ಆ್ಯಪ್ನಗರ

ಬೆಂಗಳೂರಲ್ಲಿ ಮೊದಲ ತ್ರಿವಳಿ ತಲಾಖ್‌ ಕೇಸ್‌ ದಾಖಲು : ವರದಕ್ಷಿಣೆ ವಿಚಾರವಾಗಿ ಪತ್ನಿಗೆ ತಲಾಖ್‌

ತ್ರಿವಳಿ ತಲಾಖ್ ಅನ್ನು ನಿಷೇಧಿಸಲಾಗಿದ್ದರೂ, ಅದಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ವರದಕ್ಷಿಣೆಗಾಗಿ ತಲಾಖ್‌ ನೀಡಿರುವ ಪ್ರಕರಣ ದಾಖಲಾಗಿದೆ. ಬೆಳಗಾವಿಯಲ್ಲಿ ರಾಜ್ಯದ ಮೊದಲ ತ್ರಿವಳಿ ತಲಾಖ್‌ ಪ್ರಕರಣ ದಾಖಲಾಗಿತ್ತು.

Vijaya Karnataka 19 Sep 2019, 9:39 am
ಬೆಂಗಳೂರು: ವರದಕ್ಷಿಣೆ ವಿಚಾರವಾಗಿ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ ಸಾಫ್ಟ್‌ವೇರ್‌ ಉದ್ಯೋಗಿ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿನಗರದ ಮೊದಲ 'ತ್ರಿವಳಿ ತಲಾಖ್‌' ಪ್ರಕರಣ ದಾಖಲಾಗಿದೆ. 'ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ-2019', ವರದಕ್ಷಿಣೆ ಕಿರುಕುಳ ಆರೋಪದಲ್ಲಿಸಮೀರುಲ್ಲಾ(38) ಎಂಬುವರ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದೆ.ಕೇಸ್‌ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್‌ ನೀಡಲಾಗಿದೆ ಎಂದು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ತಿಳಿಸಿದರು.
Vijaya Karnataka Web triple thalaq


ತ್ರಿವಳಿ ತಲಾಖ್: ಕೇರಳದಲ್ಲಿ ಮೊದಲ ಬಂಧನ
ಆರೋಪವೇನು?
ಸಂತ್ರಸ್ತೆ ಆಯೇಷಾ(33) ಮತ್ತು ಸಮೀರುಲ್ಲಾನಡುವೆ 9 ವರ್ಷಗಳ ಹಿಂದೆ ವಿವಾಹವಾಗಿದೆ. ದಂಪತಿ ಬಿಟಿಎಂ 1ನೇ ಹಂತದಲ್ಲಿಮಕ್ಕಳ ಜೊತೆ ವಾಸವಿದ್ದಾರೆ.
''ಮದುವೆ ವೇಳೆ 7.50 ಲಕ್ಷ ರೂ. ಮೌಲ್ಯದ ಐ10 ಕಾರು, 10 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವರದಕ್ಷಿಣೆ ರೂಪದಲ್ಲಿಪತಿಗೆ ನೀಡಲಾಗಿತ್ತು. ಆದರೆ, ಮದುವೆಯಾದ ನಂತರ ನನ್ನ ಗಂಡ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ನಾನು ಚೆನ್ನಾಗಿಲ್ಲ. ಕುರೂಪಿಯಾಗಿದ್ದೇನೆ. ನೀನು ನಾನು ಆಯ್ಕೆ ಮಾಡಿಕೊಂಡ ಹುಡುಗಿ ಅಲ್ಲಎಂದು ಹೇಳಿ ತಂದೆ ಮತ್ತು ಸಂಬಂಧಿಕರ ಎದುರಿನಲ್ಲೇ ಹಲ್ಲೆಮಾಡುತ್ತಿದ್ದರು'' ಎಂದು ಆಯೇಷಾ ಆರೋಪಿಸಿದ್ದಾರೆ.

ಮೋದಿಗೆ ರಾಖಿ ಕಟ್ಟಿದ ತ್ರಿವಳಿ ತಲಾಖ್‌ ಹೋರಾಟಗಾರ್ತಿ ಇಶ್ರತ್‌
''ಪತಿಯ ಹಲ್ಲೆ, ಹಿಂಸೆಯನ್ನು ತಡೆದುಕೊಂಡಿದ್ದೇನೆ. ನಂತರವೂ ತಂದೆಯಿಂದ ಹೆಚ್ಚು ವರದಕ್ಷಿಣೆ ತರಲು ಪೀಡಿಸುತ್ತಿದ್ದರು. ಹೀಗಾಗಿ, ನಮ್ಮ ತಂದೆ ಮತ್ತೆ 7 ಲಕ್ಷ ರೂ. ಕೊಟ್ಟಿದ್ದರು. ನಂತರ ಹಿರಿಯರು ಕುಳಿತು ನನ್ನ ಪತಿಗೆ ಬುದ್ದಿ ಹೇಳಿದ್ದರು. ಅದಾದ ಬಳಿಕ ನನ್ನನ್ನು ಬೇರೆ ಮನೆ ಮಾಡಿ ಕಳುಹಿಸಿದ ಪತಿ, ಜೀವನ ನಡೆಸಲು ಹಣ ನೀಡುತ್ತಿಲ್ಲ. ಮನೆಗೂ ಬರುತ್ತಿಲ್ಲ. ಹೀಗಿರುವಾಗ, ಆ.14ರಂದು ಮನೆಗೆ ಬಂದು ಮೂರು ಸಲ ತಲಾಖ್‌ ಹೇಳಿ, ವಿಚ್ಛೇದನ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ'' ಎಂದು ದೂರಿನಲ್ಲಿಆಯೇಷಾ ಕೋರಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿಮೊದಲ ತ್ರಿವಳಿ ತಲಾಖ್‌ ಕೇಸ್‌ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ