ಆ್ಯಪ್ನಗರ

ನೆಲಮಂಗಲದ ಗ್ರಾಮವೊಂದರಲ್ಲಿ ಬೆಂಕಿಯುಂಡೆಯಂತಾದ ನೆಲ

ಗಂಗಾಧರನ ಪಾಳ್ಯ ಗ್ರಾಮದ ಹೊರವಲಯದಲ್ಲಿ ನಿರ್ದಿಷ್ಟ ಪ್ರದೇಶವೊಂದರಲ್ಲಿ ನೆಲ ಸಿಕ್ಕಾಪಟ್ಟೆ ಬಿಸಿಯಾಗಿ, ಆಗಾಗ್ಗೆ ಬಿಸಿ ಹೊಗೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Vijaya Karnataka 8 Apr 2018, 10:04 am
ನೆಲಮಂಗಲ: ಗಂಗಾಧರನ ಪಾಳ್ಯ ಗ್ರಾಮದ ಹೊರವಲಯದಲ್ಲಿ ನಿರ್ದಿಷ್ಟ ಪ್ರದೇಶವೊಂದರಲ್ಲಿ ನೆಲ ಸಿಕ್ಕಾಪಟ್ಟೆ ಬಿಸಿಯಾಗಿ, ಆಗಾಗ್ಗೆ ಬಿಸಿ ಹೊಗೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
Vijaya Karnataka Web air


ಗ್ರಾಮದ ಹೊರವಲಯದಲ್ಲಿ ಆಂಜನಪ್ಪ ಎಂಬ ವ್ಯಕ್ತಿ ಮೂತ್ರ ವಿಸರ್ಜನೆಗೆಂದು ತೆರಳಿದಾಗ ಆತನ ಕಾಲಿಗೆ ಬೆಂಕಿ ತಗುಲಿ ಸುಟ್ಟ ಅನುಭವವಾಗಿದೆ. ಪಕ್ಕದಲ್ಲಿ ಹೊಗೆಯೂ ಕಾಣಿಸಿಕೊಂಡಿದೆ. ಗಾಬರಿಗೊಂಡ ಆಂಜನಪ್ಪ ಘಟನೆಯ ಕುರಿತು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಬಳಿಕ ಗ್ರಾಮಸ್ಥರು ಬಂದು ವೀಕ್ಷಿಸಿದಾಗಲೂ ನೆಲ ಕಾದ ಕಾವಲಿಯಂತಾಗಿಲ್ಲದೆ, ಸುಟ್ಟ ಕುರುಹುಗಳು ಕಂಡು ಬಂದಿದೆ. ಈ ಪ್ರದೇಶದಲ್ಲಿ ಪೇಪರ್‌ನಂತಹ ವಸ್ತುಗಳನ್ನು ಹಾಕಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಆಸುಪಾಸಿನ ಪೊದೆಗಳು ಸುಟ್ಟು ಹೋಗಿವೆ.

ಘಟನೆ ನಡೆದ ಪ್ರದೇಶದ ಸುತ್ತಮುತ್ತ ಕೈಗಾರಿಕೆಗಳು ಇರುವುದರಿಂದ, ರಾಸಾಯನಿಕ ಪದಾರ್ಥಗಳು ಮಣ್ಣಿನಲ್ಲಿ ಬೆರೆತು ಇಂತಹ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿ ಕುದಿಯುತ್ತಿರುವ ಮಣ್ಣನ್ನು ನೋಡಲು ಸ್ಥಳೀಯರು ಉತ್ಸುಕತೆಯಿಂದ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ನೆಲಮಂಗಲ ತಹಸೀಲ್ದಾರ್‌ ರಮೇಶ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಹಸೀಲ್ದಾರ್‌ ಆದೇಶದ ಮೇರೆಗೆ ಅಗ್ನಿ ಶಾಮಕ ಸಿಬ್ಬಂದಿ ನೀರು ಹಾಯಿಸಿ ತಾತ್ಕಾಲಿಕ ಶಮನ ಮಾಡಿದ್ದಾರೆ.

ತಾಲೂಕಿನ ಗಂಗಾಧರನ ಪಾಳ್ಯದಲ್ಲಿ ನಡೆದಿರುವ ಘಟನೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ. ಘಟನೆಗೆ ಖಚಿತ ಕಾರಣ ತಿಳಿದುಬಂದ ಮೇಲೆ ಕ್ರಮ ವಹಿಸಲಾಗುವುದು.
-ಎನ್‌.ರಮೇಶ್‌, ತಹಸೀಲ್ದಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ