ಆ್ಯಪ್ನಗರ

ಮೆಟ್ರೊ ಸಮಯ ವಿಸ್ತರಣೆ ರಾತ್ರಿ ಪ್ರಯಾಣಿಕರಿಗೆ ವರ; ಸರಾಸರಿ 1000 ಪ್ರಯಾಣಿಕರಿಂದ ಬಳಕೆ

ಬೆಂಗಳೂರು: 'ನಮ್ಮ ಮೆಟ್ರೊ'ದ ಮಧ್ಯರಾತ್ರಿವರೆಗಿನ ವಿಸ್ತರಿಸಿದ ಸೇವೆ ಪ್ರಯಾಣಿಕರಿಗೆ ವರದಾನವಾಗಿ ಪರಿಣಮಿಸಿದ್ದು, ಒಂದು ನಿಲ್ದಾಣದಲ್ಲಿಸರಾಸರಿ ಸಾವಿರ ಮಂದಿ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಕ್ರಮೇಣ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಐಟಿ ಕಂಪನಿ ಉದ್ಯೋಗಿಗಳು, ಕಾರ್ಖಾನೆಗಳ ಕಾರ್ಮಿಕರು, ರೈಲು ಪ್ರಯಾಣಿಕರಿಂದ ವಿಸ್ತರಿಸಿದ ಸೇವೆಗೆ ಉತ್ತಮ ಸ್ಪಂದನೆ ದೊರೆತಿದೆ. ಜ.1 ರಿಂದ ಅನ್ವಯವಾಗುವಂತೆ ಮೆಟ್ರೊ ಅವಧಿಯನ್ನು ರಾತ್ರಿ 11 ರಿಂದ 12 ಗಂಟೆವರೆಗೆ ವಿಸ್ತರಿಸಿದ್ದು, ರಾತ್ರಿ ತಡವಾಗಿ ಮನೆಗೆ ಹೋಗುವವರಿಗೆ ಇದು ಸುರಕ್ಷಿತ ಹಾಗೂ ಸುಲಭ ಸಾರಿಗೆ ಸೌಲಭ್ಯ ನೀಡಿದೆ. ಮೆಜೆಸ್ಟಿಕ್‌ನಲ್ಲಿ ರಾತ್ರಿ 11.25 ರಿಂದ 12 ರವರೆಗೆ ಹಾಗೂ ಉಳಿದ ಟರ್ಮಿನಲ್‌ ನಿಲ್ದಾಣಗಳಲ್ಲಿ ರಾತ್ರಿ 11 ರಿಂದ 11.30, 11.35 ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಸರಾಸರಿ ಅರ್ಧ ಗಂಟೆಯ ವಿಸ್ತರಣೆ ಅವಧಿಯಲ್ಲಿ ಒಂದು ನಿಲ್ದಾಣದಿಂದ ಸರಾಸರಿ 1 ಸಾವಿರ ಮಂದಿ ಪ್ರಯಾಣ ಬೆಳೆಸುತ್ತಿದ್ದಾರೆ. ಭಾನುವಾರ ಮಾತ್ರ 800 ಮಂದಿ ಪ್ರಯಾಣ ಬೆಳೆಸುತ್ತಿದ್ದಾರೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದ್ದು, ಇದು ತೃಪ್ತಿದಾಯಕ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ಸಂಖ್ಯೆ ಕ್ರಮೇಣವಾಗಿ ಹೆಚ್ಚಲಿದೆ ಎಂಬ ನಿರೀಕ್ಷೆ ಇದೆ.

Vijaya Karnataka Web 20 Jan 2020, 6:46 pm
ಬೆಂಗಳೂರು: 'ನಮ್ಮ ಮೆಟ್ರೊ'ದ ಮಧ್ಯರಾತ್ರಿವರೆಗಿನ ವಿಸ್ತರಿಸಿದ ಸೇವೆ ಪ್ರಯಾಣಿಕರಿಗೆ ವರದಾನವಾಗಿ ಪರಿಣಮಿಸಿದ್ದು, ಒಂದು ನಿಲ್ದಾಣದಲ್ಲಿಸರಾಸರಿ ಸಾವಿರ ಮಂದಿ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಕ್ರಮೇಣ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಐಟಿ ಕಂಪನಿ ಉದ್ಯೋಗಿಗಳು, ಕಾರ್ಖಾನೆಗಳ ಕಾರ್ಮಿಕರು, ರೈಲು ಪ್ರಯಾಣಿಕರಿಂದ ವಿಸ್ತರಿಸಿದ ಸೇವೆಗೆ ಉತ್ತಮ ಸ್ಪಂದನೆ ದೊರೆತಿದೆ. ಜ.1 ರಿಂದ ಅನ್ವಯವಾಗುವಂತೆ ಮೆಟ್ರೊ ಅವಧಿಯನ್ನು ರಾತ್ರಿ 11 ರಿಂದ 12 ಗಂಟೆವರೆಗೆ ವಿಸ್ತರಿಸಿದ್ದು, ರಾತ್ರಿ ತಡವಾಗಿ ಮನೆಗೆ ಹೋಗುವವರಿಗೆ ಇದು ಸುರಕ್ಷಿತ ಹಾಗೂ ಸುಲಭ ಸಾರಿಗೆ ಸೌಲಭ್ಯ ನೀಡಿದೆ. ಮೆಜೆಸ್ಟಿಕ್‌ನಲ್ಲಿ ರಾತ್ರಿ 11.25 ರಿಂದ 12 ರವರೆಗೆ ಹಾಗೂ ಉಳಿದ ಟರ್ಮಿನಲ್‌ ನಿಲ್ದಾಣಗಳಲ್ಲಿ ರಾತ್ರಿ 11 ರಿಂದ 11.30, 11.35 ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಸರಾಸರಿ ಅರ್ಧ ಗಂಟೆಯ ವಿಸ್ತರಣೆ ಅವಧಿಯಲ್ಲಿ ಒಂದು ನಿಲ್ದಾಣದಿಂದ ಸರಾಸರಿ 1 ಸಾವಿರ ಮಂದಿ ಪ್ರಯಾಣ ಬೆಳೆಸುತ್ತಿದ್ದಾರೆ. ಭಾನುವಾರ ಮಾತ್ರ 800 ಮಂದಿ ಪ್ರಯಾಣ ಬೆಳೆಸುತ್ತಿದ್ದಾರೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದ್ದು, ಇದು ತೃಪ್ತಿದಾಯಕ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ಸಂಖ್ಯೆ ಕ್ರಮೇಣವಾಗಿ ಹೆಚ್ಚಲಿದೆ ಎಂಬ ನಿರೀಕ್ಷೆ ಇದೆ.
Vijaya Karnataka Web timeing extended in bangalore metro train
ಮೆಟ್ರೊ ಸಮಯ ವಿಸ್ತರಣೆ ರಾತ್ರಿ ಪ್ರಯಾಣಿಕರಿಗೆ ವರ; ಸರಾಸರಿ 1000 ಪ್ರಯಾಣಿಕರಿಂದ ಬಳಕೆ


​10 ರಿಂದ 15 ನಿಮಿಷಕ್ಕೊಂದು ರೈಲು

ವಿಸ್ತರಿಸಿದ ಅವಧಿಯಲ್ಲಿ10 ರಿಂದ 15 ನಿಮಿಷಕ್ಕೊಂದು ರೈಲು ಕಾರ್ಯಾಚರಿಸಲಾಗುತ್ತಿದೆ. ಭಾನುವಾರ ಸಾಮಾನ್ಯ ವೇಳೆಯಲ್ಲೂ10 ರಿಂದ 15 ನಿಮಿಷಕ್ಕೆ ಒಂದು ರೈಲು ಕಾರ್ಯಾಚರಿಸಲಾಗುತ್ತದೆ. ಕೆಲ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಸಮಯದ ಅಂತರ ಕಡಿಮೆ ಮಾಡಲಾಗುತ್ತದೆ.

​ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಅನುಕೂಲ

ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ವಿಸ್ತರಿಸಿದ ಸೇವೆಯಿಂದ ಹೆಚ್ಚು ಲಾಭವಾಗಿದೆ. ಈ ಹಿಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು 11 ಗಂಟೆ ಕಳೆದರೆ ಆಟೊರಿಕ್ಷಾ, ಕ್ಯಾಬ್‌ ಅಥವಾ ಸ್ವಂತ ವಾಹನಗಳ ಮೊರೆ ಹೋಗಬೇಕಾಗುತ್ತಿತ್ತು.''ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 8 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅನೇಕರು ಮೆಟ್ರೊ ಬಳಸಿಕೊಳ್ಳುತ್ತಿದ್ದಾರೆ. ಕೆಲ ಕಾರ್ಖಾನೆಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ವಿಸ್ತರಿಸಿದ ಸೇವೆಯು ಎರಡು, ಮೂರನೇ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸುಲಭ ಸಾರಿಗೆ ಒದಗಿಸಿದೆ'' ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ತಿಳಿಸಿದ್ದಾರೆ.

​ಮೆಟ್ರೊ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಸಂಪರ್ಕ ಬೇಕು

ಅವೇಕ್‌ ಸಂಘಟನೆ ಅಧ್ಯಕ್ಷೆ ಡಾ.ರಾಜೇಶ್ವರಿ, ''ಮಹಿಳಾ ಕಾರ್ಮಿಕರು ರಾತ್ರಿ ಪಾಳಿಯಲ್ಲಿಕೆಲಸ ಮಾಡಿದ ಬಳಿಕ ಸುರಕ್ಷಿತವಾಗಿ ಮನೆ ಸೇರಲು ಮೆಟ್ರೊ ನೆರವಾಗಿದೆ. ಆದರೆ, ಮೆಟ್ರೊ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ಗಳ ಮೂಲಕ ಸರಿಯಾದ ಸಂಪರ್ಕ ದೊರೆಯಬೇಕು. ಆಗ ಪ್ರಯಾಣ ಇನ್ನಷ್ಟು ಸುಲಭವಾಗುತ್ತದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

​ಉದ್ಯೋಗಿಗಳಿಗೆ ಸುಲಭ

ವೈಟ್‌ಫೀಲ್ಡ್‌ನ ಐಟಿ ಕಂಪನಿಗಳ ಉದ್ಯೋಗಿಗಳು ಕೂಡ ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲ ವೇಳೆ ಅತಿಯಾದ ಕೆಲಸದಿಂದ ಮನೆಗೆ ಹೊರಡುವುದು ತಡವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಬಹುದಾಗಿದೆ. ಜೆ.ಪಿ.ನಗರ, ಜಯನಗರ, ಬನಶಂಕರಿ ಮೊದಲಾದ ಭಾಗಗಳಲ್ಲಿ ನೆಲೆಸಿರುವ ಉದ್ಯೋಗಿಗಳು ಹಸಿರು ಮಾರ್ಗ ಬಳಸಿಕೊಳ್ಳುತ್ತಿದ್ದಾರೆ.

​ಸರಾಸರಿ 1000ಕ್ಕೂ ಅಧಿಕ ಪ್ರಯಾಣಿಕರಿಂದ ಬಳಕೆ

ವಿಸ್ತರಿಸಿದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಸೋಮವಾರದಿಂದ ಶನಿವಾರ ಪ್ರತಿ ದಿನ: 1,000 ಇತ್ತು. ಭಾನುವಾರ 800 ಪ್ರಯಾಣಿಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ