ಆ್ಯಪ್ನಗರ

ಇಂದು 12 ಗಂಟೆ ಕಾವೇರಿ ನೀರಿಲ್ಲ

'ನಮ್ಮ ಮೆಟ್ರೊ' ಕಾಮಗಾರಿಗಾಗಿ ಪೈಪ್‌ಗಳನ್ನು ಸ್ಥಳಾಂತರ ಮಾಡಬೇಕಿರುವುದರಿಂದ ಮಂಗಳವಾರ 12 ಗಂಟೆಗಳ ಕಾಲ ಹಲವೆಡೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

Vijaya Karnataka 5 Feb 2019, 5:00 am
ಬೆಂಗಳೂರು: 'ನಮ್ಮ ಮೆಟ್ರೊ' ಕಾಮಗಾರಿಗಾಗಿ ಪೈಪ್‌ಗಳನ್ನು ಸ್ಥಳಾಂತರ ಮಾಡಬೇಕಿರುವುದರಿಂದ ಮಂಗಳವಾರ 12 ಗಂಟೆಗಳ ಕಾಲ ಹಲವೆಡೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
Vijaya Karnataka Web wateer


ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ಜಲಮಂಡಳಿಯ ನೀರಿನ ಪೈಪ್‌ಗಳನ್ನು ಸ್ಥಳಾಂತರ ಮಾಡಬೇಕಿದೆ. ಇದಕ್ಕಾಗಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಕೋರಮಂಗಲದ 1, 2, 3, 4 ಹಾಗೂ 5 ನೇ ಹಂತ, 4 ನೇ 'ಸಿ' ಹಾಗೂ 5 ನೇ 'ಎ' ಹಾಗೂ 6 ನೇ ಬ್ಲಾಕ್‌, ಸಿದ್ದಾರ್ಥ ಕಾಲೋನಿ, ವೆಂಕಟಾಪುರ, ಟೀಚರ್ಸ್‌ ಕಾಲೋನಿ, ಕೆಎಸ್‌ಆರ್‌ಪಿ ವಸತಿ ಪ್ರದೇಶ, ಎಚ್‌ಎಸ್‌ಆರ್‌ ಲೇಔಟ್‌ನ 1, 2, 5 ಹಾಗೂ 6 ನೇ ಸೆಕ್ಟರ್‌, ಎಸ್‌ಟಿ ಬೆಡ್‌, ಜಕ್ಕಸಂದ್ರ, ಡಿಫೆನ್ಸ್‌ ಕಾಲೋನಿ, ಅವೆನ್ಯೂ ಕಾಲೋನಿ, ಎನ್‌ಎಎಲ್‌ ಲೇಔಟ್‌, ಜಯನಗರ 9 ನೇ ಬ್ಲಾಕ್‌, 4 ನೇ 'ಟಿ' ಬ್ಲಾಕ್‌, ಕೃಷ್ಣಪ್ಪ ಗಾರ್ಡನ್‌, ಬಿಎಚ್‌ಇಎಲ್‌ ಲೇಔಟ್‌, ಬಿಟಿಎಂ ಲೇಔಟ್‌, ಜರಗನಹಳ್ಳಿ, ಜೆ.ಪಿ.ನಗರ 4 ರಿಂದ 7 ನೇ ಹಂತದವರೆಗೆ, ಆರ್‌ಬಿಐ ಲೇಔಟ್‌, ನವೋದಯ ನಗರ, ಶ್ರೇಯಸ್‌ ಕಾಲೋನಿ, ಬಿಳೇಕಹಳ್ಳಿ, ಡಾಲರ್ಸ್‌ ಲೇಔಟ್‌, ಪುಟ್ಟೇನಹಳ್ಳಿ, ಅರಕೆರೆ, ಮೈಕೊ ಲೇಔಟ್‌, ರಾಮಯ್ಯ ಸಿಟಿ, ಸಾಯಿ ಎನ್‌ಕ್ಲೇವ್‌ ಲೇಔಟ್‌, ಮಂಜುನಾಥ ಲೇಔಟ್‌, ಕೋಡಿಚಿಕ್ಕನಹಳ್ಳಿ, ಮಂಗಮ್ಮನ ಪಾಳ್ಯ, ಗಾರ್ಡನ್‌ ಲೇಔಟ್‌, ರಾಜೀವ್‌ಗಾಂಧಿ ನಗರ, ಬಿಕೆಎಲ್‌ ಕಾಲೋನಿ, ಹೊಸಪಾಳ್ಯ, ಬಂಡೆಪಾಳ್ಯ, ಎಲೆಕ್ಟ್ರಾನಿಕ್‌ ಸಿಟಿ 1 ಹಾಗೂ 2 ನೇ ಹಂತದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ