ಆ್ಯಪ್ನಗರ

ಬೆಂಗಳೂರಿನಲ್ಲಿ ಹೆಚ್ಚಿದ ಬಿಸಿಲಿನ ಝಳ, ತಂಪು ಪದಾರ್ಥ ಸೇವಿಸಲು ಆತಂಕ

ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಜನರಿಗೆ ಸೆಕೆ ತಡೆದುಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಕೊರೊನಾ ಭೀತಿಯಿಂದ ತಂಪುಪಾನೀಯಗಳನ್ನು ಸೇವಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

Vijaya Karnataka Web 16 Mar 2020, 8:21 am
ಬೆಂಗಳೂರು: ನಗರದಲ್ಲಿ ಬಿಸಿಲಿನ ಝಳ ಜೋರಾಗಿದ್ದು, ರಾತ್ರಿಯಲ್ಲೂ ಬೆವರು ಸುರಿಯುವ ಕಿರಿಕಿರಿ ಇದೆ. ಆದರೆ ಕೊರೊನಾ ಸೋಂಕಿನ ಭೀತಿಯು ಐಸ್‌ಕ್ರೀಮ್‌, ತಂಪು ಪಾನೀಯ ಸೇವಿಸುವುದಕ್ಕೂ ಕಡಿವಾಣ ಹಾಕಿದೆ.
Vijaya Karnataka Web icecream


ನಗರದ ಕೇಂದ್ರಭಾಗಗಳಲ್ಲಿ ಕೆಲ ದಿನಗಳ ಹಿಂದೆ 32 ರಿಂದ 33 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಭಾನುವಾರ 34.5 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ರಾತ್ರಿಯೂ ಫ್ಯಾನ್‌ ಬಳಸದೆ ನಿದ್ದೆ ಮಾಡುವಂತಿಲ್ಲ. ಇಂತಹ ಸೆಕೆಯ ಕಿರಿಕಿರಿ ಇದ್ದರೂ ಜನರು ತಂಪು ಪದಾರ್ಥಗಳತ್ತ ನೋಡುವಂತಿಲ್ಲ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದೆ. ನೆಗಡಿ ಬರುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ತಂಪು ಪಾನೀಯ ಕುಡಿಯುವುದು, ಐಸ್‌ಕ್ರೀಮ್‌ ತಿನ್ನುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, ಜನರು ತಂಪು ಪದಾರ್ಥಗಳಿಂದ ದೂರ ಕಾಯ್ದುಕೊಳ್ಳುತ್ತಿದ್ದಾರೆ.

ಎಚ್‌ಎಎಲ್‌ನಲ್ಲಿ 33.8 ಡಿಗ್ರಿ ಸೆ. ಹಾಗೂ ಕೆಐಎಎಲ್‌ನಲ್ಲಿ 33.8 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ತಾಪಮಾನ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ