ಡು ಲೇಔಟ್ನ ಮನೋಹರ ಅಲಿಯಾಸ್ ಮನು (23) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 21 ಲಕ್ಷ ರೂ.ಮೌಲ್ಯದ 51 ಬೈಕ್ಗಳನ್ನು ವಶಪಡಿಸಿಕೊಂಡು ಜೈಲಿಗೆ ಅಟ್ಟಲಾಗಿದೆ.
ಅಸ್ವಸ್ಥ ಪ್ರೀಯಸಿಯನ್ನು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲು ತನಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಬೇರೆ ದಾರಿ ಇಲ್ಲದೆ ಕಳ್ಳತನಕ್ಕೆ ಇಳಿಯಬೇಕಾಯಿತು ಎಂದು ಮನು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಮನೋಹರ ಹಾಗೂ ಆತನ ಸಹೋದ್ಯೋಗಿ ಪರಸ್ಪರ ಪ್ರೀತಿಸಿ ಮದುವೆಯಾಗಲು ಇಚ್ಚಿಸಿದ್ದರು. ದುರಾದೃಷ್ಟವಶಾತ್ ಆ ಹುಡುಗಿ ಅನಾರೋಗ್ಯಕ್ಕೆ ತುತ್ತಾಗಿ ಇದೇ ಜನವರಿಯಲ್ಲಿ ಆಂಧ್ರಪ್ರದೇಶಕ್ಕೆ ಮರಳಿದ್ದರು. ತದನಂತರ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ತನ್ನ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಹುಡುಗಿ ಮನೋಹರ ಬಳಿ ಕೇಳಿಕೊಂಡಿದ್ದಳು.
ಮನೋಹರನ ಪ್ರೇಯಸಿ ಕಾಮಾಲೆ ಮತ್ತು ಹಾರ್ಮೋನ್ ಸಂಬಂಧಿತ ಕಾಯಿಲೆಯಿಂದ ನರಳುತ್ತಿದ್ದಳು. ಈಕೆಯ ಚಿಕಿತ್ಸೆಗೆ 5 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.
ವಿಚಾರಣೆಯಲ್ಲಿ ಆರೋಪಿಯು ಪ್ರೇಯಸಿಯ ಚಿಕಿತ್ಸೆಗಾಗಿ ಬೈಕ್ ಕಳವು ಮಾಡುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾನೆ. ಪ್ರಿಯಕರ ಬೈಕ್ ಕಳವು ಮಾಡಿ ತನ್ನನ್ನು ಸಾಕುತ್ತಿರುವುದು ಪ್ರೇಯಸಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.