ಆ್ಯಪ್ನಗರ

ಕುಡುಕ ಬಸ್‌ ಚಾಲಕನಿಗೆ ಥಳಿಸಿದ ಮಾಲೀಕ ಜೈಲಿಗೆ

ಕುಡಿದು ಬಸ್‌ ಓಡಿಸಿದ ಚಾಲಕನನ್ನು ಥಳಿಸಿ ಅದನ್ನು ವೀಡಿಯೋ ಮಾಡಿರುವ ಕಂಪನಿ ಮಾಲೀಕ ಈಗ ಕಂಬಿ ಎಣಿಸುತ್ತಿದ್ದಾನೆ.

Bangalore Mirror Bureau 16 Mar 2017, 1:54 pm
ಬೆಂಗಳೂರು: ಕುಡಿದು ಬಸ್‌ ಓಡಿಸಿದ ಚಾಲಕನನ್ನು ಥಳಿಸಿ ಅದನ್ನು ವೀಡಿಯೋ ಮಾಡಿರುವ ಕಂಪನಿ ಮಾಲೀಕ ಈಗ ಕಂಬಿ ಎಣಿಸುತ್ತಿದ್ದಾನೆ.
Vijaya Karnataka Web travel agency owners rod rage sends a shutter down his spine
ಕುಡುಕ ಬಸ್‌ ಚಾಲಕನಿಗೆ ಥಳಿಸಿದ ಮಾಲೀಕ ಜೈಲಿಗೆ


ಈ ಬಗ್ಗೆ ದೂರು ನೀಡಿದ್ದ ಪ್ರಯಾಣಿಕರಿಗೆ ತೋರಿಸಲೆಂದೇ ಬಸ್‌ ಮಾಲೀಕ ಶಿಕ್ಷೆ ನೀಡಿದ ವೀಡಿಯೋ ಚಿತ್ರೀಕರಿಸಿದ್ದ ಎನ್ನಲಾಗಿದೆ. ಮತ್ತೊಬ್ಬಚಾಲಕ ಈ ವೀಡಿಯೋ ಬಹಿರಂಗಗೊಳಿಸಿದ ನಂತರ ಮಾಲೀಕ ಜೈಲು ಸೇರಿದ್ದಾನೆ.

ಸಿದ್ದೇಶ್ವರ ಟ್ರಾವೆಲ್ಸ್‌ನ ಮಾಲೀಕ ನಂದೀಶ್‌ (40), ರಾಜು (45) ಎಂಬ ಚಾಲಕನಿಗೆ ಬೆತ್ತದಿಂದ ಹೊಡೆಯುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಕರ್ತವ್ಯದಲ್ಲಿರುವ ವೇಳೆ ಕುಡಿಯಬಾರದು, ಹೀಗೆ ಮಾಡಿದರೆ ಬೆತ್ತದ ಏಟು ಬೀಳುತ್ತದೆ ಎಂದು ಎಚ್ಚರಿಸಿರುವ ದೃಶ್ಯವೂ ಇದೆ.

ವಾಟ್ಸಪ್‌ ಗ್ರೂಪ್‌ನಲ್ಲಿ ವೀಡಿಯೋ ಬಹಿರಂಗಗೊಂಡಿದ್ದು, ಬೆತ್ತದೇಟು ತಿಂದ ಚಾಲಕನ ಸ್ನೇಹಿತರು ಅದನ್ನು ನೋಡಿ, ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

'ವೀಡಿಯೋ ನೋಡಿ ಆಘಾತವಾಯಿತು. ಚಾಲಕರ ವಿವರ ಪಡೆದು, ಅವರ ಮನೆಯವರನ್ನು ಸಂಪರ್ಕಿಸಿ ನೆರವು ನೀಡಿದೆವು. ಹೊಡೆತ ತಿಂದ ಚಾಲಕನನ್ನು ಭೇಟಿಯಾದೆವು, ಮೈ ಮೇಲೆ ಕಪ್ಪು, ನೀಲಿ ಗುರುತುಗಳಾಗಿದ್ದವು. ಈಗ ಸುಧಾರಿಸಿಕೊಂಡಿದ್ದಾರೆ. ತಪ್ಪು ಮಾಡಿದ್ದರೂ, ಈ ರೀತಿ ವರ್ತಿಸುವುದು ಸರಿಯಲ್ಲ,' ಎಂದು ಚಾಲಕರ ಸಂಘದ ಮುಖ್ಯಸ್ಥ ಲಿಂಗರಾಜು ಹೇಳಿದ್ದಾರೆ.

ಮಾರ್ಚ್‌ 7ರಂದು ಕಮ್ಮನಹಳ್ಳಿಯ ಸಿದ್ಧೇಶ್ವರ ಟ್ರಾವೆಲ್ಸ್‌ನ ನೌಕರ ರಾಜುಗೆ ಕುಟುಂಬವೊಂದನ್ನು ಊಟಿಗೆ ಕರೆದೊಯ್ಯುವ ಕೆಲಸ ವಹಿಸಲಾಗಿತ್ತು. ರಾತ್ರಿ ಊಟಿಯಲ್ಲೇ ತಂಗುವುದಾಗಿ ಹೇಳಿದ್ದ ಕುಟುಂಬ ನಿರ್ಧಾರ ಬದಲಿಸಿ ಅದೇ ರಾತ್ರಿ ಬೆಂಗಳೂರಿಗೆ ಹೊರಡಲು ನಿರ್ಧರಿಸಿದ್ದರು. ಆದರೆ, ಆ ವೇಳೆಗೆ ರಾಜು ಕುಡಿದು ನಿದ್ದೆ ಮಾಡಿದ್ದರು ಎನ್ನಲಾಗಿದೆ. ಆಗ ಪ್ರವಾಸಕ್ಕೆ ತೆರಳಿದ್ದ ಕುಟುಂಬದ ಸದಸ್ಯರೊಬ್ಬರು ಬೆಂಗಳೂರಿಗೆ ಬಸ್‌ ಓಡಿಸಿದ್ದರು. ಈ ಬಗ್ಗೆ ಅವರು ಸಂಸ್ಥೆಗೆ ದೂರಿದ್ದರು.

'ಚಾಲಕನಿಗೆ ಶಿಕ್ಷೆ ನೀಡಿರುವುದನ್ನು ಸಾಬೀತುಪಡಿಸಲು ವೀಡಿಯೋ ಮಾಡಲಾಗಿತ್ತು. ಆದರೆ, ಅದು ಬಹಿರಂಗಗೊಂಡಿದೆ,'ಎಂದು ನಂದೀಶ್‌ ಸೋದರ ನಂದೀತ್‌ ಹೇಳಿದ್ದಾರೆ.
'ಚಾಲಕ ಬರುವ ಸ್ಥಿತಿಯಲ್ಲಿ ಇರದ ಕಾರಣ ಸ್ವಯಂ ಪ್ರೇರಿತವಾಗಿ, ದೂರು ದಾಖಲಿಸಿಕೊಂಡಿದ್ದೇವೆ. ಭಾರತೀಯ ದಂಡ ಸಂಹಿತೆ ಸೆಕ್ಷನ್‌ 341, 342 ಹಾಗೂ 504 ಅಡಿ ಕಂಪನಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ,' ಎಂದು ಪೊಲೀಸರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ