ಆ್ಯಪ್ನಗರ

ಅಭಿವೃದ್ದಿಗಾಗಿ ಬೇರುಗಳಿಗೆ ಕೊಡಲಿ, ಗಾರ್ಡನ್‌ ಸಿಟಿಯ ವೃಕ್ಷಗಳು ಬಲಿ!

ಅಭಿವೃದ್ದಿ ಹಿನ್ನೆಲೆ ಬೇರುಗಳಿಗೆ ಬೀಳುತ್ತಿವೆ ಕೊಡಲಿ ಏಟು, ಮಳೆಗಾಲದಲ್ಲಿ ಉರುಳುತ್ತಿವೆ ವೃಕ್ಷಗಳು. ಇದರಿಂದಾಗಿ ಜನರು ಮಾತ್ರ ಕಂಗಾಲು.

Vijaya Karnataka Web 4 Jun 2020, 10:46 am
ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ವಿಸ್ತರಣೆ, ಫುಟ್‌ಪಾತ್‌, ಚರಂಡಿ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳ ಬೇರುಗಳನ್ನು ಮನಬಂದಂತೆ ಕತ್ತರಿಸಲಾಗುತ್ತಿದೆ. ಪರಿಣಾಮ, ಮಳೆಗಾಲ ಶುರುವಾಯಿತೆಂದರೆ ನೂರಾರು ವೃಕ್ಷಗಳು ನೆಲಕ್ಕೊರಗುತ್ತಿವೆ.
Vijaya Karnataka Web lKeYJlQP


ಕಳೆದ ಐದಾರು ದಿನಗಳಲ್ಲಿ ಬಿರುಗಾಳಿ ಸಹಿತ ಮಳೆಗೆ 159 ಮರಗಳು ಬುಡಸಮೇತ ಧರೆಗುರುಳಿ ಬಿದ್ದಿವೆ. ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾರು, ಬೈಕ್‌, ಆಟೊ, ಬಸ್‌ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ. ಸಾರ್ವಜನಿಕ, ಖಾಸಗಿ ಆಸ್ತಿಗೆ ಹಾನಿಯಾಗಿದೆ. ಬಿಬಿಎಂಪಿಯು ಮರಗಳ ನಿರ್ವಹಣೆ ಕಡೆಗಣಿಸಿರುವುದರಿಂದ ಪ್ರತಿವರ್ಷವೂ ಅನಾಹುತಗಳು ಸಂಭವಿಸುತ್ತಲೇ ಇವೆ.

ನಗರದಲ್ಲಿನ ಹೆಚ್ಚಿನ ಮರಗಳು ಮೂಲತಃ ದೇಶಿ ತಳಿಗಳಲ್ಲ. ಹೆಚ್ಚಿನವು ವಿದೇಶಿ ತಳಿಗಳಾಗಿದ್ದು, ಇವುಗಳ ಬೇರು, ಕಾಂಡ ಗಟ್ಟಿ ಇರುವುದಿಲ್ಲ. ಇವೆಲ್ಲವೂ ಮೆದು ಮರಗಳಾಗಿದ್ದು, ದೇಶಿ ತಳಿಗಳಾದ ಅರಳಿ, ಹುಣಸೆ, ಹೊಂಗೆ, ಮಾವು, ನೇರಳೆಯಂತೆ ಬೇರುಗಳು ಆಳಕ್ಕೆ ಇಳಿಯುವುದಿಲ್ಲ. ದೇಶಿ ಪ್ರಭೇದದ ಮರಗಳು ಎಂಥ ಗಾಳಿ, ಮಳೆಗೂ ಜಗ್ಗದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುತ್ತವೆ. ಗುಲ್‌ಮೊಹರ್‌, ಜಕರಂದ, ಕಾಪರ್‌ಪೋಡ್‌, ರೈನ್‌ಟ್ರೀ, ಪೆಲ್ಟೊಫಾರ್ಮ, ಸ್ಪೆತೋಡಿಯಾ, ಆಫ್ರಿಕನ್‌ ಟುಲಿಪ್‌ನಂತಹ ವಿದೇಶಿ ಮೂಲದ ಮೆತ್ತನೆಯ ಮರಗಳೇ ಹೆಚ್ಚಾಗಿ ಗಾಳಿ ಮಳೆಯಿಂದ ಧರೆ ಉರುಳಿವೆ.

ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ; ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ


ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, ''ರಸ್ತೆ ವಿಸ್ತರಣೆ, ಚರಂಡಿ, ಫುಟ್‌ಪಾತ್‌ ನಿರ್ಮಾಣಕ್ಕಾಗಿ ಮರಗಳ ಬೇರುಗಳನ್ನು ಕತ್ತರಿಸಿ ಹಾಕಲಾಗುತ್ತಿದೆ. ಬುಡಕ್ಕೆ ಒಂದು ಹನಿ ನೀರು ಹೋಗದಂತೆ ಬುಡಗಳಿಗೆ ಕಾಂಕ್ರೀಟ್‌, ಡಾಂಬರು ಮೆತ್ತಲಾಗುತ್ತಿದೆ. ಒಂದು ಗಿಡದಲ್ಲಿಎಷ್ಟು ಎಲೆಗಳಿವೆಯೋ ಅಷ್ಟು ಬೇರುಗಳಿರಬೇಕು. ಆದರೆ, ಅಭಿವೃದ್ಧಿ ಹೆಸರಿನಲ್ಲಿಬೇರುಗಳನ್ನು ಕಡಿಯುತ್ತಿರುವುದರಿಂದ ಅವು ಕೊಳೆತು ಹೋಗುತ್ತಿವೆ. ಹೀಗಾಗಿ, ಮಳೆ ಬಂದಾಗ ಬೀಳುತ್ತಿವೆ,'' ಎಂದು ತಿಳಿಸಿದ್ದಾರೆ.

ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಎಸ್‌.ರಂಗನಾಥಸ್ವಾಮಿ ವಿಜಯಕರ್ನಾಟಕದೊಂದಿಗೆ ಮಾತನಾಡಿದ್ದು, ಮಳೆಗೆ ಬಿದ್ದ, ಒಣಗಿದ ಮತ್ತು ಅಪಾಯಕಾರಿ ಮರಗಳು, ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಸದ್ಯ 21 ತಂಡಗಳಿವೆ. ಮಳೆ, ಗಾಳಿಯಿಂದ ಹೆಚ್ಚಿನ ಮರಗಳು ಬೀಳುತ್ತಿರುವುದರಿಂದ ಹೆಚ್ಚುವರಿಯಾಗಿ 15 ತಂಡಗಳನ್ನು ನಿಯೋಜಿಸಲಾಗಿದೆ. ಒಂದೆರಡು ದಿನಗಳಲ್ಲಿಎಲ್ಲಮರಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ