ಆ್ಯಪ್ನಗರ

ಬೆಂಗಳೂರು: ಅವಾಚ್ಯ ಪದಗಳಿಂದ ನಿಂದಿಸಿದ ಟ್ರಾಫಿಕ್‌ ಪಿಎಸ್‌ಐ, ತನಿಖೆಯಿಂದ ಬಯಲು

ಬೆಂಗಳೂರು ವಿಜಯನಗರದಲ್ಲಿ ನಡೆದ ಹಲ್ಲೆ ಪ್ರಕರಣದ ತನಿಖೆ ನಡೆಸಿ ವಿಡಿಯೋ ಪರಿಶೀಲಿಸಿದಾಗ ಎಸ್‌ಐ ಚಂದ್ರಶೇಖರ್‌ ಹಲ್ಲೆನಡೆಸಿರುವುದು ಕಂಡುಬಂದಿಲ್ಲ. ಆದರೆ, ಸವಾರನಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ತಿಳಿದುಬಂದಿದೆ.

Vijaya Karnataka 10 Feb 2022, 11:47 pm
ಬೆಂಗಳೂರು: ವಿಜಯನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಸಂಚಾರ ವಿಭಾಗದ ಸಬ್‌ ಇನ್ಸ್‌ಪೆಕ್ಟರ್‌ ಎಚ್‌. ಚಂದ್ರಶೇಖರ್‌, ವಾಹನ ಸವಾರರೊಬ್ಬರಿಗೆ ಹಲ್ಲೆ ನಡೆಸಿದ್ದಾರೆಂದು ವೀಡಿಯೋವೊಂದನ್ನು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಎಸ್‌ಐ ಬೈಕ್‌ ಸವಾರನಿಗೆ ಹಲ್ಲೆ ನಡೆಸಿಲ್ಲ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ತಿಳಿಸಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಎಸ್‌ಐ ಎಚ್‌. ಚಂದ್ರಶೇಖರ್‌ ಹಾಗೂ ಎಎಸ್‌ಐ ಫೆ.8ರಂದು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾಹನವೊಂದು ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಾ ಬರುತ್ತಿರುವುದನ್ನು ನೋಡಿ ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ಸವಾರ ಕೂಡ ಹೆಲ್ಮೆಟ್‌ ಧರಿಸಿರಲಿಲ್ಲ. ಅಲ್ಲದೆ, ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ 2500ರೂ. ಹಳೇ ಬಾಕಿ ಇತ್ತು. ಇದನ್ನು ಪಾವತಿಸುವಂತೆ ಚಂದ್ರಶೇಖರ್‌ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನ ಬಳಕೆ ಹೆಚ್ಚಳ, 163 ಚಾರ್ಜಿಂಗ್‌ ಕೇಂದ್ರ ಆರಂಭ

ಈ ವೇಳೆ ಬೈಕ್‌ ಸವಾರ ದಂಡ ಕಟ್ಟಲು ತಿರಸ್ಕರಿಸಿ ಪಿಎಸ್‌ಐ ಅವರನ್ನು ಪ್ರಚೋದಿಸುವಂತೆ ಮಾತನಾಡಿದ್ದಾನೆ. ಅಲ್ಲದೆ, ವಿಡಿಯೋ ಮಾಡಲು ಮುಂದಾದಾಗ ಅದನ್ನು ತಡೆಯಲು ಪಿಎಸ್‌ಐ ಹೋದ ವೇಳೆ ಸವಾರ ತಪ್ಪಿಸಿಕೊಳ್ಳುವ ಭರದಲ್ಲಿಹೆಲ್ಮೆಟ್‌ನಿಂದ ಮುಖ ತರಚಿಕೊಂಡಿದ್ದಾನೆ. ಇದನ್ನೇ ಪೊಲೀಸರು ಹಲ್ಲೆಮಾಡಿದ್ದಾರೆ ಎಂದು ಬಿಂಬಿಸಿದ್ದಾನೆ.

ನಂತರ ಆತನ ಬಳಿ ಹಣವಿಲ್ಲವೆಂದು ಪರಿಚಿತರೊಬ್ಬರು ದಂಡ ಪಾವತಿಸಲು ಮುಂದಾದಾಗ ಮಾನವೀಯತೆ ದೃಷ್ಟಿಯಿದ 2500ರ ಬದಲು, 1500 ರೂ. ದಂಡ ಪಾವತಿಸಿಕೊಂಡು ರಶೀದಿ ನೀಡಲಾಗಿತ್ತು.

ವಿಜಯನಗರದಲ್ಲಿ ನಡೆದ ಹಲ್ಲೆ ಪ್ರಕರಣದ ತನಿಖೆ ನಡೆಸಿ ವಿಡಿಯೋ ಪರಿಶೀಲಿಸಿದಾಗ ಎಸ್‌ಐ ಚಂದ್ರಶೇಖರ್‌ ಹಲ್ಲೆ ನಡೆಸಿರುವುದು ಕಂಡುಬಂದಿಲ್ಲ. ಆದರೆ, ಸವಾರನಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ತಿಳಿದುಬಂದಿದೆ. ಸಾರ್ವಜನಿಕರ ಜತೆ ಪೊಲೀಸರು ಅಶಿಸ್ತಿನಿಂದ ವರ್ತಿಸುವುದು, ಅವಾಚ್ಯ ಶಬ್ದಗಳನ್ನು ಬಳಸಲು ಇಲಾಖೆಯಲ್ಲಿಅವಕಾಶವಿಲ್ಲ. ಹೀಗಾಗಿ, ಪಿಎಸ್‌ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹ್ಯಾಂಡ್‌ಲಾಕ್‌ ಮುರಿದು ಬೈಕ್‌ ಕದಿಯುತ್ತಿದ್ದ ಕಳ್ಳರ ಬಂಧನ: 35.43 ಲಕ್ಷ ರೂ. ಮೌಲ್ಯದ 36 ಬೈಕ್‌‍ಗಳ ವಶ

ಈ ರೀತಿ ಸತ್ಯಕ್ಕೆ ದೂರವಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇಲಾಖೆಯ ಘನತೆಗೆ ಧಕ್ಕೆ ತರಬಾರದು ಹಾಗೂ ಇತರೆ ಸಾರ್ವಜನಿಕರೊಂದಿಗೆ ಹಂಚಿಕೊಂಡು ಪ್ರಚೋದಿಸುವುದು ನ್ಯಾಯಸಮ್ಮತವಲ್ಲ ಎಂದು ಸಂಚಾರ ಪೊಲೀಸ್‌ ಇಲಾಖೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ