ಬೆಂಗಳೂರು: ಗ್ರಾಮೀಣ ಯುವ ಪೀಳಿಗೆಯಲ್ಲಿ ಸಾಂಸ್ಕೃತಿಕ ಒಲವು ಮೂಡಿಸಬೇಕು. ಅವರಿಂದ ಜಂಗಮಶೀಲ ಸಮಾಜ ಕಟ್ಟಬೇಕು ಎಂಬುದು ಸಿಜಿಕೆಯವರ ಕನಸಾಗಿತ್ತು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಂಗನಿರಂತರ ಕಲಾ ತಂಡದಿಂದ ಭಾನುವಾರ ರಾಜರಾಜೇಶ್ವರಿ ನಗರದ ರಂಗನಿರಂತರ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ 'ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2018' ಹಾಗೂ ಸಂತೋಷ ಕೂಟ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
''ನಗರದ ನಿವಾಸಿಗಳು ಆಧುನಿಕ ಸಂಸ್ಕೃತಿಗೆ ಮಾರು ಹೋಗಬಾದರು ಎಂಬುದು ರಂಗಕರ್ಮಿ ಸಿಜಿಕೆ ಅವರ ಕನಸಾಗಿತ್ತು. ಆದರೆ, ಅವರ ಕನಸು ಕನಸಾಗಿಯೇ ಉಳಿದಿದೆ. ರಂಗಕರ್ಮಿಗಳು ಅದನ್ನು ನನಸು ಮಾಡುವತ್ತ ಮುಖಮಾಡಬೇಕಿದೆ,'' ಎಂದು ಹೇಳಿದರು.
''ಸಿಜಿಕೆ ಎನ್ನುವ ಮೂರಕ್ಷ ರಗಳಲ್ಲಿ ಏನೋ ಒಂದು ರೀತಿಯ ಮೋಡಿ ಇದೆ. ಅವರೊಂದು ರೀತಿ ಏಕಲವ್ಯನ ಮಾದರಿಯ ಪ್ರತಿಭೆ. ಹಾಗಾಗಿ ರಂಗತಂಡಗಳು ಅವರ ನಾಟಕಗಳು, ಆಶಯಗಳನ್ನು ದಾಖಲೆಗೊಳಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಸಿಜಿಕೆ ರಂಗನಿರಂತರ ಕೇಂದ್ರಕ್ಕೆ ಚಾಲನೆ ನೀಡಿದ ಕೆ.ಸಿ.ರಾಮಮೂರ್ತಿ ಅವರು ಸಿಜಿಕೆಯವರು ತಮ್ಮ ಸಹಪಾಠಿಗಳಾಗಿದ್ದ ಸಮಯದ ಒಡನಾಟ, ವಿಶ್ವವಿದ್ಯಾಲಯದಲ್ಲಿ ತಾವು ರಿಜಿಸ್ಟ್ರಾರ್ ಆಗಿದ್ದಾಗ ಅವರು ಮಾಡಿದ ಸಾಧನೆಯನ್ನು ನೆನೆದರು.
ಲೇಖಕಿ ಡಾ.ವಿಜಯಮ್ಮ, ಗಾಯಕಿ ಬಿ.ಜಯಶ್ರೀ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2018ರ ಗೌರವ ನಿರ್ದೇಶಕ ಡಾ.ಡಿ.ಕೆ.ಚೌಟ, ಡಾ.ಎಚ್.ಎಲ್.ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.
ರಂಗನಿರಂತರ ಕಲಾ ತಂಡದಿಂದ ಭಾನುವಾರ ರಾಜರಾಜೇಶ್ವರಿ ನಗರದ ರಂಗನಿರಂತರ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ 'ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2018' ಹಾಗೂ ಸಂತೋಷ ಕೂಟ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
''ನಗರದ ನಿವಾಸಿಗಳು ಆಧುನಿಕ ಸಂಸ್ಕೃತಿಗೆ ಮಾರು ಹೋಗಬಾದರು ಎಂಬುದು ರಂಗಕರ್ಮಿ ಸಿಜಿಕೆ ಅವರ ಕನಸಾಗಿತ್ತು. ಆದರೆ, ಅವರ ಕನಸು ಕನಸಾಗಿಯೇ ಉಳಿದಿದೆ. ರಂಗಕರ್ಮಿಗಳು ಅದನ್ನು ನನಸು ಮಾಡುವತ್ತ ಮುಖಮಾಡಬೇಕಿದೆ,'' ಎಂದು ಹೇಳಿದರು.
''ಸಿಜಿಕೆ ಎನ್ನುವ ಮೂರಕ್ಷ ರಗಳಲ್ಲಿ ಏನೋ ಒಂದು ರೀತಿಯ ಮೋಡಿ ಇದೆ. ಅವರೊಂದು ರೀತಿ ಏಕಲವ್ಯನ ಮಾದರಿಯ ಪ್ರತಿಭೆ. ಹಾಗಾಗಿ ರಂಗತಂಡಗಳು ಅವರ ನಾಟಕಗಳು, ಆಶಯಗಳನ್ನು ದಾಖಲೆಗೊಳಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಸಿಜಿಕೆ ರಂಗನಿರಂತರ ಕೇಂದ್ರಕ್ಕೆ ಚಾಲನೆ ನೀಡಿದ ಕೆ.ಸಿ.ರಾಮಮೂರ್ತಿ ಅವರು ಸಿಜಿಕೆಯವರು ತಮ್ಮ ಸಹಪಾಠಿಗಳಾಗಿದ್ದ ಸಮಯದ ಒಡನಾಟ, ವಿಶ್ವವಿದ್ಯಾಲಯದಲ್ಲಿ ತಾವು ರಿಜಿಸ್ಟ್ರಾರ್ ಆಗಿದ್ದಾಗ ಅವರು ಮಾಡಿದ ಸಾಧನೆಯನ್ನು ನೆನೆದರು.
ಲೇಖಕಿ ಡಾ.ವಿಜಯಮ್ಮ, ಗಾಯಕಿ ಬಿ.ಜಯಶ್ರೀ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2018ರ ಗೌರವ ನಿರ್ದೇಶಕ ಡಾ.ಡಿ.ಕೆ.ಚೌಟ, ಡಾ.ಎಚ್.ಎಲ್.ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.