ಆ್ಯಪ್ನಗರ

ದೇವನಹಳ್ಳಿ ಟೋಲ್‌ಗೆ ಪೊಲೀಸ್‌ ಭದ್ರತೆ ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು-ಹೈದರಾಬಾದ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7ರಲ್ಲಿರುವ ದೇವನಹಳ್ಳಿ ಬಳಿಯ ನವಯುಗ ಟೋಲ್‌ ಗೇಟ್‌ಗೆ ಸೂಕ್ತ ಪೊಲೀಸ್‌ ರಕ್ಷ ಣೆ ಒದಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಹೈಕೋರ್ಟ್‌ ಆದೇಶಿಸಿದೆ.

Vijaya Karnataka 24 Apr 2018, 5:00 am
ಬೆಂಗಳೂರು: ಬೆಂಗಳೂರು-ಹೈದರಾಬಾದ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7ರಲ್ಲಿರುವ ದೇವನಹಳ್ಳಿ ಬಳಿಯ ನವಯುಗ ಟೋಲ್‌ ಗೇಟ್‌ಗೆ ಸೂಕ್ತ ಪೊಲೀಸ್‌ ರಕ್ಷ ಣೆ ಒದಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಹೈಕೋರ್ಟ್‌ ಆದೇಶಿಸಿದೆ.
Vijaya Karnataka Web the high court ordered the police to secure the devanahalli toll
ದೇವನಹಳ್ಳಿ ಟೋಲ್‌ಗೆ ಪೊಲೀಸ್‌ ಭದ್ರತೆ ನೀಡಲು ಹೈಕೋರ್ಟ್‌ ಆದೇಶ


ಈ ಕುರಿತಂತೆ ನವಯುಗ ದೇವನಹಳ್ಳಿ ಟೋಲ್‌ ವೇ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಎಸ್‌.ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ನಿರಾತಂಕವಾಗಿ ಟೋಲ್‌ ಸಂಗ್ರಹಿಸಲು ಅರ್ಜಿದಾರರು ಕೋರಿದ್ದಾರೆ. ಆದ್ದರಿಂದ, ಈ ದಿಸೆಯಲ್ಲಿ ಗೃಹ ಇಲಾಖೆ ಸೂಕ್ತ ರಕ್ಷ ಣೆ ಒದಗಸಿಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ವಿಭಾಗದ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೆ ನ್ಯಾಯಪೀಠ ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.

ವಿಮಾನ ನಿಲ್ದಾಣಕ್ಕೆ ವಾಹನಗಳು ಹೋಗುವಾಗ ಈಗ ಟೋಲ್‌ ಇಲ್ಲ. ವಾಪಸ್‌ ಬರುವಾಗ ಮಾತ್ರ ಟೋಲ್‌ ಸಂಗ್ರಹಿಸಲಾಗುತ್ತಿದೆ. ಈಗ ಎರಡೂ ಕಡೆಯಿಂದಲೂ ವಾಹನಗಳಿಗೆ ಟೋಲ್‌ ಸಂಗ್ರಹಿಸಲು ನವಯುಗ್‌ ಸಂಸ್ಥೆ ನಿರ್ಧರಿಸಿದೆ. ಇದಕ್ಕೆ ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತಪಡಿಸಿದ್ದು, ಟೋಲ್‌ ಸಂಗ್ರಹ ಆರಂಭಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರತಿಭಟನೆ ನಡೆದರೆ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಪೊಲೀಸರು ಮೌಖಿಕವಾಗಿ ತಿಳಿಸಿದ್ದರು. ಹೀಗಾಗಿ ನವಯುಗ ಸಂಸ್ಥೆಯು ಕೋರ್ಟ್‌ ಮೊರೆ ಹೋಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ