ಆ್ಯಪ್ನಗರ

ನಗರದಿಂದ ಆಂಧ್ರದತ್ತ ಹೊರಟ ಸಾವಿರಾರು ಮತದಾರರು; ಕೆ.ಆರ್‌.ಪುರಂನಲ್ಲಿ ಟ್ರಾಫಿಕ್‌ಜಾಮ್‌

ಆಂಧ್ರಪ್ರದೇಶದ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಹಾಗೂ ತೆಲಂಗಾಣದ ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ನಡೆಯಲಿರುವ ಮತದಾನದಲ್ಲಿ ಭಾಗವಹಿಸಲು ಸಾವಿರಾರು ಜನರು ಬೆಂಗಳೂರಿನಿಂದ ತೆರಳಿದರು. ಇದರಿಂದ ಆಂಧ್ರಕ್ಕೆ ಹೊರಟ ಎಲ್ಲ ಬಸ್‌ಗಳು ಹೌಸ್‌ಫುಲ್‌ ಆಗಿದ್ದವು. ಇದರ ಪರಿಣಾಮ ಕೆ.ಆರ್‌.ಪುರಂನಲ್ಲಿ ಬುಧವಾರ ರಾತ್ರಿ ಟ್ರಾಫಿಕ್‌ ಜಾಮ್‌ ಉಂಟಾಯಿತು.

Vijaya Karnataka 11 Apr 2019, 5:00 am
ಬೆಂಗಳೂರು: ಆಂಧ್ರಪ್ರದೇಶದ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಹಾಗೂ ತೆಲಂಗಾಣದ ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ನಡೆಯಲಿರುವ ಮತದಾನದಲ್ಲಿ ಭಾಗವಹಿಸಲು ಸಾವಿರಾರು ಜನರು ಬೆಂಗಳೂರಿನಿಂದ ತೆರಳಿದರು. ಇದರಿಂದ ಆಂಧ್ರಕ್ಕೆ ಹೊರಟ ಎಲ್ಲ ಬಸ್‌ಗಳು ಹೌಸ್‌ಫುಲ್‌ ಆಗಿದ್ದವು. ಇದರ ಪರಿಣಾಮ ಕೆ.ಆರ್‌.ಪುರಂನಲ್ಲಿ ಬುಧವಾರ ರಾತ್ರಿ ಟ್ರಾಫಿಕ್‌ ಜಾಮ್‌ ಉಂಟಾಯಿತು.
Vijaya Karnataka Web c67cc5f9-5093-4805-84d9-fee577cebde9


ನಗರದಲ್ಲಿ ನೆಲೆಸಿರುವ ಎರಡೂ ರಾಜ್ಯಗಳ ಸಾವಿರಾರು ಜನರು ಬುಧವಾರ ರಾತ್ರಿಯೇ ತಮ್ಮ ರಾಜ್ಯಗಳಿಗೆ ತೆರಳಿದರು. ಸಂಜೆ 6 ರಿಂದ ರಾತ್ರಿ 12 ಗಂಟೆವರೆಗೂ ಸಾವಿರಾರು ಜನರು ಬಸ್‌ ಹತ್ತುವುದಕ್ಕಾಗಿ ಕೆ.ಆರ್‌.ಪುರದ ಐಟಿಐ ಗೇಟ್‌ ಬಳಿ ನೆರೆದಿದ್ದರು. ಅನೇಕರು ಬಸ್‌ ಬುಕಿಂಗ್‌ ಮಾಡದಿದ್ದರಿಂದ ಬಸ್‌ ಕೊರತೆಯಾಗಿ ಪರದಾಡಿದರು. ಜನಸಂದಣಿಯಿಂದ ಎಷ್ಟು ಬಸ್‌ಗಳು ಬಂದರೂ ಸಾಕಾಗಲಿಲ್ಲ. ಅನೇಕರು ಬಸ್‌ಗಳಲ್ಲಿ ಕೂರಲು ಸೀಟು ಸಿಗದೆ ನಿಂತುಕೊಂಡೇ ಪ್ರಯಾಣ ಮಾಡಿದರು. ರಸ್ತೆಯಲ್ಲಿ ಜನರೇ ತುಂಬಿಕೊಂಡಿದ್ದರಿಂದ ಬೇರೆ ವಾಹನಗಳಿಗೂ ಮುಂದೆ ಹೋಗಲು ಜಾಗ ದೊರೆಯದೆ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ