ಆ್ಯಪ್ನಗರ

ನಗರದಲ್ಲಿ ಬರಲಿವೆ ಸೋಲಾರ್‌ ರಿಚಾರ್ಜಿಂಗ್‌ ಸ್ಟೇಷನ್‌

ಭವಿಷ್ಯದ ಪರಿಸರ ಸ್ನೇಹಿ ವಾಹನ ಎಂದೇ ಹೇಳಲಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ರಿಚಾರ್ಜಿಂಗ್‌ ಕೇಂದ್ರವನ್ನು ಬೆಸ್ಕಾಂ ಇತ್ತೀಚೆಗೆ ಆರಂಭಿಸಿದೆ. ಇದರ ಬೆನ್ನಲ್ಲೇ ನಗರದಲ್ಲಿ ಎರಡು ಸೋಲಾರ್‌ ರಿಚಾರ್ಜಿಂಗ್‌ ಕೇಂದ್ರ ಆರಂಭಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ.

Vijaya Karnataka 22 Mar 2018, 5:00 am
ಬೆಂಗಳೂರು: ಭವಿಷ್ಯದ ಪರಿಸರ ಸ್ನೇಹಿ ವಾಹನ ಎಂದೇ ಹೇಳಲಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ರಿಚಾರ್ಜಿಂಗ್‌ ಕೇಂದ್ರವನ್ನು ಬೆಸ್ಕಾಂ ಇತ್ತೀಚೆಗೆ ಆರಂಭಿಸಿದೆ. ಇದರ ಬೆನ್ನಲ್ಲೇ ನಗರದಲ್ಲಿ ಎರಡು ಸೋಲಾರ್‌ ರಿಚಾರ್ಜಿಂಗ್‌ ಕೇಂದ್ರ ಆರಂಭಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ.
Vijaya Karnataka Web FILE PHOTO: Workers inspect Baojun E100 all-electric battery cars at a final assembly plant in Liuzhou
Workers inspect Baojun E100 all-electric battery cars at a final assembly plant operated by General Motors Co and its local joint-venture partners in Liuzhou, Guangxi Zhuang Autonomous Region, China, November 8, 2017. Picture taken November 8, 2017. REUTERS/Norihiko Shirouzu/File Photo


ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಡಾ.ಹರೀಶ್‌ ಹಂದೆ ಈ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮುಂದೆ ಇಟ್ಟಿದ್ದಾರೆ. ಜಯನಗರ ಹಾಗೂ ಯಲಹಂಕ ಭಾಗದಲ್ಲಿ ಸೋಲಾರ್‌ ರಿಚಾರ್ಜಿಂಗ್‌ ಕೇಂದ್ರ ಆರಂಭಿಸಲು ಸೂಕ್ತ ಎಂಬ ಮಾಹಿತಿಯನ್ನು ಸೆಲ್ಕೊ ಸಂಸ್ಥೆ ಸಂಗ್ರಹಿಸಿದೆ. ಈ ವಿಷಯವನ್ನು ಹರೀಶ್‌ ಹಂದೆ ಅವರೇ ಬಹಿರಂಗಪಡಿಸಿದ್ದಾರೆ.

ಇಸ್ರೇಲ್‌ ಸೇರಿದಂತೆ ವಿದೇಶಗಳಲಷ್ಟೇ ಸೋಲಾರ್‌ ರೀಚಾರ್ಜಿಂಗ್‌ ಕೇಂದ್ರಗಳು ಇವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ರಾಜ್ಯ ಸರಕಾರದ ಜತೆ ಮಾತುಕತೆ ನಡೆದಿದೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಇದಕ್ಕೊಂದು ರೂಪ ಸಿಗಬಹುದು ಎಂದು ಹರೀಶ್‌ ಹಂದೆ ಅವರು ಮಾಧ್ಯಮದವರೊಂದಿಗೆ ಬುಧವಾರ ನಡೆಸಿದ ಸಂವಾದದಲ್ಲಿ ತಿಳಿಸಿದರು.

ಪೆಟ್ರೋಲ್‌ ಪಂಪ್‌ ಮಾದರಿಯಲ್ಲಿ ಇಸ್ರೇಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಬದಲಾವಣೆ ಮಾಡಿಕೊಡುವ ಸ್ಟೇಷನ್‌ಗಳು ಇವೆ. ಅಂದರೆ ಬಳಸಿದ ಬ್ಯಾಟರಿ ಕೊಟ್ಟು ರಿಚಾರ್ಜ್‌ ಮಾಡಿರುವ ಬ್ಯಾಟರಿ ಪಡೆದುಕೊಂಡು ಹೋಗಬಹುದು. ಇದಕ್ಕಾಗಿ ವಾಹನ ಚಾರ್ಜ್‌ ಆಗುವವರೆಗೂ ಕಾಯುವ ಅಗತ್ಯವಿಲ್ಲ. ಅದೇ ಮಾದರಿಯಲ್ಲಿ ರಿಚಾರ್ಜಿಂಗ್‌ ಕೇಂದ್ರ ಆರಂಭಿಸುವ ಆಲೋಚನೆ ಇದೆ. ಮೊದಲು ಆಟೊಗಳಿಗೆ ಅನುಕೂಲ ಆಗುವ ಚಾರ್ಜಿಂಗ್‌ ಕೇಂದ್ರದ ಕಡೆ ಗಮನಹರಿಸಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಆಟೊಗಳು ಇರುವುದರಿಂದ ಎಲೆಕ್ಟ್ರಿಕ್‌ ಆಟೊ ಬಳಕೆ ಮಾಡುವುದರಿಂದ ಮಾಲಿನ್ಯ ಪ್ರಮಾಣವೂ ತಗ್ಗಲಿದೆ ಎಂದು ಹೇಳಿದರು.

ಬೆಸ್ಕಾಂ ಆರಂಭಿಸಿರುವ ರಿಚಾರ್ಜಿಂಗ್‌ ಕೇಂದ್ರದಲ್ಲಿ ಬ್ಯಾಟರಿ ಬದಲಾಯಿಸುವ ವ್ಯವಸ್ಥೆ ಇಲ್ಲ. ವಾಹನವನ್ನು ರಿಚಾರ್ಜಿಂಗ್‌ ಕೇಂದ್ರದಲ್ಲೇ ನಿಲ್ಲಿಸಿ ರಿಚಾರ್ಜ್‌ ಮಾಡಬೇಕಾಗಿದೆ. ಇದರಿಂದ ವಾಹನ ಚಾಲರು ಇಲ್ಲವೇ ಕಾರು ಮಾಲೀಕರು ಗಂಟೆಗಟ್ಟಲೇ ಕಾಯಬೇಕಾಗಬಹುದು. ಬ್ಯಾಟರಿ ರಿಚಾರ್ಜ್‌ ಮಾಡಿಕೊಡುವ ವ್ಯವಸ್ಥೆ ಬಂದರೆ ಹೆಚ್ಚು ಅನುಕೂಲ ಆಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ