ಬೆಂಗಳೂರು: ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್), ಜಯದೇವ ಫ್ಲೈ-ಓವರ್ ಉರುಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಿರುವುದರಿಂದ ಸೋಮವಾರ ಆ ಪ್ರದೇಶದಲ್ಲಿ ಸಂಚಾರ ಮಾರ್ಗ ಬದಲಾವಣೆಯಾಗಲಿದೆ.
ಜಯದೇವ ಆಸ್ಪತ್ರೆ ಬಳಿಯ ಮೆಟ್ರೋ ಮಾರ್ಗ ನಿರ್ಮಿಸಲು ಕೇವಲ ಹತ್ತು ವರ್ಷದ ಹಿಂದಿನ ಮೇಲ್ಸೇತುವೆಯನ್ನು ಕೆಡವಲು ನಿರ್ಧರಿಸಲಾಗಿದ್ದು ಬಿಎಂಟಿಸಿ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಸಂಚರಿಸುವ ಮತ್ತು ಬನ್ನೇರುಘಟ್ಟ ರಸ್ತೆಯ ಕಡೆಗೆ ಸಾಗುವ ಪ್ರಯಾಣಿಕರಿಗೆ ಜಯದೇವ ಫ್ಲೈಓವರ್ನಲ್ಲಿ ಎಡ ತಿರುವನ್ನು ನಿರ್ಬಂಧಿಸಲಾಗುವುದು. ಮಾರೆನಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಹಾಗೂ ಗೊಟ್ಟಿಗೇರಿಯಿಂದ ನಾಗವಾರದವರೆಗೆ ಮೆಟ್ರೋ ವಿಸ್ತರಣೆಗೆ ಸ್ತಂಭಗಳನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತಿದೆ.
ಸಿಲ್ಕ್ ಬೋರ್ಡ್ನಿಂದ ಬರುವವರು 16 ನೇ ಮೇನ್ನಲ್ಲಿ ಎಡ ತಿರುವು ತೆಗೆದುಕೊಂಡು 7 ನೇ ಕ್ರಾಸ್ ನಲ್ಲಿ ಬಲ ತಿರುವು ಪಡೆದುಕೊಳ್ಳಬೇಕು.
ಬಿಬಿಎಂಪಿ, ಟ್ರಾಫಿಕ್ ಪೊಲೀಸ್ , ನಾಗರಿಕರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ಸಂಪರ್ಕಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ವಿ. ರಸ್ತೆಯಿಂದ ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರದ ಮೇಲೆ ಈಗಾಗಲೇ ಪರಿಣಾಮ ಬೀರಿದ್ದು, ಮತ್ತೀಗ ಬಿ.ಎಂ.ಆರ್.ಸಿ.ಎಲ್ ಸ್ತಂಭಗಳನ್ನು ನಿರ್ಮಿಸುತ್ತಿರುವುದರಿಂದ ಸಂಚಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕೆಲಸ 2020 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಿಎಂಆರ್ಸಿಎಲ್ನ ಈ ನಿರ್ಧಾರದಿಂದ ನಗರದ ಅತಿಹೆಚ್ಚು ವಾಹನದಟ್ಟಣೆ ಪ್ರದೇಶಗಳಲ್ಲೊಂದಾದ ಜಯದೇವ ಆಸ್ಪತ್ರೆ ಮಾರ್ಗದಲ್ಲಿ ಸಂಚಾರ ಪ್ರಯಾಣಿಕರ ಪಾಲಿಗೆ ಅಕ್ಷರಶಃ ನರಕಸದೃಶವಾಗಲಿದೆ.
2005ರಲ್ಲಿ 21 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಫ್ಲೈಓವರ್, ಗಂಟೆಗೆ ಸುಮಾರು 8ರಿಂದ 10 ಸಾವಿರ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಹೊಸೂರು-ಬನಶಂಕರಿ ನಡುವೆ ಬಿಟಿಎಂ, ಜೆ.ಪಿ. ನಗರ, ಜಯನಗರ ಮತ್ತಿತರ ಮಾರ್ಗಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ.
ಫ್ಲೈಓವರ್ ಆಯಸ್ಸು ಕನಿಷ್ಠ 100ರಿಂದ 120 ವರ್ಷ. ಆದರೆ, ಜಯದೇವ ಫ್ಲೈಓವರ್ ಕೇವಲ 100 ವರ್ಷಗಳಲ್ಲಿ ದಕ್ಷಿಣ ಬೆಂಗಳೂರಿನ ಈ ಸಂಪರ್ಕ ಸೇತುವೆ ನೆಲಕಚ್ಚಲಿದೆ.
ಜಯದೇವ ಆಸ್ಪತ್ರೆ ಬಳಿಯ ಮೆಟ್ರೋ ಮಾರ್ಗ ನಿರ್ಮಿಸಲು ಕೇವಲ ಹತ್ತು ವರ್ಷದ ಹಿಂದಿನ ಮೇಲ್ಸೇತುವೆಯನ್ನು ಕೆಡವಲು ನಿರ್ಧರಿಸಲಾಗಿದ್ದು ಬಿಎಂಟಿಸಿ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಸಂಚರಿಸುವ ಮತ್ತು ಬನ್ನೇರುಘಟ್ಟ ರಸ್ತೆಯ ಕಡೆಗೆ ಸಾಗುವ ಪ್ರಯಾಣಿಕರಿಗೆ ಜಯದೇವ ಫ್ಲೈಓವರ್ನಲ್ಲಿ ಎಡ ತಿರುವನ್ನು ನಿರ್ಬಂಧಿಸಲಾಗುವುದು. ಮಾರೆನಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಹಾಗೂ ಗೊಟ್ಟಿಗೇರಿಯಿಂದ ನಾಗವಾರದವರೆಗೆ ಮೆಟ್ರೋ ವಿಸ್ತರಣೆಗೆ ಸ್ತಂಭಗಳನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತಿದೆ.
ಸಿಲ್ಕ್ ಬೋರ್ಡ್ನಿಂದ ಬರುವವರು 16 ನೇ ಮೇನ್ನಲ್ಲಿ ಎಡ ತಿರುವು ತೆಗೆದುಕೊಂಡು 7 ನೇ ಕ್ರಾಸ್ ನಲ್ಲಿ ಬಲ ತಿರುವು ಪಡೆದುಕೊಳ್ಳಬೇಕು.
ಬಿಬಿಎಂಪಿ, ಟ್ರಾಫಿಕ್ ಪೊಲೀಸ್ , ನಾಗರಿಕರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ಸಂಪರ್ಕಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ವಿ. ರಸ್ತೆಯಿಂದ ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರದ ಮೇಲೆ ಈಗಾಗಲೇ ಪರಿಣಾಮ ಬೀರಿದ್ದು, ಮತ್ತೀಗ ಬಿ.ಎಂ.ಆರ್.ಸಿ.ಎಲ್ ಸ್ತಂಭಗಳನ್ನು ನಿರ್ಮಿಸುತ್ತಿರುವುದರಿಂದ ಸಂಚಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕೆಲಸ 2020 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಿಎಂಆರ್ಸಿಎಲ್ನ ಈ ನಿರ್ಧಾರದಿಂದ ನಗರದ ಅತಿಹೆಚ್ಚು ವಾಹನದಟ್ಟಣೆ ಪ್ರದೇಶಗಳಲ್ಲೊಂದಾದ ಜಯದೇವ ಆಸ್ಪತ್ರೆ ಮಾರ್ಗದಲ್ಲಿ ಸಂಚಾರ ಪ್ರಯಾಣಿಕರ ಪಾಲಿಗೆ ಅಕ್ಷರಶಃ ನರಕಸದೃಶವಾಗಲಿದೆ.
2005ರಲ್ಲಿ 21 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಫ್ಲೈಓವರ್, ಗಂಟೆಗೆ ಸುಮಾರು 8ರಿಂದ 10 ಸಾವಿರ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಹೊಸೂರು-ಬನಶಂಕರಿ ನಡುವೆ ಬಿಟಿಎಂ, ಜೆ.ಪಿ. ನಗರ, ಜಯನಗರ ಮತ್ತಿತರ ಮಾರ್ಗಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ.
ಫ್ಲೈಓವರ್ ಆಯಸ್ಸು ಕನಿಷ್ಠ 100ರಿಂದ 120 ವರ್ಷ. ಆದರೆ, ಜಯದೇವ ಫ್ಲೈಓವರ್ ಕೇವಲ 100 ವರ್ಷಗಳಲ್ಲಿ ದಕ್ಷಿಣ ಬೆಂಗಳೂರಿನ ಈ ಸಂಪರ್ಕ ಸೇತುವೆ ನೆಲಕಚ್ಚಲಿದೆ.