ಬಲಪಂಥೀಯರಿಂದ ದ್ವೇಷಪೂರಿತ ಬರಹ: ಜೈರಾಮ್ ರಮೇಶ್
ವಿಡಿ ಸಾವರ್ಕರ್ ಅರು ಮುಸ್ಲಿಮರಿಂದ ಮಾತ್ರ ಭಾರತಕ್ಕೆ ತೊಂದರೆ ಎಂದು ಪ್ರತಿಪಾದಿಸುತ್ತಿದ್ದರು. ಇದೇ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲು ಪ್ರೇರಣೆ ಎಂದು ಜೈರಾಮ್ ರಮೇಶ್ ಹೇಳಿದರು.
Vijaya Karnataka Web 9 Feb 2020, 8:08 am
ಬೆಂಗಳೂರು: ''ಬಲಪಂಥೀಯ ಲೇಖಕರು ಪಂಡಿತ್ ಜವಹರಲಾಲ್ ನೆಹರೂ ಅವರ ಬಗ್ಗೆ ಸುಳ್ಳು, ಕಪೋಲಕಲ್ಪಿತ ಹಾಗೂ ದ್ವೇಷಪೂರಿತ ಬರಹಗಳನ್ನು ಬರೆಯುತ್ತಿದ್ದಾರೆ,'' ಎಂದು ಜೈರಾಮ್ ರಮೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ'ಟೈಮ್ಸ್ ಗ್ರೂಪ್' ಶನಿವಾರ ಹಮ್ಮಿಕೊಂಡಿದ್ದ 'ಟೈಮ್ಸ್ ಲಿಟ್ ಫೆಸ್ಟ್'ನಲ್ಲಿ' ರಿಲೆವೆನ್ಸ್ ಆಫ್ ಪೊಲಿಟಿಕಲ್ ಬಯೋಗ್ರಫಿ' ಗೋಷ್ಠಿಯಲ್ಲಿ ಮಾತನಾಡಿದ ಅವರು, ''ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡುವಾಗ 'ಭಾರತದ ಪ್ರಜಾಪ್ರಭುತ್ವಕ್ಕೆ ಭಕ್ತಿಯೋಗ ಎಂಬುದು ಅತ್ಯಂತ ಅಪಾಯಕಾರಿ' ಎಂದು ಹೇಳಿದ್ದರು. ಹಾಗಾಗಿ, ಚರಿತ್ರೆಯನ್ನು ಬರೆಯುವವರು ಜ್ಞಾನಯೋಗಿಗಳಾಗಬೇಕೇ ಹೊರತು ಭಕ್ತಿಯೋಗಿಗಗಳಲ್ಲ'' ಎಂದರು.
''ಭಕ್ತಿಯೋಗಿಗಳಾದರೆ ಉತ್ತಮ ಮತ್ತು ಸತ್ಯ ಸಂಗತಿಗಳನ್ನು ಬರೆಯಲಾಗುವುದಿಲ್ಲ. ಕೇವಲ ವ್ಯಕ್ತಿ ಪೂಜೆ, ಇಲ್ಲವೇ ವ್ಯಕ್ತಿಯ ಬಗೆಗಿನ ದ್ವೇಷವನ್ನಷ್ಟೇ ಮಂಡಿಸಬಹುದು. ಹಾಗಾಗಿ, ಇಂದು ಸ್ವಪನ್ದಾಸ್ ಗುಪ್ತ ಸೇರಿದಂತೆ ಹಲವು ಬಲಪಂಥೀಯ ಲೇಖಕರಿಗೆ ನೆಹರೂ ಅವರನ್ನು ದ್ವೇಷಿಸುವುದೇ ಕೆಲಸವಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವರ್ಕರ್ ಹೇಡಿಯಲ್ಲ, ಕ್ಷಮಾಪಣೆ ತಪ್ಪಲ್ಲ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಸಿಎಎಗೆ ಪ್ರೇರಣೆ ಸಾವರ್ಕರ್: ''ಜೈಲಿನಲ್ಲಿದ್ದಾಗ ಸಾವರ್ಕರ್ ಹಿಂದೂ-ಮುಸ್ಲಿಮರ ರಾಯಭಾರಿಯಾಗಿದ್ದರು. ಆದರೆ, ಜೈಲಿನಿಂದ ಹೊರಬರುತ್ತಿದ್ದಂತೆ ದ್ವಿ-ರಾಷ್ಟ್ರ ಕಲ್ಪನೆಯನ್ನು ಪ್ರತಿಪಾದಿಸಿದರು. ಹಿಂದೂಗಳಿಗೆ ಹಿಂದೂಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಮುಸ್ಲಿಮರಿಂದ ಮಾತ್ರ ಭಾರತಕ್ಕೆ ತೊಂದರೆ ಎಂದು ಪ್ರತಿಪಾದಿಸುತ್ತಿದ್ದರು. ಹಾಗಾಗಿ, ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲು ಸಾವರ್ಕರ್ ಅವರೇ ಪ್ರೇರಣೆಯಾಗಿದ್ದಾರೆ,'' ಎಂದು ಜೈರಾಮ್ ರಮೇಶ್ ತಿಳಿಸಿದರು.
ಭಾರತ-ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದೇ ಸಾವರ್ಕರ್: ಶಶಿ ತರೂರ್
ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ'ಟೈಮ್ಸ್ ಗ್ರೂಪ್' ಶನಿವಾರ ಹಮ್ಮಿಕೊಂಡಿದ್ದ 'ಟೈಮ್ಸ್ ಲಿಟ್ ಫೆಸ್ಟ್'ನಲ್ಲಿ' ರಿಲೆವೆನ್ಸ್ ಆಫ್ ಪೊಲಿಟಿಕಲ್ ಬಯೋಗ್ರಫಿ' ಗೋಷ್ಠಿಯಲ್ಲಿ ಮಾತನಾಡಿದ ಅವರು, ''ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡುವಾಗ 'ಭಾರತದ ಪ್ರಜಾಪ್ರಭುತ್ವಕ್ಕೆ ಭಕ್ತಿಯೋಗ ಎಂಬುದು ಅತ್ಯಂತ ಅಪಾಯಕಾರಿ' ಎಂದು ಹೇಳಿದ್ದರು. ಹಾಗಾಗಿ, ಚರಿತ್ರೆಯನ್ನು ಬರೆಯುವವರು ಜ್ಞಾನಯೋಗಿಗಳಾಗಬೇಕೇ ಹೊರತು ಭಕ್ತಿಯೋಗಿಗಗಳಲ್ಲ'' ಎಂದರು.
''ಭಕ್ತಿಯೋಗಿಗಳಾದರೆ ಉತ್ತಮ ಮತ್ತು ಸತ್ಯ ಸಂಗತಿಗಳನ್ನು ಬರೆಯಲಾಗುವುದಿಲ್ಲ. ಕೇವಲ ವ್ಯಕ್ತಿ ಪೂಜೆ, ಇಲ್ಲವೇ ವ್ಯಕ್ತಿಯ ಬಗೆಗಿನ ದ್ವೇಷವನ್ನಷ್ಟೇ ಮಂಡಿಸಬಹುದು. ಹಾಗಾಗಿ, ಇಂದು ಸ್ವಪನ್ದಾಸ್ ಗುಪ್ತ ಸೇರಿದಂತೆ ಹಲವು ಬಲಪಂಥೀಯ ಲೇಖಕರಿಗೆ ನೆಹರೂ ಅವರನ್ನು ದ್ವೇಷಿಸುವುದೇ ಕೆಲಸವಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವರ್ಕರ್ ಹೇಡಿಯಲ್ಲ, ಕ್ಷಮಾಪಣೆ ತಪ್ಪಲ್ಲ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಸಿಎಎಗೆ ಪ್ರೇರಣೆ ಸಾವರ್ಕರ್: ''ಜೈಲಿನಲ್ಲಿದ್ದಾಗ ಸಾವರ್ಕರ್ ಹಿಂದೂ-ಮುಸ್ಲಿಮರ ರಾಯಭಾರಿಯಾಗಿದ್ದರು. ಆದರೆ, ಜೈಲಿನಿಂದ ಹೊರಬರುತ್ತಿದ್ದಂತೆ ದ್ವಿ-ರಾಷ್ಟ್ರ ಕಲ್ಪನೆಯನ್ನು ಪ್ರತಿಪಾದಿಸಿದರು. ಹಿಂದೂಗಳಿಗೆ ಹಿಂದೂಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಮುಸ್ಲಿಮರಿಂದ ಮಾತ್ರ ಭಾರತಕ್ಕೆ ತೊಂದರೆ ಎಂದು ಪ್ರತಿಪಾದಿಸುತ್ತಿದ್ದರು. ಹಾಗಾಗಿ, ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲು ಸಾವರ್ಕರ್ ಅವರೇ ಪ್ರೇರಣೆಯಾಗಿದ್ದಾರೆ,'' ಎಂದು ಜೈರಾಮ್ ರಮೇಶ್ ತಿಳಿಸಿದರು.
ಭಾರತ-ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದೇ ಸಾವರ್ಕರ್: ಶಶಿ ತರೂರ್