ಆ್ಯಪ್ನಗರ

ಇಲ್ಲಿ ಗಾಡಿಗೆ ಪೆಟ್ರೋಲ್‌ ಹಾಕಿಸಿದರೆ ಫುಡ್‌ ಫ್ರೀ

ಈ ಪೆಟ್ರೋಲ್‌ ಬಂಕ್‌ನಲ್ಲಿ ನೀವು ಗಾಡಿಗೆ ಪೆಟ್ರೋಲ್‌ ಹಾಕಿಸಿದರೆ ಪುಕ್ಕಟೆಯಾಗಿ ನೀವು ಹೊಟ್ಟೆ ತುಂಬಿಸಿಕೊಳ್ಳಬಹುದು.

Bangalore Mirror Bureau 4 Sep 2017, 5:48 pm
ಬೆಂಗಳೂರು: ಈ ಪೆಟ್ರೋಲ್‌ ಬಂಕ್‌ನಲ್ಲಿ ನೀವು ಗಾಡಿಗೆ ಪೆಟ್ರೋಲ್‌ ಹಾಕಿಸಿದರೆ ಪುಕ್ಕಟೆಯಾಗಿ ನೀವು ಹೊಟ್ಟೆ ತುಂಬಿಸಿಕೊಳ್ಳಬಹುದು. ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಇಂದಿರಾನಗರ ಆರ್‌ಟಿಒ ಕಚೇರಿ ಸಮೀಪವಿರುವ ವೆಂಕಟೇಶ್ವರ ಸರ್ವಿಸ್‌ ಸ್ಟೇಷನ್‌ನಲ್ಲಿಇಂಥದ್ದೊಂದು ಪ್ರಯೋಗ ಆರಂಭಿಸಿದೆ.
Vijaya Karnataka Web this petrol pump offers free food while you refuel
ಇಲ್ಲಿ ಗಾಡಿಗೆ ಪೆಟ್ರೋಲ್‌ ಹಾಕಿಸಿದರೆ ಫುಡ್‌ ಫ್ರೀ


ಐಒಸಿ ಮೊದಲ ಬಾರಿಗೆ ಈ ಪೈಲಟ್‌ ಯೋಜನೆಗೆ ಇಲ್ಲಿ ಚಾಲನೆ ನೀಡಿದ್ದು, ಈ ಕ್ರಮವು ಬೆಂಗಳೂರು ನಾಗರಿಕರು ಹೊತ್ತಿಗೆ ಸರಿಯಾಗಿ ಆಹಾರ ಸೇವಿಸದೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲಿದೆ. ದಿನದ 24 ಗಂಟೆಯೂ ವೆಜ್‌, ನಾನ್‌ವೆಜ್‌ ಉಪಾಹಾರ, ಸ್ನ್ಯಾಕ್ಸ್‌ಗಳು ಇಲ್ಲಿ ಲಭ್ಯವಿರುವುದಾಗಿ ಸರ್ವಿಸ್‌ ಸ್ಟೇಷನ್‌ ನಡೆಸುತ್ತಿರುವ ಪ್ರಕಾಶ್‌ ರಾವ್‌ ಹೇಳುತ್ತಾರೆ.

ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಬಹಳಷ್ಟು ಮಂದಿ ಸರಿಯಾಗಿ ತಿನ್ನಲು ಯಾರಿಗೂ ಸಮಯವಿಲ್ಲ. ಆದರೆ ಪೆಟ್ರೋಲ್‌ ಪಂಪ್‌ನಲ್ಲಿ ಖಂಡಿತಾ ಎಲ್ಲರೂ ಸ್ವಲ್ಪ ಹೊತ್ತು ನಿಂತೇ ನಿಲ್ಲುತ್ತಾರೆ. ಅ ವೇಳೆಯಲ್ಲಿ ಅವರ ಹೊಟ್ಟೆ ತುಂಬಿಸುವ ಪ್ರಯತ್ನ ನಮ್ಮದು ಎನ್ನುತ್ತಾರವರು.

'ಯು ಫಿಲ್‌ ಯುವರ್‌ ಟ್ಯಾಂಕ್‌, ವಿ ಫಿಲ್‌ ಯುವರ್‌ ಟಮ್ಮಿಎಂಬುದು'ಇಲ್ಲಿನ ಸ್ಲೋಗನ್‌. ಗ್ರಾಹಕರು ಇಂಧನಕ್ಕಾಗಿ ವಾಹನ ನಿಲ್ಲಿಸಿದ ತಕ್ಷಣ ಅವರಿಷ್ಟದ ಆಹಾರವನ್ನು ಕೆಲವೇ ಕ್ಷಣಗಳಲ್ಲಿ ಪ್ಯಾಕ್‌ ಮಾಡಿ ಕೊಡುತ್ತೇವೆ ಎಂದು ರಾವ್‌ ಹೇಳಿದ್ದಾರೆ.

ಎಲ್ಲ ಬೇಕರಿ ಉತ್ಪನ್ನಗಳಿದ್ದು,ಆಹಾರ ತಯಾರಿಸುವಲ್ಲಿ ಇಸ್ಕಾನ್‌ ಸಹಭಾಗಿತ್ವ ಇದೆ. ಇಂಧನ ಗ್ರಾಹಕರಲ್ಲದವರು ಹಣ ಪಾವತಿಸಿ ಆಹಾರ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಜಾರಿಯಿಂದ ಆಗುವ ನಷ್ಟದ ಭಾಗವನ್ನು ಐಒಸಿ ತುಂಬುತ್ತದೆ. ನಗರದ ನೂರು ಐಒಸಿ ಬಂಕ್‌ಗಳಲ್ಲಿ ಪೈಲಟ್‌ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ