ಆ್ಯಪ್ನಗರ

ವಾಲಿದ ಮೂರು ಆಂತಸ್ತಿನ ಕಟ್ಟಡ

ವುಕುಮ್‌ಸಿಂಗ್‌ ಎಂಬುವವರ ಮೂರು ಆಂತಸ್ತಿನ ಕಟ್ಟಡ ಪಕ್ಕದ ಖಾಲಿ ಸೈಟ್‌ನಲ್ಲಿ ಕುಮರೇಶ್‌ ಎಂಬುವರು ಸೋಮವಾರ ಸಂಜೆ ಜೆಸಿಬಿ ಮೂಲಕ ಪಾಯಕ್ಕೆ ಮಣ್ಣು ಅಗೆಯುವ ವೇಳೆ ಕಟ್ಟಡ ಏಕಾಎಕಿ ವಾಲಿದೆ.

Vijaya Karnataka 14 May 2019, 5:00 am
ಕೃಷ್ಣರಾಜಪುರ: ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಪಾಯಕ್ಕೆ ಮಣ್ಣು ಅಗೆಯುವ ಸಂದರ್ಭದಲ್ಲಿ ಪಕ್ಕದ ಮೂರು ಆಂತಸ್ತಿನ ಕಟ್ಟಡ ಬಿರುಕು ಬಿಟ್ಟು ವಾಲಿರುವ ಘಟನೆ ಹೂರಮಾವು ರೈಲ್ವೆ ಕೇಳ ಸೇತುವೆಯ ಸಮೀಪ ಜರುಗಿದೆ.
Vijaya Karnataka Web three store building swings
ವಾಲಿದ ಮೂರು ಆಂತಸ್ತಿನ ಕಟ್ಟಡ


ವುಕುಮ್‌ಸಿಂಗ್‌ ಎಂಬುವವರ ಮೂರು ಆಂತಸ್ತಿನ ಕಟ್ಟಡ ಪಕ್ಕದ ಖಾಲಿ ಸೈಟ್‌ನಲ್ಲಿ ಕುಮರೇಶ್‌ ಎಂಬುವರು ಸೋಮವಾರ ಸಂಜೆ ಜೆಸಿಬಿ ಮೂಲಕ ಪಾಯಕ್ಕೆ ಮಣ್ಣು ಅಗೆಯುವ ವೇಳೆ ಕಟ್ಟಡ ಏಕಾಎಕಿ ವಾಲಿದೆ. ಕೂಡಲೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಹೆಣ್ಣೂರು ಪೊಲೀಸರು, ಕಟ್ಟಡದಲ್ಲಿ ವಾಸವಾಗಿದ್ದವರನ್ನು ತೆರವುಗೊಳಿಸಿದ್ದಾರೆ. ಕಟ್ಟಡ ಬೀಳದಂತೆ ಹಿಟಾಚಿ ಮೂಲಕ ತಡೆಯಿಡಿಯಲಾಗಿದೆ.

ವುಕುಮ್‌ಸಿಂಗ್‌ 13 ವರ್ಷಗಳ ಹಿಂದೆ ಅರ್ಧ ಸೈಟ್‌ನಲ್ಲಿ ಯಾವುದೇ ರೀತಿಯ ಕಾಂಕ್ರಿಟ್‌ ಕಾಲಂ ಹಾಕದೆ ಅಂಗಡಿ ನಿರ್ಮಿಸಿದ್ದರು. ಎರಡು ವರ್ಷಗಳ ಹಿಂದೆ ಅಂಗಡಿ ಮೇಲೆ ಮೂರು ಅಂತಸ್ತಿನ ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ.

ಮೂರು ಅಂತಸ್ತಿನ ಕಟ್ಟಡಕ್ಕೆ ಹಾಗೂ ಪಾಯಕ್ಕೆ ಮಣ್ಣು ತೆಗೆಯುತ್ತಿದ್ದ ಸೈಟ್‌ಗೂ ಬಿಬಿಎಂಪಿ ವತಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ವುಕುಮ್‌ಸಿಂಗ್‌ ಹಾಗೂ ಕುಮರೇಶ್‌ ವಿರುದ್ದ ಹೆಣ್ಣೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಬೆಳಗ್ಗೆ ಬಿರುಕು ಬಿಟ್ಟಿರುವ ಕಟ್ಟಡವನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಚರಣೆ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಅನಾಹುತ ಸಂಭವಿಸದಂತೆ ತಡೆಯಲು ಅಗ್ನಿಶಾಮಕ ದಳ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಹೆಣ್ಣೂರು ಪೊಲೀಸರು ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ