ಆ್ಯಪ್ನಗರ

ಜೇಬುಕಳ್ಳರೆಂದು ಭಾವಿಸಿ ಯುವಕರನ್ನು ಥಳಿಸಿದ ಪ್ರಯಾಣಿಕರು

ಜೇಬು ಕಳ್ಳರೆಂದು ಭಾವಿಸಿ ಯುವಕರಿಬ್ಬರನ್ನು ರೈಲು ಪ್ರಯಾಣಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೆಂಗೇರಿ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ.

Vijaya Karnataka 15 May 2018, 5:00 am
ಬೆಂಗಳೂರು: ಜೇಬು ಕಳ್ಳರೆಂದು ಭಾವಿಸಿ ಯುವಕರಿಬ್ಬರನ್ನು ರೈಲು ಪ್ರಯಾಣಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೆಂಗೇರಿ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web travelers beaten youths thinking they were pockets
ಜೇಬುಕಳ್ಳರೆಂದು ಭಾವಿಸಿ ಯುವಕರನ್ನು ಥಳಿಸಿದ ಪ್ರಯಾಣಿಕರು


ಬ್ಯಾಗ್‌ಗಳಿಗೆ ಜಿಪ್‌ ಹಾಕುವ ಕೆಲಸ ಮಾಡುವ ಯುವಕರಿಬ್ಬರು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಬಿಡದಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಕೆಂಗೇರಿ ಬಳಿ ಪ್ರಯಾಣಿಕರೊಬ್ಬರು ಜೇಬಿನಿಂದ ಕೈವಸ್ತ್ರ ತೆಗೆದಿದ್ದು, ಈ ವೇಳೆ ಕೈವಸ್ತ್ರದ ಜತೆಗೆ ಜೇಬಿನಲ್ಲಿಟ್ಟುಕೊಂಡಿದ್ದ ಅವರ ಪರ್ಸ್‌ ಕೆಳಗೆ ಬಿದ್ದಿದೆ. ಪರ್ಸ್‌ ಬಿದ್ದ ಸ್ಥಳದಲ್ಲೇ ಆ ಇಬ್ಬರು ಯುವಕರು ನಿಂತುಕೊಂಡಿದ್ದರು. ಪರ್ಸ್‌ ಕೆಳಗೆ ಬಿದ್ದಾಗ ಯವಕರೇ, ಜೇಬು ಕಳ್ಳರು ಎಂದು ಭಾವಿಸಿದ ಪ್ರಯಾಣಿಕರು ಅವರನ್ನು ಹಿಡಿದು ಥಳಿಸಿ ಕೆಂಗೇರಿ ರೈಲು ನಿಲ್ದಾಣದಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

''ಯುವಕರು ಹಾಗೂ ಅವರ ಕುಟುಂಬ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. ಅವರು ಈ ಹಿಂದೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ಪ್ರಾಥಮಿಕ ಮಾಹಿತಿ ವೇಳೆ ಕಂಡು ಬಂದಿದೆ. ಪ್ರಯಾಣಿಕರು ತಪ್ಪು ತಿಳಿದು ಯುವಕರ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಅವರಿಂದ ಮಾಹಿತಿ ಪಡೆದುಕೊಂಡು ಕಳುಹಿಸಿಕೊಡಲಾಗಿದೆ,'' ಎಂದು ನಗರ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ