ಆ್ಯಪ್ನಗರ

ಕಾರಿನ ಗಾಜು ಒಡೆದ ಆರೋಪಿಗಳ ಬಂಧನ

ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ 9 ವಾಹನಗಳ ಗ್ಲಾಸ್‌ ಒಡೆದು ದಾಂಧಲೆ ನಡೆಸಿದ ಇಬ್ಬರು ಆರೋಪಿಗಳನ್ನು ಆರ್‌.ಟಿ. ನಗರ ಗಸ್ತು ಪೊಲೀಸರು, ಬೆನ್ನಟ್ಟಿ ಬಂಧಿಸಿದ್ದಾರೆ.

Vijaya Karnataka 27 Jun 2018, 5:00 am
ಬೆಂಗಳೂರು: ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ 9 ವಾಹನಗಳ ಗ್ಲಾಸ್‌ ಒಡೆದು ದಾಂಧಲೆ ನಡೆಸಿದ ಇಬ್ಬರು ಆರೋಪಿಗಳನ್ನು ಆರ್‌.ಟಿ. ನಗರ ಗಸ್ತು ಪೊಲೀಸರು, ಬೆನ್ನಟ್ಟಿ ಬಂಧಿಸಿದ್ದಾರೆ.
Vijaya Karnataka Web the arrest of the car was broken by the car
ಕಾರಿನ ಗಾಜು ಒಡೆದ ಆರೋಪಿಗಳ ಬಂಧನ


ಮಠದಹಳ್ಳಿ ನಿವಾಸಿ ಕಿರಣ್‌ ಅಲಿಯಾಸ್‌ ಬಲೂನ್‌(19) ಹಾಗೂ ಜೆ.ಸಿ.ನಗರದ ಚೇತನ್‌ ಅಲಿಯಾಸ್‌ ಕೋಬ್ರಾ(19) ಬಂಧಿತರು. ಈ ಹಿಂದೆ ಆರ್‌.ಟಿ ನಗರದಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿ ಕಿರಣ್‌ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್‌ 25ರ ತಡರಾತ್ರಿ 2.30ರಲ್ಲಿ ಗಾಂಜಾ ನಶೆಯಲ್ಲಿ ಕಿರಣ್‌ ಮತ್ತು ಚೇತನ್‌, ಸ್ಕೂಟರ್‌ನಲ್ಲಿ ಓಡಾಡುತ್ತಾ ಸಿಎಆರ್‌ ಸರ್ಕಲ್‌, ಮಠದಹಳ್ಳಿ ಮೈದಾನದಲ್ಲಿ ನಿಲ್ಲಿಸಿದ್ದ 5 ಖಾಸಗಿ ಬಸ್‌, ಬಿಬಿಎಂಪಿಯ 2 ಕಸದ ಲಾರಿ, 1 ಕಾರು, 1 ಕ್ಯಾಂಟರ್‌ ಗಾಜುಗಳನ್ನು ದೊಣ್ಣೆಗಳಿಂದ ಒಡೆದಿದ್ದರು.ಇದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಎಚ್ಚೆತ್ತ ಗಸ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಯುವಕರನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ