ಬೆಂಗಳೂರು: ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಬೆಂಗಳೂರು ಜಲಮಂಡಳಿಯ 68 ಟ್ಯಾಂಕರ್ಗಳಿಂದ ನೀರು ಪೂರೈಕೆ ನಡೆಯುತ್ತಿದೆ. ಅಧಿಕಾರಿಗಳು ತಮಗಿಷ್ಟ ಬಂದಲ್ಲಿ ನೀರು ಪೂರೈಸುವುದನ್ನು ತಪ್ಪಿಸಲು ಪ್ರತಿ ಟ್ಯಾಂಕರ್ಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ.
110 ಹಳ್ಳಿಗಳಲ್ಲಿ ಬಿಬಿಎಂಪಿ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಲಮಂಡಳಿಯು ತನ್ನ ವ್ಯಾಪ್ತಿಯಲ್ಲಿ ನೀರು ಪೂರೈಸುತ್ತಿದೆ. ಈ ಹಿಂದೆ, ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವ ಬಡಾವಣೆಗಳ ನಿವಾಸಿಗಳಿಗೆ ಅಥವಾ ಬಿಬಿಎಂಪಿ ಸದಸ್ಯರ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಪ್ರತಿ ಸೇವಾಠಾಣೆಗಳಿಂದ ಮಾಹಿತಿ ಪಡೆದು ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಮೇ ಅಂತ್ಯದವರೆಗೂ ಈ ವೇಳಾಪಟ್ಟಿಯನ್ನು ಅನುಸರಿಸಿಯೇ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತದೆ.
ವಿದ್ಯುತ್ ಇಲ್ಲದ ಪ್ರದೇಶಗಳಿಗೆ ಆದ್ಯತೆ:
ಜಲಮಂಡಳಿಯ ನೀರಿನ ಟ್ಯಾಂಕರ್ಗಳಿಗೆ ಮೇವರೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಆಯಾ ಪ್ರದೇಶಗಳಿಗೆ ಅದೇ ದಿನದಂದು ಕಡ್ಡಾಯವಾಗಿ ಉಚಿತ ನೀರು ಪೂರೈಸಬೇಕೆಂದು ಸೂಚಿಸಲಾಗಿದೆ. ಪ್ರತಿ ಟ್ಯಾಂಕರ್ಗಳ ಚಾಲಕರ ಹೆಸರು, ದೂರವಾಣಿ ಸಂಖ್ಯೆ, ಆ ಟ್ಯಾಂಕರ್ನ ನೋಂದಣಿ ಸಂಖ್ಯೆ ಹಾಗೂ ಅಧಿಕಾರಿಗಳ ವಿವರ ವೇಳಾಪಟ್ಟಿಯಲ್ಲಿದೆ. ಪ್ರತಿ ಟ್ಯಾಂಕರ್ ಆ ದಿನದಂದು ನಿಗದಿ ಮಾಡಿದ ಪ್ರದೇಶದಲ್ಲಿ ನೀರು ನೀಡಲಿದೆ.
ಆದರೆ ವಿದ್ಯುತ್ ಕೈ ಕೊಟ್ಟ ಸಮಯದಲ್ಲಿ ವೇಳಾಪಟ್ಟಿಯನ್ನು ಬಿಟ್ಟು ಆದ್ಯತೆ ಮೇರೆಗೆ ಆ ಪ್ರದೇಶಕ್ಕೆ ನೀರು ಪೂರೈಸಲು ಅವಕಾಶವಿದೆ. ಕಾವೇರಿ ನೀರು ಸರಬರಾಜಾದ ಸಮಯದಲ್ಲಿ ವಿದ್ಯುತ್ ವ್ಯತ್ಯಯಗೊಂಡ ಪ್ರದೇಶಗಳಿಗೆ ಆದ್ಯತೆ ಮೇರೆಗೆ ನೀರು ಪೂರೈಸಲಾಗುತ್ತದೆ. ಹಾಗೆಯೇ ನೀರಿನ ಕಡಿಮೆ ಒತ್ತಡದಿಂದ ನೀರು ಪೂರೈಕೆಯಾಗದ ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ನೀರು ನೀಡಲಾಗುತ್ತದೆ.
ಬೋರ್ವೆಲ್ ನೀರು ಬಳಕೆ ಇಲ್ಲ:
ಜಲಮಂಡಳಿಯ 7,932 ಬೋರ್ವೆಲ್ಗಳು ಸುಸ್ಥಿತಿಯಲ್ಲಿವೆ. ಆದರೆ ಎಲ್ಲ ಬೋರ್ವೆಲ್ಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಹಲವು ಬೋರ್ವೆಲ್ಗಳಿಗೆ ನಿವಾಸಿಗಳೇ ಪಂಪ್ ಹಾಕಿಕೊಂಡು ನೀರು ಸೆಳೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಬೋರ್ವೆಲ್ಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ. ಆದರೂ ಸದ್ಯ ಬೋರ್ವೆಲ್ಗಳನ್ನು ಬಳಸಿಕೊಳ್ಳುತ್ತಿಲ್ಲ. ಈ ಬೇಸಿಗೆಯಲ್ಲಿ ಜಲಾಗಾರಗಳಿಂದ ಕಾವೇರಿ ನೀರನ್ನು ತುಂಬಿಸಿಕೊಂಡು ಸರಬರಾಜು ಮಾಡಲಾಗುತ್ತದೆ.
110 ಹಳ್ಳಿಗಳಲ್ಲಿ ಬಿಬಿಎಂಪಿ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಲಮಂಡಳಿಯು ತನ್ನ ವ್ಯಾಪ್ತಿಯಲ್ಲಿ ನೀರು ಪೂರೈಸುತ್ತಿದೆ. ಈ ಹಿಂದೆ, ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವ ಬಡಾವಣೆಗಳ ನಿವಾಸಿಗಳಿಗೆ ಅಥವಾ ಬಿಬಿಎಂಪಿ ಸದಸ್ಯರ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಪ್ರತಿ ಸೇವಾಠಾಣೆಗಳಿಂದ ಮಾಹಿತಿ ಪಡೆದು ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಮೇ ಅಂತ್ಯದವರೆಗೂ ಈ ವೇಳಾಪಟ್ಟಿಯನ್ನು ಅನುಸರಿಸಿಯೇ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತದೆ.
ವಿದ್ಯುತ್ ಇಲ್ಲದ ಪ್ರದೇಶಗಳಿಗೆ ಆದ್ಯತೆ:
ಜಲಮಂಡಳಿಯ ನೀರಿನ ಟ್ಯಾಂಕರ್ಗಳಿಗೆ ಮೇವರೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಆಯಾ ಪ್ರದೇಶಗಳಿಗೆ ಅದೇ ದಿನದಂದು ಕಡ್ಡಾಯವಾಗಿ ಉಚಿತ ನೀರು ಪೂರೈಸಬೇಕೆಂದು ಸೂಚಿಸಲಾಗಿದೆ. ಪ್ರತಿ ಟ್ಯಾಂಕರ್ಗಳ ಚಾಲಕರ ಹೆಸರು, ದೂರವಾಣಿ ಸಂಖ್ಯೆ, ಆ ಟ್ಯಾಂಕರ್ನ ನೋಂದಣಿ ಸಂಖ್ಯೆ ಹಾಗೂ ಅಧಿಕಾರಿಗಳ ವಿವರ ವೇಳಾಪಟ್ಟಿಯಲ್ಲಿದೆ. ಪ್ರತಿ ಟ್ಯಾಂಕರ್ ಆ ದಿನದಂದು ನಿಗದಿ ಮಾಡಿದ ಪ್ರದೇಶದಲ್ಲಿ ನೀರು ನೀಡಲಿದೆ.
ಆದರೆ ವಿದ್ಯುತ್ ಕೈ ಕೊಟ್ಟ ಸಮಯದಲ್ಲಿ ವೇಳಾಪಟ್ಟಿಯನ್ನು ಬಿಟ್ಟು ಆದ್ಯತೆ ಮೇರೆಗೆ ಆ ಪ್ರದೇಶಕ್ಕೆ ನೀರು ಪೂರೈಸಲು ಅವಕಾಶವಿದೆ. ಕಾವೇರಿ ನೀರು ಸರಬರಾಜಾದ ಸಮಯದಲ್ಲಿ ವಿದ್ಯುತ್ ವ್ಯತ್ಯಯಗೊಂಡ ಪ್ರದೇಶಗಳಿಗೆ ಆದ್ಯತೆ ಮೇರೆಗೆ ನೀರು ಪೂರೈಸಲಾಗುತ್ತದೆ. ಹಾಗೆಯೇ ನೀರಿನ ಕಡಿಮೆ ಒತ್ತಡದಿಂದ ನೀರು ಪೂರೈಕೆಯಾಗದ ಎತ್ತರದ ಪ್ರದೇಶಗಳಿಗೆ ಟ್ಯಾಂಕರ್ ನೀರು ನೀಡಲಾಗುತ್ತದೆ.
ಬೋರ್ವೆಲ್ ನೀರು ಬಳಕೆ ಇಲ್ಲ:
ಜಲಮಂಡಳಿಯ 7,932 ಬೋರ್ವೆಲ್ಗಳು ಸುಸ್ಥಿತಿಯಲ್ಲಿವೆ. ಆದರೆ ಎಲ್ಲ ಬೋರ್ವೆಲ್ಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಹಲವು ಬೋರ್ವೆಲ್ಗಳಿಗೆ ನಿವಾಸಿಗಳೇ ಪಂಪ್ ಹಾಕಿಕೊಂಡು ನೀರು ಸೆಳೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಬೋರ್ವೆಲ್ಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ. ಆದರೂ ಸದ್ಯ ಬೋರ್ವೆಲ್ಗಳನ್ನು ಬಳಸಿಕೊಳ್ಳುತ್ತಿಲ್ಲ. ಈ ಬೇಸಿಗೆಯಲ್ಲಿ ಜಲಾಗಾರಗಳಿಂದ ಕಾವೇರಿ ನೀರನ್ನು ತುಂಬಿಸಿಕೊಂಡು ಸರಬರಾಜು ಮಾಡಲಾಗುತ್ತದೆ.